ದೂರಿನನ್ವಯ ಸಿಇಒ ಅವರು ತನಿಖೆಗೂ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ದೂರನ್ನು ವಾಪಸ್ ಪಡೆಯಲು ಪಿಡಿಒ ಮಂಜಮ್ಮ ಅವರು ಗ್ರಾಮ ಪಂಚಾಯಿತಿ ಸದಸ್ಯ ಪ್ರಭಾಕರ ಅವರ ಮೂಲಕ ₹1000 ನೀಡುವುದಾಗಿ ನಾಗರಾಜು ಅವರಿಗೆ ಆಮಿಷ ವೊಡ್ಡಿದ್ದರು. ಅದರಂತೆ ಶುಕ್ರವಾರ ಸಂಜೆ ಗ್ರಾಮ ಪಂಚಾಯಿತಿ ಸದಸ್ಯರ ಮೂಲಕ ಹಣ ನೀಡುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಆರೋಪಿಗಳಾದ ಗ್ರಾಮಪಂಚಾಯಿತಿ ಸದಸ್ಯ ಪ್ರಭಾಕರ್ ಹಾಗೂ ಪಿಡಿಒ ಮಂಜಮ್ಮ ಅವರನ್ನು ವಶಪಡಿಸಿಕೊಂಡಿದ್ದಾರೆ.