<p><strong>ಪಾವಗಡ:</strong> ಸ್ಥಳೀಯ ಇತಿಹಾಸದ ಅಧ್ಯಯನ ಪೂರ್ಣವಾಗದಿದ್ದರೆ ರಾಷ್ಟ್ರೀಯ ಇತಿಹಾಸ ಕಟ್ಟಲು ಸಾಧ್ಯವಿಲ್ಲ ಎಂದು ಸಂಶೋಧಕ ಡಿ.ಎನ್.ಯೋಗೀಶ್ವರಪ್ಪ ತಿಳಿಸಿದರು.</p>.<p>ತಾಲ್ಲೂಕಿನ ಅರಸೀಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ‘ನಿಡುಗಲ್ಲು ಸೀಮೆಯ ಅರಸೀಕೆರೆ’ ಕೃತಿ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸ್ಥಳೀಯ ಐತಿಹಾಸಿಕ ಅಂಶಗಳು ರಾಷ್ಟ್ರೀಯ ಇತಿಹಾಸಕ್ಕೆ ಪೂರಕವಾಗಿರುತ್ತವೆ. ಸೂಕ್ಷ್ಮ ತರಹದ ಅಧ್ಯಯನಗಳು ಇಂದಿನ ದಿನಮಾನಗಳಲ್ಲಿ ಅವಶ್ಯಕ. ಸೂಕ್ಷ್ಮ ಅಧ್ಯಯನಗಳಲ್ಲಿ ಸಂಶೋಧಕ ಆಕರಗಳ ಸಮಸ್ಯೆ, ಕತೆ ಕವನ ಇತ್ಯಾದಿ ಮೌಖಿಕ ಸಾಹಿತ್ಯದಿಂದ ಐತಿಹಾಸಿಕ ಅಂಶಗಳನ್ನು ಹೆಕ್ಕಿ ತೆಗೆಯುವ ಸಮಸ್ಯೆಗಳಿಗೆ ಗುರಿಯಾಗುವುದು ಸಹಜ. ಆದಾಗ್ಯೂ ಅವುಗಳನ್ನು ಮೀರಿ ನಿಖರ ವಿಷಯಗಳನ್ನು ಕಟ್ಟಿಕೊಡುವವರೆ ಸಂಶೋಧಕರು ಎಂದರು.</p>.<p>ಹೊ.ಮ.ನಾಗರಾಜು ಅವರ ‘ನಿಡುಗಲ್ಲು ಸೀಮೆಯ ಅರಸೀಕೆರೆ’ ಕೃತಿಯಲ್ಲಿ ಸ್ಥಳೀಯ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತಾಲ್ಲೂಕು ಇತಿಹಾಸ ಸಂಶೋದಕರಿಗೆ ಮಾಹಿತಿ ಕಣಜ ಇದ್ದಂತೆ. ಆದರೆ ಸಂಶೋದನೆಯ ಆಸಕ್ತರ ಸಂಖ್ಯೆ ಕಡಿಮೆ ಇದೆ. ಇತ್ತೀಚಿನ ಯುವ ಸಂಶೋಧಕರು ವಿಶ್ವವಿದ್ಯಾಲಯದ ಉದ್ದೇಶಕ್ಕಾಗಿ ಸಂಶೋಧನೆ ಚಟುವಟಿಕೆಗಳನ್ನು ಮಾಡುತ್ತಿದ್ದು, ಬಹುತೇಕ ಕಾಪಿ, ಪೇಸ್ಟ್ ಮಾಡುವುದರಲ್ಲಿ ಮುಳುಗಿದ್ದಾರೆ. ಅಂತಹವರಿಂದ ನೈಜ ಇತಿಹಾಸ ಹೊರಬರಲು ಸಾಧ್ಯವಿಲ್ಲ. ಯುವ ಸಂಶೋದಕರು ಕ್ಷೇತ್ರ ಕಾರ್ಯದ ಮೂಲಕ ಸಾಗಬೇಕು ಎಂದರು.</p>.