ಅಧ್ಯಕ್ಷೆ ನಾಗಮ್ಮ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರಾದ ವಿಶ್ವನಾಥ್, ಹರೀಶ್ ನಾಯಕ್, ದಿನೇಶ್ ಕುಮಾರ್, ಬರಗಾಲದಲ್ಲಿ ನೀರಿನ ಅಭಾವ ಇರುತ್ತದೆ. ಟ್ಯಾಂಕರ್ ಮೂಲಕ ಸರಬರಾಜು ಮಾಡಿದ್ದು ಸರಿ. ಈಗ ಕೊಳವೆಬಾವಿಗಳನ್ನು ಕೊರೆಸುವ, ಪೈಪ್ಲೈನ್ ಅಳವಡಿಸುವ ಮೂಲಕ ಶಾಶ್ವತ ಪರಿಹಾರಕ್ಕೆ ಗಮನ ಹರಿಸಬೇಕು ಎಂದರು.