<p><strong>ತುಮಕೂರು:</strong> ಸಂಕ್ರಾಂತಿ ಹಬ್ಬ ಸಮೀಪಿಸಿದ್ದು, ಅವರೆಕಾಯಿ ದುಬಾರಿಯಾಗಿದೆ. ಮಸಾಲೆ ಪದಾರ್ಥಗಳು ಏರಿಕೆಯಾಗಿದ್ದು, ಹಣ್ಣು ಗಗನಮುಖಿಯಾಗಿದೆ. ತರಕಾರಿ ದರ ಇಳಿಕೆಯಾಗಿದ್ದು, ಬೇಳೆ, ಧಾನ್ಯ ಕೊಂಚ ತಗ್ಗಿದೆ. ಕೋಳಿ ಮಾಂಸವೂ ಚೇತರಿಸಿಕೊಂಡಿದೆ.</p>.<p>ಸಂಕ್ರಾಂತಿ ಹಬ್ಬಕ್ಕೆ ಎರಡು ದಿನವಷ್ಟೇ ಬಾಕಿ ಇದ್ದು, ಈ ಸಮಯದಲ್ಲಿ ಅವರೆಕಾಯಿಗೆ ಬೇಡಿಕೆ ಹೆಚ್ಚಾಗುತ್ತದೆ. ಹಾಗಾಗಿ ಬೆಲೆಯೂ ದುಬಾರಿಯಾಗಿದ್ದು, ಸ್ಥಳೀಯ ಅವರೆಕಾಯಿ ಕೆ.ಜಿ ₹70–75, ಹುಣಸೂರು ಕಾಯಿ ಕೆ.ಜಿ ₹50–60ಕ್ಕೆ ಏರಿಕೆಯಾಗಿದೆ. ಹಬ್ಬದ ಹಿಂದಿನ ದಿನ ಮತ್ತಷ್ಟು ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.</p>.<p><strong>ತರಕಾರಿ ಇಳಿಕೆ:</strong> ಕ್ಯಾರೇಟ್ ಹೊರತುಪಡಿಸಿದರೆ ಬಹುತೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಬೀನ್ಸ್, ಗಡ್ಡೆಕೋಸು ಸಾಕಷ್ಟು ಅಗ್ಗವಾಗಿದ್ದು, ಬದನೆಕಾಯಿ, ಬೆಂಡೆಕಾಯಿ, ಟೊಮೆಟೊ ಅಲ್ಪ ಏರಿಕೆಯಾಗಿದೆ. ಶುಂಠಿ ಕೆ.ಜಿ ₹40–50ಕ್ಕೆ ಇಳಿಕೆಯಾಗಿದೆ. ಸೋತೆಕಾಯಿ, ನಿಂಬೆಹಣ್ಣು ಸಹ ತಗ್ಗಿದೆ.</p>.<p><strong>ಸೊಪ್ಪು ಅಲ್ಪ ಚೇತರಿಕೆ</strong>: ಸಾಕಷ್ಟು ಕುಸಿತ ಕಂಡಿದ್ದ ಸೊಪ್ಪು ಅಲ್ಪ ಚೇತರಿಸಿಕೊಂಡಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–35, ಸಬ್ಬಕ್ಕಿ ಸೊಪ್ಪು ಕೆ.ಜಿ ₹25–30, ಮೆಂತ್ಯ ಸೊಪ್ಪು ಕೆ.ಜಿ ₹15–20, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಮಾರಾಟವಾಗುತ್ತಿದೆ.</p>.<p><strong>ಹಣ್ಣು ದುಬಾರಿ</strong>: ಬಹುತೇಕ ಹಣ್ಣುಗಳು ದುಬಾರಿಯಾಗಿವೆ. ಇಳಿಕೆಯತ್ತ ಮುಖಮಾಡಿದ್ದ ಏಲಕ್ಕಿ ಬಾಳೆಹಣ್ಣು ಕೆ.ಜಿಗೆ ₹10 ಹೆಚ್ಚಳವಾಗಿದೆ. ಸೇಬು, ದಾಳಿಂಬೆ, ಕಿತ್ತಳೆ, ಡ್ರ್ಯಾಗನ್ ಫ್ರೂಟ್ ಏರಿಕೆ ಕಂಡಿದೆ.</p>.<p><strong>ಅಡುಗೆ ಎಣ್ಣೆ:</strong> ಅಡುಗೆ ಎಣ್ಣೆ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್ವಿನ್ನರ್ ಕೆ.ಜಿ ₹138–140, ಪಾಮಾಯಿಲ್ ಕೆ.ಜಿ ₹127–128, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.</p>.<p><strong>ಬೇಳೆ, ಧಾನ್ಯ ಇಳಿಕೆ</strong>: ಮಾರುಕಟ್ಟೆಗೆ ಹೊಸ ಬೆಳೆ ಬರಲಾರಂಭಿಸಿದ್ದು ಬೇಳೆ, ಧಾನ್ಯಗಳ ಧಾರಣೆ ಈ ವಾರವೂ ಇಳಿಕೆಯಾಗಿದೆ. ತೊಗರಿ ಬೇಳೆ, ಕಡಲೆಬೇಳೆ, ಉದ್ದಿನಬೇಳೆ ಕೊಂಚ ಅಗ್ಗವಾಗಿದೆ. ಅಕ್ಕಿ ಬೆಲೆ ಸಹ ಇಳಿಕೆಯತ್ತ ಸಾಗಿದೆ. ಆದರೆ ಸಕ್ಕರೆ ಕೆ.