ಹೇಳಿಕೊಳ್ಳುವಂತಹ ಯಾವ ಕೆಲಸವೂ ಆಗಿಲ್ಲ. ಶಂಭೋನಹಳ್ಳಿಯಲ್ಲಿ ಕಾಟಾಚಾರಕ್ಕೆ ಒಂದು ಚರಂಡಿ ಕಾಮಗಾರಿ ನಡೆದಿದೆ. ಇನ್ನೇನು ಅವರ ಅಧಿಕಾರ ಅವಧಿ ಮುಗಿಯಲಿದ್ದು ಕೆಲಸ ಆಗುವ ನಿರೀಕ್ಷೆಯೂ ಉಳಿದಿಲ್ಲ.
–ನಟೇಶ್, ಗ್ರಾಮ ಪಂಚಾಯಿತಿ ಸದಸ್ಯ
ಆದರ್ಶ ಗ್ರಾಮ ಯೋಜನೆಯಡಿ ಯಾವುದೇ ವಿಶೇಷ ಅನುದಾನ ಬಂದಿಲ್ಲ. ನರೇಗಾ ಕಾಮಗಾರಿ ಬಿಟ್ಟರೆ ಉಳಿದ ಕೆಲಸ ಆಗಿಲ್ಲ. ಈ ಹಿಂದಿನ ಸಿಇಒ ನರೇಗಾ ಯೋಜನೆಯಡಿ ಕೆಲಸ ಮಾಡಲು ಸೂಚಿಸಿದ್ದರು.
ರಂಗನಾಥ, ಪಿಡಿಒ
ಹೇಳಲಷ್ಟೆ ಆದರ್ಶ ಗ್ರಾಮ. ಆದರೆ ಆದರ್ಶ ಗ್ರಾಮ ಅಭಿವೃದ್ಧಿಗೆ ಬರಬೇಕಾದ ಅನುದಾನ ಯಾವುದೂ ಬಂದಿಲ್ಲ. ರಸ್ತೆ ಚರಂಡಿ ಶಾಲೆ ಕಟ್ಟಡ ಇತರೆ ಅಭಿವೃದ್ಧಿ ಕೆಲಸ ನಡೆದಿಲ್ಲ. ಮೂಲ ಸೌಕರ್ಯಕ್ಕೆ ನರೇಗಾ ಅನುದಾನ ಬಳಸಲಾಗಿದೆ.