<p>ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟನರಸಿಂಹಮೂರ್ತಿ ಮಾತನಾಡಿ, ಒಂದು ಗ್ರಾಮಕ್ಕೆ ಸಂಬಂಧಿಸಿದ ಇತಿಹಾಸ, ಧರ್ಮ, ಸಂಸ್ಕೃತಿ, ಜಾನಪದ, ಅಂಕಿ ಅಂಶಗಳಾದಿಯಾಗಿ ಗ್ರಾಮಕ್ಕೆ ಸಂಬಂಧಿಸಿದ ಸಮಗ್ರ ವಿಷಯವನ್ನು ಒಳಗೊಂಡ ಕೃತಿಯನ್ನು ಕಟ್ಟಿಕೊಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಗ್ರಾಮದ ಗಲ್ಲೆಬಾನ ಆಚರಣೆ, ಗಂಟೆಬಟ್ಲು ಸಂಪ್ರದಾಯ, ಬಸವಣ್ಣ, ಗುಜ್ಜಾರಪ್ಪ ಜಾತ್ರೆ ರಥೋತ್ಸವ, ಹಂಪಣ್ಣನ ಕೆರೆಯಲ್ಲಿ ಸಮಾರಾಧನೆ, ತಾಯಿ ಮುದ್ದಮ್ಮ ವೀರನಾಗಪ್ಪ ದಸರಾ ಉತ್ಸವ, ಭೂತಪ್ಪನ ಕವಳಸೇವೆ, ಶನಿಮಹಾತ್ಮಸ್ವಾಮಿ ಕತೆ ಓದಿಸುವ ಸಂಪ್ರದಾಯ ಇತ್ಯಾದಿಗಳನ್ನು ಕೃತಿಯಲ್ಲಿ ಕಟ್ಟಿಕೊಡಲಾಗಿದೆ ಎಂದು ತಿಳಿಸಿದರು.</p>.<p>ಲೇಖಕ ಹೊ.ಮ.ನಾಗರಾಜು ಮಾತನಾಡಿ, ಅರಸೀಕೆರೆ ಸಾವಿರ ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿದೆ. ಇಲ್ಲಿ ಕೋಟೆ, ಕೊತ್ತಲು, ವೀರಗಲ್ಲು, ಶಾಸನ ದೇವಾಲಯ ಇತ್ಯಾದಿ ಅವಶೇಷಗಳು ಕಂಡುಬರುತ್ತಿವೆ. ಮೂರು ವರ್ಷ ಕ್ಷೇತ್ರಕಾರ್ಯ ಮತ್ತು ಮಾಹಿತಿ ಸಂಗ್ರಹ ಮಾಡಿ ಕೃತಿ ರಚಿಸಲಾಗಿದೆ ಎಂದರು.</p>.<p>ನಿವೃತ್ತ ಸಾರಿಗೆ ಇಲಾಖೆ ಅಧಿಕಾರಿ ಬಿ. ತಿಪ್ಪೇಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಐ.ಎ.ನಾರಾಯಣಪ್ಪ, ಸಿದ್ದಲಿಂಗಪ್ಪ, ಲೋಕೇಶ್ ಪಾಳೇಗಾರ್, ಅ.ಮು.ತಿಪ್ಪೇಸ್ವಾಮಿ, ರೇಣುಕಾ ರಾಜ್, ಚನ್ನಮಲ್ಲಿಕಾರ್ಜುನ ಮಾತನಾಡಿದರು.</p>.<p>ವಿಕಾಸ್ ಪ್ರಕಾಶನದ ಎನ್.ಈಶ್ವರಪ್ಪ ಹಾಗೂ ಸಾಕಮ್ಮ, ಲಕ್ಷ್ಮಿದೇವಮ್ಮ, ಬೀದಿಮನೆ ಬಸಪ್ಪ, ಆನಂದ, ನಿಂಗಪ್ಪ ಅವರನ್ನು ಸತ್ಕರಿಸಲಾಯಿತು.