ಭಾನುವಾರ ಸಂಜೆ ಯೋಗೀಶ್ ಅವರು, ಪತ್ನಿ ಮಧುಶ್ರೀ ಅವರ ತಂದೆ ಮತ್ತು ತಾಯಿಗೆ ಮೊಬೈಲ್ ಕರೆ ಮಾಡಿ ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ತಿಳಿಸಿದ್ದರು. ತವರು ಮನೆಯವರು ರಾತ್ರಿಯೇ ಅಮ್ಮನಹಳ್ಳಿಗೆ ಬಂದು ಹುಡುಕಾಡುವಷ್ಟರಲ್ಲಿ ಬೆಳಿಗ್ಗೆ ಮಧುಶ್ರೀ ಶವವಾಗಿ ಕೆರೆಯಲ್ಲಿ ತೇಲುತ್ತಿರುವ ಬೆಳಕಿಗೆ ಬಂದಿದೆ. ಮಗುವೂ ನಾಪತ್ತೆಯಾಗಿದೆ.