ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣಕುಮಾರ್, ‘ಪೀಕಾರ್ಡ್ ಅಧ್ಯಕ್ಷರು ಕುಣಿಗಲ್, ಶಿರಾ ಮತ್ತು ಪಾವಗಡ ಶಾಖೆಗಳನ್ನು ವಿಲೀನಗೊಳಿಸಲು ಸಂಚು ಮಾಡಿದ್ದರು. ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಸಂಚು ವಿಫಲವಾಗಿದೆ. ಸಾಲದ ಮರುಪಾವತಿ ಇಲ್ಲದೆ ಸಹಕಾರಿ ಬ್ಯಾಂಕ್ಗಳು ಅಸ್ಥಿತ್ವ ಕಳೆದುಕೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಸರ್ಕಾರಗಳು ಸಹಕಾರ ಸಂಘಗಳ ಉಳಿವಿಗೆ ಕಾರ್ಯತಂತ್ರ ರೂಪಿಸಬೇಕಿದೆ’ ಎಂದರು.