</p>.<p>ಮುಖ್ಯಶಿಕ್ಷಕ ಎಚ್.ಸಿದ್ದೇಶ್ವರ, ಎಸ್ಡಿಎಸ್ಸಿ ಅಧ್ಯಕ್ಷ ಸತೀಶ್ ಕುಮಾರ್, ರಾಜಣ್ಣ, ದೊಡ್ಡಣ್ಣ, ಬಸವರಾಜಪ್ಪ, ಮಿಲ್ಟ್ರಿ ಹನುಮಂತರಾಯಪ್ಪ, ರಮೇಶ, ರಘುನಂದನ್, ಎ.ಪಿ.ಮಲ್ಲಿಕಾರ್ಜುನ, ಬ್ಯಾಡನೂರು ಚನ್ನಬಸಣ್ಣ, ಎಒ ನಾಗರಾಜು, ರಾಮಲಿಂಗಪ್ಪ, ಆರ್.ಎನ್.ಲಿಂಗಪ್ಪ, ಚಂದ್ರಣ್ಣ ಎಂ., ಮಂಜುನಾಥ ಶಾಸ್ತ್ರಿ, ಹರಿಕೃಷ್ಣ ಪಿ., ಮಲ್ಲೇಶಪ್ಪ, ಎ.ಮಾರಣ್ಣ, ಅಶ್ವಥನಾರಾಯಣ, ಶಿಕ್ಷಕರಾದ ಶಿವಗಂಗಮ್ಮ, ಗಾಯಿತ್ರಿ ಆರ್., ಚಂದ್ರಮೌಳಿ, ಕವಿತ, ಯಶ್ವಂತ್ ನಾಯ್ಕ, ಸುಧಾ ವಿ., ವಿಮಲ, ಅನಂತಯ್ಯ, ಸತ್ಯನಾರಾಯಣ ಚಾರಿ, ಶ್ರೀದೇವಿ, ಲಕ್ಷ್ಮಿದೇವಿ, ತಿಮ್ಮೋಜಮ್ಮ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ:</strong> ಸ್ಥಳೀಯ ಇತಿಹಾಸದ ಅಧ್ಯಯನ ಪೂರ್ಣವಾಗದಿದ್ದರೆ ರಾಷ್ಟ್ರೀಯ ಇತಿಹಾಸ ಕಟ್ಟಲು ಸಾಧ್ಯವಿಲ್ಲ ಎಂದು ಸಂಶೋಧಕ ಡಿ.ಎನ್.ಯೋಗೀಶ್ವರಪ್ಪ ತಿಳಿಸಿದರು.</p>.<p>ತಾಲ್ಲೂಕಿನ ಅರಸೀಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ‘ನಿಡುಗಲ್ಲು ಸೀಮೆಯ ಅರಸೀಕೆರೆ’ ಕೃತಿ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸ್ಥಳೀಯ ಐತಿಹಾಸಿಕ ಅಂಶಗಳು ರಾಷ್ಟ್ರೀಯ ಇತಿಹಾಸಕ್ಕೆ ಪೂರಕವಾಗಿರುತ್ತವೆ. ಸೂಕ್ಷ್ಮ ತರಹದ ಅಧ್ಯಯನಗಳು ಇಂದಿನ ದಿನಮಾನಗಳಲ್ಲಿ ಅವಶ್ಯಕ. ಸೂಕ್ಷ್ಮ ಅಧ್ಯಯನಗಳಲ್ಲಿ ಸಂಶೋಧಕ ಆಕರಗಳ ಸಮಸ್ಯೆ, ಕತೆ ಕವನ ಇತ್ಯಾದಿ ಮೌಖಿಕ ಸಾಹಿತ್ಯದಿಂದ ಐತಿಹಾಸಿಕ ಅಂಶಗಳನ್ನು ಹೆಕ್ಕಿ ತೆಗೆಯುವ ಸಮಸ್ಯೆಗಳಿಗೆ ಗುರಿಯಾಗುವುದು ಸಹಜ. ಆದಾಗ್ಯೂ ಅವುಗಳನ್ನು ಮೀರಿ ನಿಖರ ವಿಷಯಗಳನ್ನು ಕಟ್ಟಿಕೊಡುವವರೆ ಸಂಶೋಧಕರು ಎಂದರು.