ಹದಿನೈದು ವರ್ಷದಲ್ಲಿ ಇಡೀ ರಾಜ್ಯದಲ್ಲಿಯೇ ಯಾವ ಡಿಸಿಸಿ ಬ್ಯಾಂಕ್ ಮಾಡದ ಸಾಧನೆಯನ್ನು ನಮ್ಮ ಡಿಸಿಸಿ ಬ್ಯಾಂಕ್ ಮಾಡಿದೆ. ರೈತರು, ಬಡವರು, ಅಸಹಾಯಕರು, ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಹಾಯ ಮಾಡಿ ಏಳಿಗೆಗೆ ಸಹಕಾರಿಯಾಗಿದೆ. ನಿವೃತ್ತ ನೌಕರರ ಹಿತರಕ್ಷಣೆಗೆ ವಾರ್ಷಿಕ ₹ 35 ಲಕ್ಷ ಕಾಯ್ದಿರಿಸಿ ತನ್ನದೇ ಆದ ವಿಶೇಷ ಯೋಜನೆ ಮೂಲಕ ಬ್ಯಾಂಕಿನ ಆಡಳಿತ ಮಂಡಳಿ ನೆರವಾಗಿದೆ. ಇದನ್ನು ಸಹಿಸದೇ ರಾಜಕೀಯ ಕಾರಣಕ್ಕೆ ಸೂಪರ್ ಸೀಡ್ ಮಾಡಲಾಗಿದೆ ಎಂದು ಆರೋಪಿಸಿದರು.