<p>ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಂದನಕೆರೆ ಹಾಗೂ ಕಂದಿಕೆರೆ ರೈತ ಸಂಪರ್ಕ ಕೇಂದ್ರದಲ್ಲಿ ಟಾರ್ಪಲ್ಗಾಗಿ ಬೆಳಗ್ಗೆ 7 ಗಂಟೆಯಿಂದಲೇ ರೈತರು ಕೋವಿಡ್ ಮಾರ್ಗಸೂಚಿ ಮರೆತು ಸಾಲಿನಲ್ಲಿ ನಿಂತಿದ್ದರು.</p>.<p>ಕಳೆದ ಎರಡು ದಿನಗಳಿಂದಲೂ ತಾಲ್ಲೂಕಿನ ಹೋಬಳಿಗಳ ರೈತಸಂಪರ್ಕ ಕೇಂದ್ರಗಳಲ್ಲಿ ಟಾರ್ಪಲ್ ವಿತರಣೆ ಮಾಡಲಾಗುತ್ತಿತ್ತು. ಗುರುವಾರ ಕೂಡ ವಿತರಣೆ ಮುಂದುವರೆದಿದ್ದು<br />ಕಂದಿಕೆರೆ ಹಾಗೂ ಹಂದನಕೆರೆ<br />ರೈತ ಸಂಪರ್ಕ ಕೇಂದ್ರಗಳು ಬಾಗಿಲು ತೆಗೆಯುವ ಮುಂಚೆಯೇ ಕಾದು ನಿಂತಿದ್ದರು. ಟಾರ್ಪಲ್ಗಿಂತ ಸರದಿ ಸಾಲಿನ ರೈತರ ಸಂಖ್ಯೆ ಹೆಚ್ಚಿದ್ದು,<br />ರೈತರು ಟಾರ್ಪಲ್ ಸಿಗುವುದೊ, ಇಲ್ಲವೋ ಎಂಬ<br />ಧಾವಂತದಲ್ಲಿದ್ದರು.</p>.<p>ಈ ಬಾರಿ ರೈತರಿಗೆ ವಿತರಣೆ ಮಾಡುವ ಟಾರ್ಪಲ್ಗಳು ಮೂರರಷ್ಟು ಹೆಚ್ಚಿಸಲಾಗಿದೆ. ಪ್ರತಿ ರೈತ<br />ಸಂಪರ್ಕಗಳಿಗೆ 800ಕ್ಕೂ ಹೆಚ್ಚು ಟಾರ್ಪಲ್ಗಳು ಬಂದಿದ್ದು ರೈತರು<br />ಹೆಚ್ಚು ಇರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಪೊಲೀಸರ ಸಮ್ಮುಖದಲ್ಲಿ ಟೋಕನ್ ವಿತರಣೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಿ.ಆರ್.ಹನುಮಂತರಾಜು<br />ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಂದನಕೆರೆ ಹಾಗೂ ಕಂದಿಕೆರೆ ರೈತ ಸಂಪರ್ಕ ಕೇಂದ್ರದಲ್ಲಿ ಟಾರ್ಪಲ್ಗಾಗಿ ಬೆಳಗ್ಗೆ 7 ಗಂಟೆಯಿಂದಲೇ ರೈತರು ಕೋವಿಡ್ ಮಾರ್ಗಸೂಚಿ ಮರೆತು ಸಾಲಿನಲ್ಲಿ ನಿಂತಿದ್ದರು.</p>.<p>ಕಳೆದ ಎರಡು ದಿನಗಳಿಂದಲೂ ತಾಲ್ಲೂಕಿನ ಹೋಬಳಿಗಳ ರೈತಸಂಪರ್ಕ ಕೇಂದ್ರಗಳಲ್ಲಿ ಟಾರ್ಪಲ್ ವಿತರಣೆ ಮಾಡಲಾಗುತ್ತಿತ್ತು. ಗುರುವಾರ ಕೂಡ ವಿತರಣೆ ಮುಂದುವರೆದಿದ್ದು<br />ಕಂದಿಕೆರೆ ಹಾಗೂ ಹಂದನಕೆರೆ<br />ರೈತ ಸಂಪರ್ಕ ಕೇಂದ್ರಗಳು ಬಾಗಿಲು ತೆಗೆಯುವ ಮುಂಚೆಯೇ ಕಾದು ನಿಂತಿದ್ದರು. ಟಾರ್ಪಲ್ಗಿಂತ ಸರದಿ ಸಾಲಿನ ರೈತರ ಸಂಖ್ಯೆ ಹೆಚ್ಚಿದ್ದು,<br />ರೈತರು ಟಾರ್ಪಲ್ ಸಿಗುವುದೊ, ಇಲ್ಲವೋ ಎಂಬ<br />ಧಾವಂತದಲ್ಲಿದ್ದರು.</p>.<p>ಈ ಬಾರಿ ರೈತರಿಗೆ ವಿತರಣೆ ಮಾಡುವ ಟಾರ್ಪಲ್ಗಳು ಮೂರರಷ್ಟು ಹೆಚ್ಚಿಸಲಾಗಿದೆ. ಪ್ರತಿ ರೈತ<br />ಸಂಪರ್ಕಗಳಿಗೆ 800ಕ್ಕೂ ಹೆಚ್ಚು ಟಾರ್ಪಲ್ಗಳು ಬಂದಿದ್ದು ರೈತರು<br />ಹೆಚ್ಚು ಇರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಪೊಲೀಸರ ಸಮ್ಮುಖದಲ್ಲಿ ಟೋಕನ್ ವಿತರಣೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಿ.ಆರ್.ಹನುಮಂತರಾಜು<br />ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>