<p><strong>ಮಧುಗಿರಿ: </strong>ತಾಲ್ಲೂಕಿನ ಕಾರಮರಡಿ ಹಾಗೂ ಗರಣಿ ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ತಡೆಯಲು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್ ಜಿ.ವಿಶ್ವನಾಥ್ ತಿಳಿಸಿದರು.</p>.<p>ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನರು ಭಯಭೀತರಾಗುವುದು<br />ಬೇಡ. ಅರಣ್ಯ ಇಲಾಖೆಯ ಅಧಿಕಾರಿಗಳು ನಿತ್ಯ ಗಸ್ತಿನಲ್ಲಿದ್ದಾರೆ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಮನವಿ ಮಾಡಿದರು.</p>.<p>ವಲಯ ಅರಣ್ಯಾಧಿಕಾರಿ ವಾಸದೇವಮೂರ್ತಿ ಮಾತನಾಡಿ, ಕಾರಮರಡಿ ಗ್ರಾಮದ ಬೆಟ್ಟದಲ್ಲಿ 5 ಚಿರತೆಗಳು ವಾಸವಾಗಿರುವ ಮಾಹಿತಿ ಇದೆ. ಅವುಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ಈ ಗ್ರಾಮಗಳಲ್ಲಿ ಚಿರತೆ ಬಗ್ಗೆ<br />ಅರಿವು ಮೂಡಿಸಲಾಗುವುದು.</p>.<p>ಚಿರತೆ ಗಳನ್ನು ಸೆರೆ ಹಿಡಿಯಲು ಬೋನ್ಗಳನ್ನು ಇಡಲಾಗುವುದು. ಗ್ರಾಮಸ್ಥರು ಮನೆಯ ಮುಂಭಾಗ ರಾತ್ರಿ ಸಮಯದಲ್ಲಿ ಬುರುಡೆ ಲೈಟ್ಗಳನ್ನು ಹಾಕಿ ಎಂದು ಮನವಿ ಮಾಡಿದರು.</p>.<p>ಆಹಾರ ಶಿರಸ್ತೇದಾರ್ ಗಣೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಧುಗಿರಿ: </strong>ತಾಲ್ಲೂಕಿನ ಕಾರಮರಡಿ ಹಾಗೂ ಗರಣಿ ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ತಡೆಯಲು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್ ಜಿ.ವಿಶ್ವನಾಥ್ ತಿಳಿಸಿದರು.</p>.<p>ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನರು ಭಯಭೀತರಾಗುವುದು<br />ಬೇಡ. ಅರಣ್ಯ ಇಲಾಖೆಯ ಅಧಿಕಾರಿಗಳು ನಿತ್ಯ ಗಸ್ತಿನಲ್ಲಿದ್ದಾರೆ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಮನವಿ ಮಾಡಿದರು.</p>.<p>ವಲಯ ಅರಣ್ಯಾಧಿಕಾರಿ ವಾಸದೇವಮೂರ್ತಿ ಮಾತನಾಡಿ, ಕಾರಮರಡಿ ಗ್ರಾಮದ ಬೆಟ್ಟದಲ್ಲಿ 5 ಚಿರತೆಗಳು ವಾಸವಾಗಿರುವ ಮಾಹಿತಿ ಇದೆ. ಅವುಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ಈ ಗ್ರಾಮಗಳಲ್ಲಿ ಚಿರತೆ ಬಗ್ಗೆ<br />ಅರಿವು ಮೂಡಿಸಲಾಗುವುದು.</p>.<p>ಚಿರತೆ ಗಳನ್ನು ಸೆರೆ ಹಿಡಿಯಲು ಬೋನ್ಗಳನ್ನು ಇಡಲಾಗುವುದು. ಗ್ರಾಮಸ್ಥರು ಮನೆಯ ಮುಂಭಾಗ ರಾತ್ರಿ ಸಮಯದಲ್ಲಿ ಬುರುಡೆ ಲೈಟ್ಗಳನ್ನು ಹಾಕಿ ಎಂದು ಮನವಿ ಮಾಡಿದರು.</p>.<p>ಆಹಾರ ಶಿರಸ್ತೇದಾರ್ ಗಣೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>