ತಿಪಟೂರು:ಲಾಕ್ಡೌನ್ನಂತಹ ಕಷ್ಟದ ಕಾಲದಲ್ಲಿ ಜನರ ಜೊತೆಗಿದ್ದು, ಸಮಸ್ಯೆಗಳನ್ನು ಅಲಿಸುತ್ತ, ಸ್ಪಂದಿಸಬೇಕಿದ್ದ ಶಾಸಕ ಬಿ.ಸಿ. ನಾಗೇಶ್ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿರುವ ಸಾರ್ವಜನಿಕರು ಜನಪ್ರತಿನಿಧಿಗಳ ವಿರುದ್ಧ ಬೇಸರ ಹೊರಹಾಕಿದ್ದಾರೆ.
ಕೆಲ ಸಂಘ-ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ಆಹಾರದ ಕಿಟ್ಗಳನ್ನು ಬಡವರಿಗೆ, ನಿರ್ಗತಿಕರಿಗೆ ನೀಡುತ್ತಿವೆ. ಆದರೆ ತಾಲ್ಲೂಕಿನ ಶಾಸಕರು ಸಾರ್ವಜನಿಕರ ಸಹಕಾರಕ್ಕೆ ಬಂದಿಲ್ಲ ಎಂದು ಜನರು ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.