<p><strong>ಪಾವಗಡ:</strong> ತುಮಕೂರು ರಸ್ತೆಯ ಕಣಿವೆ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.</p>.<p>ಚಂದ್ರಗ್ರಹಣದ ಹಿನ್ನೆಲೆಯಲ್ಲಿ, ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳನ್ನು ಶೀಘ್ರವೇ ಮುಗಿಸಿ ರಥೋತ್ಸವ ಆಚರಣೆಯನ್ನೂ ಬೆಳಿಗ್ಗೆಯೇ ಸಂಪನ್ನಗೊಳಿಸಲಾಯಿತು.</p>.<p>ಸೋಮವಾರ ರಾತ್ರಿ ನಡೆದ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.</p>.<p>ಪಂಚಾಮೃತ ಅಭಿಷೇಕ, ಪ್ರಾಕಾರೋತ್ಸವ, ಅಭಿಷೇಕಾದಿ ಪೂಜಾ ಕಾರ್ಯಕ್ರಮಗಳು ನಡೆದವು. ಅಲಂಕೃತ ಲಕ್ಷ್ಮಿ ನರಸಿಂಹ ಉತ್ಸವ ಮೂರ್ತಿಗಳನ್ನು ಛತ್ರ, ಚಾಮರ, ವಾದ್ಯವೃಂದದೊಂದಿಗೆ ಬಗೆ ಬಗೆಯ ಹೂವುಗಳಿಂದ ಅಲಂಕೃತಗೊಂಡಿದ್ದ ಬ್ರಹ್ಮ ರಥದ ಬಳಿ ಮೆರವಣಿಗೆ ಮೂಲಕ ಕರೆತರಲಾಯಿತು.</p>.<p>ನಂತರ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ತಹಶೀಲ್ದಾರ್ ವೈ.ರವಿ, ಉಪ ತಹಶೀಲ್ದಾರ್ ಪ್ರಸಾದ್ ರಥೋತ್ಸವಕ್ಕೆ ಚಾಲನೆ ನೀಡಿದರು.</p>.<p>ಕೂಡಲೇ ದೇಗುಲದ ಬಳಿ ನೆರೆದಿದ್ದ ಸಹಸ್ರಾರು ಭಕ್ತರು ಲಕ್ಷ್ಮೀ ನಾರಸಿಂಹಾಯ ನಮಃ ಎಂದು ರಥದತ್ತ ಬಾಳೆ ಹಣ್ಣುಗಳನ್ನು ಎಸೆದರು.</p>.<p>ಪೊಲೀಸ್ ಇನ್ಸ್ಪೆಕ್ಟರ್ ಸುರೇಶ್, ಕಂದಾಯ ನಿರೀಕ್ಷಕ ರಾಜಗೋಪಾಲ್, ಕಿರಣ್ ಕುಮಾರ್, ವಿಶ್ವನಾಥ್, ದೇಗುಲ ಪದಾಧಿಕಾರಿಗಳಾದ ಮಾದವನ್, ಶ್ರೀಕೃಷ್ಣ, ವಿ. ಸುಬ್ಬನರಸಿಂಹ, ರಘುನಾಥಶರ್ಮ, ನರಸಿಂಹನಾಯಕ, ಎಸ್.ಎನ್. ನಾಗರಾಜು, ದೇಗುಲದ ಅರ್ಚಕ ನರಸಿಂಹಗೋಪಾಲ್, ಅನಿಲ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ:</strong> ತುಮಕೂರು ರಸ್ತೆಯ ಕಣಿವೆ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.</p>.<p>ಚಂದ್ರಗ್ರಹಣದ ಹಿನ್ನೆಲೆಯಲ್ಲಿ, ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳನ್ನು ಶೀಘ್ರವೇ ಮುಗಿಸಿ ರಥೋತ್ಸವ ಆಚರಣೆಯನ್ನೂ ಬೆಳಿಗ್ಗೆಯೇ ಸಂಪನ್ನಗೊಳಿಸಲಾಯಿತು.</p>.<p>ಸೋಮವಾರ ರಾತ್ರಿ ನಡೆದ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.</p>.<p>ಪಂಚಾಮೃತ ಅಭಿಷೇಕ, ಪ್ರಾಕಾರೋತ್ಸವ, ಅಭಿಷೇಕಾದಿ ಪೂಜಾ ಕಾರ್ಯಕ್ರಮಗಳು ನಡೆದವು. ಅಲಂಕೃತ ಲಕ್ಷ್ಮಿ ನರಸಿಂಹ ಉತ್ಸವ ಮೂರ್ತಿಗಳನ್ನು ಛತ್ರ, ಚಾಮರ, ವಾದ್ಯವೃಂದದೊಂದಿಗೆ ಬಗೆ ಬಗೆಯ ಹೂವುಗಳಿಂದ ಅಲಂಕೃತಗೊಂಡಿದ್ದ ಬ್ರಹ್ಮ ರಥದ ಬಳಿ ಮೆರವಣಿಗೆ ಮೂಲಕ ಕರೆತರಲಾಯಿತು.</p>.<p>ನಂತರ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ತಹಶೀಲ್ದಾರ್ ವೈ.ರವಿ, ಉಪ ತಹಶೀಲ್ದಾರ್ ಪ್ರಸಾದ್ ರಥೋತ್ಸವಕ್ಕೆ ಚಾಲನೆ ನೀಡಿದರು.</p>.<p>ಕೂಡಲೇ ದೇಗುಲದ ಬಳಿ ನೆರೆದಿದ್ದ ಸಹಸ್ರಾರು ಭಕ್ತರು ಲಕ್ಷ್ಮೀ ನಾರಸಿಂಹಾಯ ನಮಃ ಎಂದು ರಥದತ್ತ ಬಾಳೆ ಹಣ್ಣುಗಳನ್ನು ಎಸೆದರು.</p>.<p>ಪೊಲೀಸ್ ಇನ್ಸ್ಪೆಕ್ಟರ್ ಸುರೇಶ್, ಕಂದಾಯ ನಿರೀಕ್ಷಕ ರಾಜಗೋಪಾಲ್, ಕಿರಣ್ ಕುಮಾರ್, ವಿಶ್ವನಾಥ್, ದೇಗುಲ ಪದಾಧಿಕಾರಿಗಳಾದ ಮಾದವನ್, ಶ್ರೀಕೃಷ್ಣ, ವಿ. ಸುಬ್ಬನರಸಿಂಹ, ರಘುನಾಥಶರ್ಮ, ನರಸಿಂಹನಾಯಕ, ಎಸ್.ಎನ್. ನಾಗರಾಜು, ದೇಗುಲದ ಅರ್ಚಕ ನರಸಿಂಹಗೋಪಾಲ್, ಅನಿಲ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>