ತುಮಕೂರು ತಾಲ್ಲೂಕಿನ ಗಂಗನಾಳ ಗ್ರಾಮದ ಸುರೇಶ್ ಮತ್ತು ಅವರ ಪತ್ನಿ ಮಹೇಶ್ವರಿ ಇಬ್ಬರೂ ಸಾಫ್ಟ್ವೇರ್ ಎಂಜಿನಿಯರ್. ದೆಹಲಿ, ಬೆಂಗಳೂರಿನಲ್ಲಿದ್ದವರು ಕೋವಿಡ್ ಬಿಕ್ಕಟ್ಟಿನ ನಂತರ, ಕೆಲಸಕ್ಕೆ ರಾಜೀನಾಮೆ ನೀಡಿ, ಈಗ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತಿಂಗಳಿಗೆ ಲಕ್ಷಾಂತರ ರೂಪಾಯಿ ಲಾಭವನ್ನೂ ಗಳಿಸುತ್ತಿದ್ದಾರೆ.