</p>.<p>ಹೊ.ಮ.ನಾಗರಾಜು ಅವರ ‘ನಿಡುಗಲ್ಲು ಸೀಮೆಯ ಅರಸೀಕೆರೆ’ ಕೃತಿಯಲ್ಲಿ ಸ್ಥಳೀಯ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತಾಲ್ಲೂಕು ಇತಿಹಾಸ ಸಂಶೋದಕರಿಗೆ ಮಾಹಿತಿ ಕಣಜ ಇದ್ದಂತೆ. ಆದರೆ ಸಂಶೋದನೆಯ ಆಸಕ್ತರ ಸಂಖ್ಯೆ ಕಡಿಮೆ ಇದೆ. ಇತ್ತೀಚಿನ ಯುವ ಸಂಶೋಧಕರು ವಿಶ್ವವಿದ್ಯಾಲಯದ ಉದ್ದೇಶಕ್ಕಾಗಿ ಸಂಶೋಧನೆ ಚಟುವಟಿಕೆಗಳನ್ನು ಮಾಡುತ್ತಿದ್ದು, ಬಹುತೇಕ ಕಾಪಿ, ಪೇಸ್ಟ್ ಮಾಡುವುದರಲ್ಲಿ ಮುಳುಗಿದ್ದಾರೆ. ಅಂತಹವರಿಂದ ನೈಜ ಇತಿಹಾಸ ಹೊರಬರಲು ಸಾಧ್ಯವಿಲ್ಲ. ಯುವ ಸಂಶೋದಕರು ಕ್ಷೇತ್ರ ಕಾರ್ಯದ ಮೂಲಕ ಸಾಗಬೇಕು ಎಂದರು.</p>.<p>ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟನರಸಿಂಹಮೂರ್ತಿ ಮಾತನಾಡಿ, ಒಂದು ಗ್ರಾಮಕ್ಕೆ ಸಂಬಂಧಿಸಿದ ಇತಿಹಾಸ, ಧರ್ಮ, ಸಂಸ್ಕೃತಿ, ಜಾನಪದ, ಅಂಕಿ ಅಂಶಗಳಾದಿಯಾಗಿ ಗ್ರಾಮಕ್ಕೆ ಸಂಬಂಧಿಸಿದ ಸಮಗ್ರ ವಿಷಯವನ್ನು ಒಳಗೊಂಡ ಕೃತಿಯನ್ನು ಕಟ್ಟಿಕೊಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಗ್ರಾಮದ ಗಲ್ಲೆಬಾನ ಆಚರಣೆ, ಗಂಟೆಬಟ್ಲು ಸಂಪ್ರದಾಯ, ಬಸವಣ್ಣ, ಗುಜ್ಜಾರಪ್ಪ ಜಾತ್ರೆ ರಥೋತ್ಸವ, ಹಂಪಣ್ಣನ ಕೆರೆಯಲ್ಲಿ ಸಮಾರಾಧನೆ, ತಾಯಿ ಮುದ್ದಮ್ಮ ವೀರನಾಗಪ್ಪ ದಸರಾ ಉತ್ಸವ, ಭೂತಪ್ಪನ ಕವಳಸೇವೆ, ಶನಿಮಹಾತ್ಮಸ್ವಾಮಿ ಕತೆ ಓದಿಸುವ ಸಂಪ್ರದಾಯ ಇತ್ಯಾದಿಗಳನ್ನು ಕೃತಿಯಲ್ಲಿ ಕಟ್ಟಿಕೊಡಲಾಗಿದೆ ಎಂದು ತಿಳಿಸಿದರು.</p>.<p>ಲೇಖಕ ಹೊ.ಮ.