ಗಣರಾಜ್ಯೋತ್ಸವ ಸಂದೇಶ ನೀಡಿದ ಅವರು, ‘ಆಧುನಿಕ ಜನತಂತ್ರ ವ್ಯವಸ್ಥೆಯ ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಪ್ರಗತಿಗಾಗಿ ಶ್ರಮಿಸುತ್ತಿವೆ. ರಾಷ್ಟ್ರದ ಹಿರಿಮೆಯಾದ ಅಹಿಂಸೆ, ಸತ್ಯ, ಶಾಂತಿ ಎಂಬ ಮಂತ್ರಗಳನ್ನು ಜನಾಮಾನಸದಲ್ಲಿ ನೆಲೆಗೊಳಿಸಲು ನಾವೆಲ್ಲರೂ ಸಹೋದರತೆಯಿಂದ ಮುನ್ನಡೆಯಬೇಕಿದೆ’ ಎಂದರು.