ಮಧುಗಿರಿ: ತಾಲ್ಲೂಕಿನ ಕಾರಮರಡಿ ಹಾಗೂ ಗರಣಿ ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ತಡೆಯಲು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್ ಜಿ.ವಿಶ್ವನಾಥ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನರು ಭಯಭೀತರಾಗುವುದು ಬೇಡ. ಅರಣ್ಯ ಇಲಾಖೆಯ ಅಧಿಕಾರಿಗಳು ನಿತ್ಯ ಗಸ್ತಿನಲ್ಲಿದ್ದಾರೆ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಮನವಿ ಮಾಡಿದರು.
ವಲಯ ಅರಣ್ಯಾಧಿಕಾರಿ ವಾಸದೇವಮೂರ್ತಿ ಮಾತನಾಡಿ, ಕಾರಮರಡಿ ಗ್ರಾಮದ ಬೆಟ್ಟದಲ್ಲಿ 5 ಚಿರತೆಗಳು ವಾಸವಾಗಿರುವ ಮಾಹಿತಿ ಇದೆ. ಅವುಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ಈ ಗ್ರಾಮಗಳಲ್ಲಿ ಚಿರತೆ ಬಗ್ಗೆ ಅರಿವು ಮೂಡಿಸಲಾಗುವುದು.
ಚಿರತೆ ಗಳನ್ನು ಸೆರೆ ಹಿಡಿಯಲು ಬೋನ್ಗಳನ್ನು ಇಡಲಾಗುವುದು. ಗ್ರಾಮಸ್ಥರು ಮನೆಯ ಮುಂಭಾಗ ರಾತ್ರಿ ಸಮಯದಲ್ಲಿ ಬುರುಡೆ ಲೈಟ್ಗಳನ್ನು ಹಾಕಿ ಎಂದು ಮನವಿ ಮಾಡಿದರು.