ನಾಗರಾಜು ಮಾತನಾಡಿ, ಅರಸೀಕೆರೆ ಸಾವಿರ ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿದೆ. ಇಲ್ಲಿ ಕೋಟೆ, ಕೊತ್ತಲು, ವೀರಗಲ್ಲು, ಶಾಸನ ದೇವಾಲಯ ಇತ್ಯಾದಿ ಅವಶೇಷಗಳು ಕಂಡುಬರುತ್ತಿವೆ. ಮೂರು ವರ್ಷ ಕ್ಷೇತ್ರಕಾರ್ಯ ಮತ್ತು ಮಾಹಿತಿ ಸಂಗ್ರಹ ಮಾಡಿ ಕೃತಿ ರಚಿಸಲಾಗಿದೆ ಎಂದರು.</p>.<p>ನಿವೃತ್ತ ಸಾರಿಗೆ ಇಲಾಖೆ ಅಧಿಕಾರಿ ಬಿ. ತಿಪ್ಪೇಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಐ.ಎ.ನಾರಾಯಣಪ್ಪ, ಸಿದ್ದಲಿಂಗಪ್ಪ, ಲೋಕೇಶ್ ಪಾಳೇಗಾರ್, ಅ.ಮು.ತಿಪ್ಪೇಸ್ವಾಮಿ, ರೇಣುಕಾ ರಾಜ್, ಚನ್ನಮಲ್ಲಿಕಾರ್ಜುನ ಮಾತನಾಡಿದರು.</p>.<p>ವಿಕಾಸ್ ಪ್ರಕಾಶನದ ಎನ್.ಈಶ್ವರಪ್ಪ ಹಾಗೂ ಸಾಕಮ್ಮ, ಲಕ್ಷ್ಮಿದೇವಮ್ಮ, ಬೀದಿಮನೆ ಬಸಪ್ಪ, ಆನಂದ, ನಿಂಗಪ್ಪ ಅವರನ್ನು ಸತ್ಕರಿಸಲಾಯಿತು.</p>.<p>ಮುಖ್ಯಶಿಕ್ಷಕ ಎಚ್.ಸಿದ್ದೇಶ್ವರ, ಎಸ್ಡಿಎಸ್ಸಿ ಅಧ್ಯಕ್ಷ ಸತೀಶ್ ಕುಮಾರ್, ರಾಜಣ್ಣ, ದೊಡ್ಡಣ್ಣ, ಬಸವರಾಜಪ್ಪ, ಮಿಲ್ಟ್ರಿ ಹನುಮಂತರಾಯಪ್ಪ, ರಮೇಶ, ರಘುನಂದನ್, ಎ.ಪಿ.ಮಲ್ಲಿಕಾರ್ಜುನ, ಬ್ಯಾಡನೂರು ಚನ್ನಬಸಣ್ಣ, ಎಒ ನಾಗರಾಜು, ರಾಮಲಿಂಗಪ್ಪ, ಆರ್.ಎನ್.ಲಿಂಗಪ್ಪ, ಚಂದ್ರಣ್ಣ ಎಂ., ಮಂಜುನಾಥ ಶಾಸ್ತ್ರಿ, ಹರಿಕೃಷ್ಣ ಪಿ., ಮಲ್ಲೇಶಪ್ಪ, ಎ.ಮಾರಣ್ಣ, ಅಶ್ವಥನಾರಾಯಣ, ಶಿಕ್ಷಕರಾದ ಶಿವಗಂಗಮ್ಮ, ಗಾಯಿತ್ರಿ ಆರ್., ಚಂದ್ರಮೌಳಿ, ಕವಿತ, ಯಶ್ವಂತ್ ನಾಯ್ಕ, ಸುಧಾ ವಿ., ವಿಮಲ, ಅನಂತಯ್ಯ, ಸತ್ಯನಾರಾಯಣ ಚಾರಿ, ಶ್ರೀದೇವಿ, ಲಕ್ಷ್ಮಿದೇವಿ, ತಿಮ್ಮೋಜಮ್ಮ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>