ಇಡೀ ಭಾರತವನ್ನು ಕಾಲ್ನಡಿಗೆಯಲ್ಲಿ ನಾಲ್ಕು ಬಾರಿ ಸಂಚರಿಸಿದ ಶಂಕರಾಚಾರ್ಯರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಪೂರ್ವ –ಪಶ್ಚಿಮ ಸಮುದ್ರದವರೆಗೆ ಹಬ್ಬಿರುವ ಭಾರತ ದೇಶ ಅಖಂಡ ಎಂದು ಸಾವಿರ ವರ್ಷಗಳ ಹಿಂದೆಯೇ ಘೋಷಿಸಿದ್ದರು. ಇದರ ಕುರುಹಾಗಿ ದೇಶದ ನಾಲ್ಕು ಕಡೆ ಅದ್ವೈತ ಮಠಗಳನ್ನು ಸ್ಥಾಪಿಸಿಸನಾತನ ಧರ್ಮದ ಪುನರುತ್ಥಾನಕ್ಕೆ ನಾಂದಿ ಹಾಡಿದರು ಎಂದು ವಿವರಿಸಿದರು.