<p><strong>ಪಾವಗಡ</strong>: ಪಟ್ಟಣದಲ್ಲಿ ಶನಿವಾರ ನಡೆದ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಪೋಷಕರು ಆರೋಪಿಸಿದ್ದಾರೆ.</p><p>ಮೇಲ್ವಿಚಾರಕರು ತಮಗೆ ಬೇಕಿರುವವರಿಗೆ ಉತ್ತರ ಹೇಳಿಕೊಟ್ಟಿದ್ದಾರೆ. ವರ್ಷಗಟ್ಟಲೆ ಮಕ್ಕಳಿಗೆ ತರಬೇತಿ ಕೊಡಿಸಿ ಅವರ ಭವಿಷ್ಯಕ್ಕಾಗಿ ಶ್ರಮಿಸಿದ ಪೋಷಕರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.</p><p>ಪರೀಕ್ಷೆ ಮುಗಿದ ಕೂಡಲೇ ತಮಗೆ ಅನ್ಯಾಯವಾಗಿದೆ ಎಂದು ಮಕ್ಕಳು ಪೋಷಕರೆದುರು ಕಣ್ಣೀರು ಹಾಕುತ್ತಿದ್ದರು.</p><p>‘ಪಟ್ಟಣದ ಪ್ರೌಢಶಾಲೆಯಲ್ಲಿ ನಡೆದ ಪರೀಕ್ಷೆಯಲ್ಲಿ ಹಣ ನೀಡಿದವರಿಗೆ ಉತ್ತರ ಹೇಳಿಕೊಡಲಾಗಿದೆ. ಪರೀಕ್ಷೆ ಮುಗಿದು ಉತ್ತರ ಪತ್ರಿಕೆಗಳನ್ನು ಮೇಲ್ವಿಚಾರಕರಿಗೆ ಮರಳಿಸಿದ ನಂತರವೂ ಕೆಲ ಶಿಕ್ಷಕರು ಉತ್ತರ ಪತ್ರಿಕೆಗಳನ್ನು ತಿದ್ದಿದ್ದಾರೆ. ಇಂತಹ ಪರೀಕ್ಷೆ ನಡೆಸುವುದಾದರೂ ಏಕೆ?’ ಎಂದು ಪೋಷಕರು ಪ್ರಶ್ನಿಸಿದರು.</p><p>‘ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದುಕೊಂಡು ಅದಕ್ಕೆ ಶಿಕ್ಷಕರೇ ಉತ್ತರ ಸಿದ್ಧಪಡಿಸಿಕೊಂಡು ಬಂದು ಬರೆಸಿದ್ದಾರೆ. ತಪ್ಪು ಉತ್ತರಗಳಿಗೆ ವೈಟ್ನರ್ ಬಳಸಿ ಸರಿ ಉತ್ತರ ಬರೆಸಲಾಗಿದೆ. ನೀರು ಕೊಡುವ ಸೋಗಿನಲ್ಲಿ ಕೊಠಡಿಗಳಿಗೆ ಹೋಗಿ ಉತ್ತರ ಹೇಳಿಕೊಟ್ಟು ಬರಲಾಗಿದೆ’ ಎಂದೂ ಪೋಷಕರು ದೂರಿದರು.</p><p>ಮರು ಪರೀಕ್ಷೆ ಮಾಡಬೇಕು ಎಂದು ಒತ್ತಾಯಿಸಿ ಪೋಷಕರಾದ ವಾಣಿ ಅಮೀರ್, ಅಂಬಿಕಾ ರಮೇಶ್, ಸೋಮಶೇಖರ್, ಸೌಮ್ಯ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ</strong>: ಪಟ್ಟಣದಲ್ಲಿ ಶನಿವಾರ ನಡೆದ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಪೋಷಕರು ಆರೋಪಿಸಿದ್ದಾರೆ.</p><p>ಮೇಲ್ವಿಚಾರಕರು ತಮಗೆ ಬೇಕಿರುವವರಿಗೆ ಉತ್ತರ ಹೇಳಿಕೊಟ್ಟಿದ್ದಾರೆ. ವರ್ಷಗಟ್ಟಲೆ ಮಕ್ಕಳಿಗೆ ತರಬೇತಿ ಕೊಡಿಸಿ ಅವರ ಭವಿಷ್ಯಕ್ಕಾಗಿ ಶ್ರಮಿಸಿದ ಪೋಷಕರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.</p><p>ಪರೀಕ್ಷೆ ಮುಗಿದ ಕೂಡಲೇ ತಮಗೆ ಅನ್ಯಾಯವಾಗಿದೆ ಎಂದು ಮಕ್ಕಳು ಪೋಷಕರೆದುರು ಕಣ್ಣೀರು ಹಾಕುತ್ತಿದ್ದರು.</p><p>‘ಪಟ್ಟಣದ ಪ್ರೌಢಶಾಲೆಯಲ್ಲಿ ನಡೆದ ಪರೀಕ್ಷೆಯಲ್ಲಿ ಹಣ ನೀಡಿದವರಿಗೆ ಉತ್ತರ ಹೇಳಿಕೊಡಲಾಗಿದೆ. ಪರೀಕ್ಷೆ ಮುಗಿದು ಉತ್ತರ ಪತ್ರಿಕೆಗಳನ್ನು ಮೇಲ್ವಿಚಾರಕರಿಗೆ ಮರಳಿಸಿದ ನಂತರವೂ ಕೆಲ ಶಿಕ್ಷಕರು ಉತ್ತರ ಪತ್ರಿಕೆಗಳನ್ನು ತಿದ್ದಿದ್ದಾರೆ. ಇಂತಹ ಪರೀಕ್ಷೆ ನಡೆಸುವುದಾದರೂ ಏಕೆ?’ ಎಂದು ಪೋಷಕರು ಪ್ರಶ್ನಿಸಿದರು.</p><p>‘ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದುಕೊಂಡು ಅದಕ್ಕೆ ಶಿಕ್ಷಕರೇ ಉತ್ತರ ಸಿದ್ಧಪಡಿಸಿಕೊಂಡು ಬಂದು ಬರೆಸಿದ್ದಾರೆ. ತಪ್ಪು ಉತ್ತರಗಳಿಗೆ ವೈಟ್ನರ್ ಬಳಸಿ ಸರಿ ಉತ್ತರ ಬರೆಸಲಾಗಿದೆ. ನೀರು ಕೊಡುವ ಸೋಗಿನಲ್ಲಿ ಕೊಠಡಿಗಳಿಗೆ ಹೋಗಿ ಉತ್ತರ ಹೇಳಿಕೊಟ್ಟು ಬರಲಾಗಿದೆ’ ಎಂದೂ ಪೋಷಕರು ದೂರಿದರು.</p><p>ಮರು ಪರೀಕ್ಷೆ ಮಾಡಬೇಕು ಎಂದು ಒತ್ತಾಯಿಸಿ ಪೋಷಕರಾದ ವಾಣಿ ಅಮೀರ್, ಅಂಬಿಕಾ ರಮೇಶ್, ಸೋಮಶೇಖರ್, ಸೌಮ್ಯ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>