ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಶ್ರೀಲಂಕಾದಲ್ಲಿ ಇಸ್ಲಾಮ್ ಟೆರರಿಸ್ಟ್ ನಡೆಸಿದ ದುಷ್ಕೃತ್ಯದಲ್ಲಿ ಬಲಿಯಾದವರನ್ನು ಕಂಡರೆ ಹೊಟ್ಟೆಯಲ್ಲಿ ಬೆಂಕಿ ಹಾಕಿದ ಹಾಗೆ ಆಗುತ್ತದೆ. ಯಾವ್ಯಾವುದೋ ದುರುದ್ದೇಶಕ್ಕೆ ಅಮಾಯಕರನ್ನು ಬಲಿ ಪಡೆಯುತ್ತಿರುವುದನ್ನು ಜಾತಿ, ಮತ, ಪಂಥ ಬಿಟ್ಟು ಖಂಡಿಸಬೇಕಾಗಿದೆ. ಉಗ್ರವಾದಿ ಚಟುವಟಿಕೆಗಳು, ಸಮಾಜ ಘಾತುಕ ಶಕ್ತಿಗಳು ಎಲ್ಲಿಯೇ ತಲೆ ಎತ್ತುತ್ತಿದ್ದರೆ ಅಂತಹದ್ದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ದುಷ್ಕೃತ್ಯ ನಡೆಸುವವರನ್ನು ಹಿಡಿದು ಕೊಡಬೇಕು’ ಎಂದು ಹೇಳಿದರು.