ಬುಧವಾರ ಬೆಳಿಗ್ಗೆ ಜಮೀನಿಗೆ ನೀರು ಹರಿಸಲು ನಾಗರಾಜ ಬಂದಾಗ, ಸಸಿಗಳನ್ನು ನಾಶ ಮಾಡಿರುವುದು ಕಂಡು ಬಂದಿದೆ. ಸಂಜಯ ಮತ್ತಿತರರ ವಿರುದ್ಧ ನಾಗರಾಜ್ ಕುಣಿಗಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಪಿಎಸ್ಐ ವಿಕಾಸಗೌಡ ಸ್ಥಳ ಪರಿಶೀಲಿಸಿದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅನಂದ ಪಟೇಲ್, ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.