<p><strong>ಕೊರಟಗೆರೆ</strong>: ಪಟ್ಟಣದ ಕೋಟೆ ಮಾರಮ್ಮ, ಕೊಲ್ಲಾಪುರದಮ್ಮ ಗ್ರಾಮ ದೇವತೆ ಜಾತ್ರಾ ಮಹೋತ್ಸವ ಮಂಗಳವಾರದಿಂದ ಆರಂಭವಾಗಿದ್ದು, ಶುಕ್ರವಾರ ಕೊನೆಯಾಗಲಿದೆ.</p>.<p>ಪ್ರತಿ ವರ್ಷ ಆಷಾಢ ಮಾಸದಲ್ಲಿ ಮೂರು ದಿನ ನಡೆಯುವ ಮಾರಮ್ಮನ ಜಾತ್ರೆಯನ್ನು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ.</p>.<p>ಪ್ರತಿನಿತ್ಯ ಸಾಂಪ್ರದಾಯಿಕ ಉತ್ಸವ, ತಂಬಿಟ್ಟಿನ ಆರತಿ ಹೊತ್ತು ತಂದು ಬೆಳಗುವರು.</p>.<p>ಜಾತ್ರೆಗೂ ಒಂದು ತಿಂಗಳ ಮುಂಚಿತವಾಗಿ ಊರಿನ ಗೌಡರು, ಶಾನುಭೋಗರು, ತೋಟಿ ತಳವಾರರ ಸಮ್ಮುಖದಲ್ಲಿ ಹಲವು ಸಾಂಪ್ರದಾಯಿಕ ಆಚರಣೆ ಮೂಲಕ ಜೇಡಿ ಮಣ್ಣನ್ನು ಪೂಜಾರರ ಮನೆಗೆ ತರಲಾಗುತ್ತದೆ. ಆ ಮಣ್ಣಿನಿಂದ ಪೂಜಾರರು ಮಾರಮ್ಮನ ಮೂರ್ತಿ ಮಾಡುತ್ತಾರೆ. ಜಾತ್ರೆ ಪ್ರಾರಂಭದ ದಿನ ಮಾರಮ್ಮನ ಮೂರ್ತಿಗೆ ಕಣ್ಣಿಟ್ಟು ಜೀವ ಕಳೆ ತುಂಬುತ್ತಾರೆ.</p>.<p>ಮೂರು ದಿನ ವಿವಿಧ ಉತ್ಸವಗಳು ನಡೆಯುತ್ತವೆ. ಕೊನೆ ದಿನ ಮಾರಮ್ಮ ದೇವಿಗೆ ವಿಶೇಷ ಪೂಜೆ, ಬಲಿ ಕೊಟ್ಟು ಊರ ಹೊರಗೆ ಸಾಗಾಕಿ ಬರುತ್ತಾರೆ.</p>.<p>ಅರ್ಚಕರಾದ ಶ್ರೀಧರಾಚಾರ್, ದೀಲಿಪ್, ಹರೀಶ್, ಅಶ್ವತ್ಥನಾರಾಯಣಚಾರ್, ಗೌಡರು, ಮುರಳಿ, ಪಣೆಗಾರ್ ಮಾರುತಿ ನಾಯಕ್, ತಳವಾರ್ ಲಕ್ಷೀಪತಿ, ಶೇರುದಾರರು, ಕೈವಾಡದವರು ಹಾಗೂ ತೊಟಿಗಳು, ದೇವಾಲಯದ ಧರ್ಮದರ್ಶಿಗಳು ಜಾತ್ರೆಯಲ್ಲಿ ಪಾಲ್ಗೊಳ್ಳುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊರಟಗೆರೆ</strong>: ಪಟ್ಟಣದ ಕೋಟೆ ಮಾರಮ್ಮ, ಕೊಲ್ಲಾಪುರದಮ್ಮ ಗ್ರಾಮ ದೇವತೆ ಜಾತ್ರಾ ಮಹೋತ್ಸವ ಮಂಗಳವಾರದಿಂದ ಆರಂಭವಾಗಿದ್ದು, ಶುಕ್ರವಾರ ಕೊನೆಯಾಗಲಿದೆ.</p>.<p>ಪ್ರತಿ ವರ್ಷ ಆಷಾಢ ಮಾಸದಲ್ಲಿ ಮೂರು ದಿನ ನಡೆಯುವ ಮಾರಮ್ಮನ ಜಾತ್ರೆಯನ್ನು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ.</p>.<p>ಪ್ರತಿನಿತ್ಯ ಸಾಂಪ್ರದಾಯಿಕ ಉತ್ಸವ, ತಂಬಿಟ್ಟಿನ ಆರತಿ ಹೊತ್ತು ತಂದು ಬೆಳಗುವರು.</p>.<p>ಜಾತ್ರೆಗೂ ಒಂದು ತಿಂಗಳ ಮುಂಚಿತವಾಗಿ ಊರಿನ ಗೌಡರು, ಶಾನುಭೋಗರು, ತೋಟಿ ತಳವಾರರ ಸಮ್ಮುಖದಲ್ಲಿ ಹಲವು ಸಾಂಪ್ರದಾಯಿಕ ಆಚರಣೆ ಮೂಲಕ ಜೇಡಿ ಮಣ್ಣನ್ನು ಪೂಜಾರರ ಮನೆಗೆ ತರಲಾಗುತ್ತದೆ. ಆ ಮಣ್ಣಿನಿಂದ ಪೂಜಾರರು ಮಾರಮ್ಮನ ಮೂರ್ತಿ ಮಾಡುತ್ತಾರೆ. ಜಾತ್ರೆ ಪ್ರಾರಂಭದ ದಿನ ಮಾರಮ್ಮನ ಮೂರ್ತಿಗೆ ಕಣ್ಣಿಟ್ಟು ಜೀವ ಕಳೆ ತುಂಬುತ್ತಾರೆ.</p>.<p>ಮೂರು ದಿನ ವಿವಿಧ ಉತ್ಸವಗಳು ನಡೆಯುತ್ತವೆ. ಕೊನೆ ದಿನ ಮಾರಮ್ಮ ದೇವಿಗೆ ವಿಶೇಷ ಪೂಜೆ, ಬಲಿ ಕೊಟ್ಟು ಊರ ಹೊರಗೆ ಸಾಗಾಕಿ ಬರುತ್ತಾರೆ.</p>.<p>ಅರ್ಚಕರಾದ ಶ್ರೀಧರಾಚಾರ್, ದೀಲಿಪ್, ಹರೀಶ್, ಅಶ್ವತ್ಥನಾರಾಯಣಚಾರ್, ಗೌಡರು, ಮುರಳಿ, ಪಣೆಗಾರ್ ಮಾರುತಿ ನಾಯಕ್, ತಳವಾರ್ ಲಕ್ಷೀಪತಿ, ಶೇರುದಾರರು, ಕೈವಾಡದವರು ಹಾಗೂ ತೊಟಿಗಳು, ದೇವಾಲಯದ ಧರ್ಮದರ್ಶಿಗಳು ಜಾತ್ರೆಯಲ್ಲಿ ಪಾಲ್ಗೊಳ್ಳುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>