<p><strong>ಹಾಗಲವಾಡಿ: </strong>ಮಂಚಲದೊರೆ ದಟ್ಟಾರಣ್ಯದಲ್ಲಿನ ಲಕ್ಷ್ಮಣ ಕೆರೆ ಈ ಬಾರಿ ಸಂಪೂರ್ಣ ಬತ್ತಿದೆ. ಈ ದಟ್ಟಡವಿಯ ವನ್ಯ ಜೀವಿಗಳಿಗೆ ನೀರಿನ ಮೂಲವಾಗಿದ್ದ ಈ ಕೆರೆ ಒಣಗಿದೆ ಎಂದರೆ ಪ್ರಾಣಿಗಳು ಇನ್ನೂ ಬದುಕಿದ್ದಾವೆಯೇ ಎನ್ನುವುದು ಪ್ರಶ್ನೆಯಾಗಿದೆ.</p>.<p>ಕೆರೆ ಬತ್ತಿರುವುದರಿಂದ ಸಾವಿರಾರು ಎಕರೆ ಅರಣ್ಯದಲ್ಲಿನ ವನ್ಯ ಜೀವಿಗಳು ಹಾಗೂ ಪಕ್ಷಿ ಸಂಕುಲಕ್ಕೆ ನೀರಿನ ಸಮಸ್ಯೆಯಾಗಿದೆ. ಜಿಂಕೆ, ಕರಡಿ, ಮೊಲ, ಕಾಡುಹಂದಿ ಸೇರಿದಂತೆ ವಿವಿಧ ಕಾಡು ಪ್ರಾಣಿಗಳು ಹೆಚ್ಚಾಗಿವೆ. ಅವುಗಳಿಗೆ ಈ ಲಕ್ಷ್ಮಣ ಕೆರೆಯೇ ನೀರಿನ ಮೂಲವಾಗಿತ್ತು.</p>.<p>ಕಾಡಿನಲ್ಲಿರುವ ಬಹುತೇಕ ಕೆರೆ, ಕಟ್ಟೆ, ಗೋಕಟ್ಟೆಗಳು ಒಣಗಿ ಪ್ರಾಣಿಗಳಿಗೆ ನೀರಿನ ಹಾಹಾಕಾರ ಸೃಷ್ಟಿಯಾಗಿದೆ. ಹಾಗಾಗಿ ಪ್ರಾಣಿಗಳು ನೀರು ಅರಸಿ ನಾಡಿನತ್ತ ಮುಖಮಾಡುತ್ತಿವೆ.</p>.<p>ಸಾವಿರಾರು ಎಕರೆ ವಿಸ್ತೀರ್ಣದಲ್ಲಿರುವ ಕಾಡಿನ ಮಧ್ಯೆ ಐದು ಎಕರೆ ವಿಸ್ತೀರ್ಣದ ಲಕ್ಷಣ ಕೆರೆ ಇದೆ. ಎಂದೂ ಬತ್ತದ ಈ ಕೆರೆ, ಈ ಬಾರಿ ಬತ್ತಿರುವುದರಿಂದ ಅಲ್ಲಿನ ಪ್ರಾಣಿ, ಪಕ್ಷಿಗಳ ಸಂಕುಲಕ್ಕೆ ನೀರಿನ ತತ್ವಾರ ಹೆಚ್ಚಿದೆ. ಅಲ್ಲಿನ ಅದೆಷ್ಟೊ ಪ್ರಾಣಿಗಳು ನೀರಿಲ್ಲದೆ ಕಾಡುಬಿಟ್ಟಿರಬಹುದು. ಕಾಡಿನಲ್ಲಿರುವ ಕೆಲ ಪ್ರಾಣಿಗಳು ನಾಡಿಗೆ ಬರುವ ಮೊದಲು ಅರಣ್ಯ ಇಲಾಖೆಯವರು ನೀರಿನ ವ್ಯವಸ್ಥೆ ಮಾಡಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಗಲವಾಡಿ: </strong>ಮಂಚಲದೊರೆ ದಟ್ಟಾರಣ್ಯದಲ್ಲಿನ ಲಕ್ಷ್ಮಣ ಕೆರೆ ಈ ಬಾರಿ ಸಂಪೂರ್ಣ ಬತ್ತಿದೆ. ಈ ದಟ್ಟಡವಿಯ ವನ್ಯ ಜೀವಿಗಳಿಗೆ ನೀರಿನ ಮೂಲವಾಗಿದ್ದ ಈ ಕೆರೆ ಒಣಗಿದೆ ಎಂದರೆ ಪ್ರಾಣಿಗಳು ಇನ್ನೂ ಬದುಕಿದ್ದಾವೆಯೇ ಎನ್ನುವುದು ಪ್ರಶ್ನೆಯಾಗಿದೆ.</p>.<p>ಕೆರೆ ಬತ್ತಿರುವುದರಿಂದ ಸಾವಿರಾರು ಎಕರೆ ಅರಣ್ಯದಲ್ಲಿನ ವನ್ಯ ಜೀವಿಗಳು ಹಾಗೂ ಪಕ್ಷಿ ಸಂಕುಲಕ್ಕೆ ನೀರಿನ ಸಮಸ್ಯೆಯಾಗಿದೆ. ಜಿಂಕೆ, ಕರಡಿ, ಮೊಲ, ಕಾಡುಹಂದಿ ಸೇರಿದಂತೆ ವಿವಿಧ ಕಾಡು ಪ್ರಾಣಿಗಳು ಹೆಚ್ಚಾಗಿವೆ. ಅವುಗಳಿಗೆ ಈ ಲಕ್ಷ್ಮಣ ಕೆರೆಯೇ ನೀರಿನ ಮೂಲವಾಗಿತ್ತು.</p>.<p>ಕಾಡಿನಲ್ಲಿರುವ ಬಹುತೇಕ ಕೆರೆ, ಕಟ್ಟೆ, ಗೋಕಟ್ಟೆಗಳು ಒಣಗಿ ಪ್ರಾಣಿಗಳಿಗೆ ನೀರಿನ ಹಾಹಾಕಾರ ಸೃಷ್ಟಿಯಾಗಿದೆ. ಹಾಗಾಗಿ ಪ್ರಾಣಿಗಳು ನೀರು ಅರಸಿ ನಾಡಿನತ್ತ ಮುಖಮಾಡುತ್ತಿವೆ.</p>.<p>ಸಾವಿರಾರು ಎಕರೆ ವಿಸ್ತೀರ್ಣದಲ್ಲಿರುವ ಕಾಡಿನ ಮಧ್ಯೆ ಐದು ಎಕರೆ ವಿಸ್ತೀರ್ಣದ ಲಕ್ಷಣ ಕೆರೆ ಇದೆ. ಎಂದೂ ಬತ್ತದ ಈ ಕೆರೆ, ಈ ಬಾರಿ ಬತ್ತಿರುವುದರಿಂದ ಅಲ್ಲಿನ ಪ್ರಾಣಿ, ಪಕ್ಷಿಗಳ ಸಂಕುಲಕ್ಕೆ ನೀರಿನ ತತ್ವಾರ ಹೆಚ್ಚಿದೆ. ಅಲ್ಲಿನ ಅದೆಷ್ಟೊ ಪ್ರಾಣಿಗಳು ನೀರಿಲ್ಲದೆ ಕಾಡುಬಿಟ್ಟಿರಬಹುದು. ಕಾಡಿನಲ್ಲಿರುವ ಕೆಲ ಪ್ರಾಣಿಗಳು ನಾಡಿಗೆ ಬರುವ ಮೊದಲು ಅರಣ್ಯ ಇಲಾಖೆಯವರು ನೀರಿನ ವ್ಯವಸ್ಥೆ ಮಾಡಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>