ಕೊರೊನಾ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ. ಆದ್ದರಿಂದ ನಗರದ ವ್ಯಾಪ್ತಿಯಲ್ಲಿರುವ ಎಲ್ಲ ಮಸೀದಿಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಿ ಅಲ್ಲಿರುವ ತಬ್ಲಿಗಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ರಂಜಾನ್ ಮುಗಿಯುವವರೆಗೂ ಅಥವಾ ಸೋಂಕು ನಿವಾರಣೆ ಆಗುವವರೆಗೂ ಕೆಲ ಬಡಾವಣೆಗಳಿಗೆ ವಿಧಿಸಿರುವ ಸೀಲ್ಡೌನ್ ತೆರವುಗೊಳಿಸಬಾರದು ಎಂದು ವೇದಿಕೆಯ ರಕ್ಷಿತ್ ಕುಮಾರ್, ಜಗದೀಶ್, ಶಿವರುದ್ರಪ್ಪ ಕೋರಿದರು.