<p><strong>ಕುಣಿಗಲ್: </strong>ತಾಲ್ಲೂಕಿನ ಸಂತೆಮಾವತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಲು ರೌಡಿಶೀಟರ್ ಮೋದುರು ಗಿರಿ ಯತ್ನಿಸುತ್ತಿರುವುದು ಹಾಗೂ ರೌಡಿಯ ಸ್ಪರ್ಧೆ ತಡೆಯಲು ಕೆಲವರು ಪೊಲೀಸರಿಗೆ ದೂರು ನೀಡುವ ಮೂಲಕ ಯತ್ನಿಸುತ್ತಿರುವುದರಿಂದ ಗಮನ ಸೆಳೆಯುತ್ತಿದೆ.</p>.<p>ಮೋದುರು ಗಿರಿ ಒಂದು ವರ್ಷದಿಂದ ಮೋದುರಿನಲ್ಲಿಯೇ ನೆಲೆಸಿದ್ದಾರೆ. ಪ್ರೇಯಸಿಯೊಂದಿಗೆ ವಿವಾಹ ಮತ್ತು ಹುಟ್ಟಿದ ಹಬ್ಬವನ್ನು ಬೆಂಬಲಿಗರೊಂದಿಗೆ ಆಚರಿಸಿಕೊಂಡು, ಕೃಷಿ ಚಟುವಟಿಕೆ<br />ಯಲ್ಲಿ ತೊಡಗಿಕೊಂಡಿದ್ದಾರೆ.</p>.<p>ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಸುವ ಮುನ್ನವೇ<br />ಬೆಂಗಳೂರು ಕಾಮಾಕ್ಷಿಪಾಳ್ಯಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ<br />ದಂತೆ ಬಂಧಿಸಿದ್ದಾರೆ. ಈ ನಡುವೆ ಪೊಲೀಸರ ಕಸ್ಟಡಿಯಲ್ಲಿರುವಾಗಲೇ ನ್ಯಾಯಾಲಯದ ಮೊರೆಹೋಗಿ ಸ್ಪರ್ಧೆಗೆ ಯತ್ನಿಸುತ್ತಿದ್ದಾನೆ. ಪೊಲೀಸರು ಮೋದುರು ಗಿರಿಯ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ.</p>.<p>ಈ ನಡುವೆ ಮೋದೂರು ಗಿರಿಯಿಂದ ತೊಂದರೆಗೆ ಒಳಗಾದವರು ತಾಲ್ಲೂಕಿನ ಕುಣಿಗಲ್ ಮತ್ತು ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಹಫ್ತಾ ವಸೂಲಿ, ಪ್ರಾಣ ಬೆದರಿಕೆ ಮತ್ತು ಬಲವಂತದ ಹಣ ವಸೂಲಿಗೆ ಸಂಬಂಧಿಸಿ<br />ದಂತೆ 9 ಮಂದಿ ದೂರು ನೀಡಿದ್ದಾರೆ. ಗಿರಿ ಮತ್ತು ಬೆಂಬಲಿಗರ ಮೇಲೆ ಮೂರು ದಿನದಲ್ಲಿ 9 ಪ್ರಕರಣ ದಾಖಲಾಗಿವೆ.<br />ತಾಲ್ಲೂಕಿನಲ್ಲಿ ಗಿರಿಯಿಂದ ತೊಂದರೆ<br />ಗೊಳಗಾದವರು ಇನ್ನೂ ಅನೇಕರಿದ್ದು, ನಿರ್ಭೀತಿಯಿಂದ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.</p>.<p>ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಈಗಾಗಲೇ ಗಿರಿ ಹೆಸರಿನಲ್ಲಿ ನಾಮಪತ್ರ ಪಡೆಯಲಾಗಿದ್ದು, ಜೈಲಿನಲ್ಲಿರುವ ಆತ ಹೇಗೆ ನಾಮಪತ್ರ ಸಲ್ಲಿಸುತ್ತಾನೆ ಎಂಬ ಕುತೂಹಲ<br />ಹೆಚ್ಚಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಣಿಗಲ್: </strong>ತಾಲ್ಲೂಕಿನ ಸಂತೆಮಾವತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಲು ರೌಡಿಶೀಟರ್ ಮೋದುರು ಗಿರಿ ಯತ್ನಿಸುತ್ತಿರುವುದು ಹಾಗೂ ರೌಡಿಯ ಸ್ಪರ್ಧೆ ತಡೆಯಲು ಕೆಲವರು ಪೊಲೀಸರಿಗೆ ದೂರು ನೀಡುವ ಮೂಲಕ ಯತ್ನಿಸುತ್ತಿರುವುದರಿಂದ ಗಮನ ಸೆಳೆಯುತ್ತಿದೆ.</p>.<p>ಮೋದುರು ಗಿರಿ ಒಂದು ವರ್ಷದಿಂದ ಮೋದುರಿನಲ್ಲಿಯೇ ನೆಲೆಸಿದ್ದಾರೆ. ಪ್ರೇಯಸಿಯೊಂದಿಗೆ ವಿವಾಹ ಮತ್ತು ಹುಟ್ಟಿದ ಹಬ್ಬವನ್ನು ಬೆಂಬಲಿಗರೊಂದಿಗೆ ಆಚರಿಸಿಕೊಂಡು, ಕೃಷಿ ಚಟುವಟಿಕೆ<br />ಯಲ್ಲಿ ತೊಡಗಿಕೊಂಡಿದ್ದಾರೆ.</p>.<p>ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಸುವ ಮುನ್ನವೇ<br />ಬೆಂಗಳೂರು ಕಾಮಾಕ್ಷಿಪಾಳ್ಯಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ<br />ದಂತೆ ಬಂಧಿಸಿದ್ದಾರೆ. ಈ ನಡುವೆ ಪೊಲೀಸರ ಕಸ್ಟಡಿಯಲ್ಲಿರುವಾಗಲೇ ನ್ಯಾಯಾಲಯದ ಮೊರೆಹೋಗಿ ಸ್ಪರ್ಧೆಗೆ ಯತ್ನಿಸುತ್ತಿದ್ದಾನೆ. ಪೊಲೀಸರು ಮೋದುರು ಗಿರಿಯ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ.</p>.<p>ಈ ನಡುವೆ ಮೋದೂರು ಗಿರಿಯಿಂದ ತೊಂದರೆಗೆ ಒಳಗಾದವರು ತಾಲ್ಲೂಕಿನ ಕುಣಿಗಲ್ ಮತ್ತು ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಹಫ್ತಾ ವಸೂಲಿ, ಪ್ರಾಣ ಬೆದರಿಕೆ ಮತ್ತು ಬಲವಂತದ ಹಣ ವಸೂಲಿಗೆ ಸಂಬಂಧಿಸಿ<br />ದಂತೆ 9 ಮಂದಿ ದೂರು ನೀಡಿದ್ದಾರೆ. ಗಿರಿ ಮತ್ತು ಬೆಂಬಲಿಗರ ಮೇಲೆ ಮೂರು ದಿನದಲ್ಲಿ 9 ಪ್ರಕರಣ ದಾಖಲಾಗಿವೆ.<br />ತಾಲ್ಲೂಕಿನಲ್ಲಿ ಗಿರಿಯಿಂದ ತೊಂದರೆ<br />ಗೊಳಗಾದವರು ಇನ್ನೂ ಅನೇಕರಿದ್ದು, ನಿರ್ಭೀತಿಯಿಂದ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.</p>.<p>ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಈಗಾಗಲೇ ಗಿರಿ ಹೆಸರಿನಲ್ಲಿ ನಾಮಪತ್ರ ಪಡೆಯಲಾಗಿದ್ದು, ಜೈಲಿನಲ್ಲಿರುವ ಆತ ಹೇಗೆ ನಾಮಪತ್ರ ಸಲ್ಲಿಸುತ್ತಾನೆ ಎಂಬ ಕುತೂಹಲ<br />ಹೆಚ್ಚಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>