2021ರಲ್ಲಿ ಇದುವರೆಗೂ 14 ಚಿರತೆಗಳು ಬೋನಿಗೆ ಬಿದ್ದಿದೆ. ಎರಡು ಚಿರತೆಗಳು ಅಪರಿಚಿತ ವಾಹನಗಳು ಡಿಕ್ಕಿ ಹೊಡೆದು ಮೃತಪಟ್ಟಿವೆ ಎಂದು ತಿಳಿಸಿರುವ ವಲಯ ಅರಣ್ಯಾಧಿಕಾರಿ ಮಂಜುನಾಥ್, ಕುಣಿಗಲ್ ವಲಯದಲ್ಲಿ ಮೊದಲಿಗೆ ಆರು ಬೋನುಗಳ ಲಭ್ಯತೆ ಇದ್ದರೇ ಪ್ರಸ್ತುತಾ 17 ಬೋನುಗಳು ಇದ್ದು ಚಿರತೆ ಹಾವಳಿಯ ಪ್ರದೇಶಗಳಿಂದ ಗ್ರಾಮಸ್ಥರಿಂದ ಬರುವ ಮನವಿಗೆ ಸ್ಪಂದಿಸಿ ಬೋನುಗಳನ್ನು ಇಟ್ಟು ಚಿರತೆಗಳನ್ನು ಹಿಡಿದು ಸಂರಕ್ಷಿಕ ಅರಣ್ಯಗಳಿಗೆ ರವಾನಿಸಲಾಗುತ್ತಿದೆ. ತಾಲ್ಲೂಕಿನಲ್ಲಿ ಅಂದಾಜು ಇನ್ನು 40ಕ್ಕೂ ಹೆಚ್ಚು ಚಿರತೆಗಳು ಇರಬಹುದು. ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಮನವಿ ಮಾಡಿದ್ದಾರೆ.