ಜಿಗೆ ₹2 ಏರಿಕೆ ದಾಖಲಿಸಿದ್ದು, ಬೆಲ್ಲ ಸಹ ಹೆಚ್ಚಳವಾಗಿದೆ.</p>.<p><strong>ಮಸಾಲೆ ಪದಾರ್ಥ</strong>: ಗಗನಮುಖಿಯಾಗಿದ್ದ ಏಲಕ್ಕಿ ಧಾರಣೆ ಕೊಂಚ ತಗ್ಗಿದಂತೆ ಕಾಣುತ್ತದೆ. ಸ್ಥಿರವಾಗಿದ್ದ ಮಸಾಲೆ ಪದಾರ್ಥಗಳು ಈಗ ದುಬಾರಿಯಾಗಿವೆ. ಮೆಣಸು, ಜೀರಿಗೆ, ಚಕ್ಕೆ, ಲವಂಗ ಒಮ್ಮೆಲೆ ಏರಿಕೆ ದಾಖಲಿಸಿವೆ.</p>.<p>ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹220–240, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹170–180, ಹುಣಸೆಹಣ್ಣು ₹110–130, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹720–730, ಜೀರಿಗೆ ಕೆ.ಜಿ ₹300–320, ಚಕ್ಕೆ ಕೆ.ಜಿ ₹260–270, ಲವಂಗ ಕೆ.ಜಿ ₹820–850, ಗುಣಮಟ್ಟದ ಗಸಗಸೆ ಕೆ.ಜಿ ₹1,200–1,250, ಏಲಕ್ಕಿ ಕೆ.ಜಿ ₹3,400–3,500, ಬಾದಾಮಿ ಕೆ.ಜಿ ₹800–820, ಗೋಡಂಬಿ ಕೆ.ಜಿ ₹850–900, ಒಣದ್ರಾಕ್ಷಿ ಕೆ.ಜಿ ₹230–250ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p><strong>ಕೋಳಿ ಮಾಂಸ</strong>: ಕೋಳಿ ಮಾಂಸದ ದರ ಚೇತರಿಸಿಕೊಂಡಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹115, ರೆಡಿ ಚಿಕನ್ ಕೆ.ಜಿ ₹180, ಸ್ಕಿನ್ಲೆಸ್ ಕೆ.ಜಿ ₹200, ಮೊಟ್ಟೆಕೋಳಿ (ಫಾರಂ) ಕೆ.ಜಿ ₹110ಕ್ಕೆ ಏರಿಕೆಯಾಗಿದೆ.</p>.<p><strong>ಮೀನು ಏರಿಕೆ</strong>: ಅಂಜಲ್ ಇಳಿಕೆಯಾಗಿದ್ದರೆ, ಇತರೆ ಮೀನುಗಳು ಸಾಕಷ್ಟು ದುಬಾರಿಯಾಗಿವೆ. ಬಂಗುಡೆ ಕೆ.ಜಿ ₹260, ಬೂತಾಯಿ ಕೆ.ಜಿ ₹300, ಬೊಳಿಂಜರ್ ಕೆ.ಜಿ ₹250, ಅಂಜಲ್ ಕೆ.ಜಿ ₹880, ಕಪ್ಪುಮಾಂಜಿ ಕೆ.ಜಿ ₹810, ಇಂಡಿಯನ್ ಸಾಲ್ಮನ್ ಕೆ.ಜಿ ₹1,040, ಸೀಗಡಿ ಕೆ.ಜಿ ₹550–820, ಏಡಿ ಕೆ.ಜಿ ₹720ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಸಂಕ್ರಾಂತಿ ಹಬ್ಬ ಸಮೀಪಿಸಿದ್ದು, ಅವರೆಕಾಯಿ ದುಬಾರಿಯಾಗಿದೆ. ಮಸಾಲೆ ಪದಾರ್ಥಗಳು ಏರಿಕೆಯಾಗಿದ್ದು, ಹಣ್ಣು ಗಗನಮುಖಿಯಾಗಿದೆ. ತರಕಾರಿ ದರ ಇಳಿಕೆಯಾಗಿದ್ದು, ಬೇಳೆ, ಧಾನ್ಯ ಕೊಂಚ ತಗ್ಗಿದೆ. ಕೋಳಿ ಮಾಂಸವೂ ಚೇತರಿಸಿಕೊಂಡಿದೆ.</p>.<p>ಸಂಕ್ರಾಂತಿ ಹಬ್ಬಕ್ಕೆ ಎರಡು ದಿನವಷ್ಟೇ ಬಾಕಿ ಇದ್ದು, ಈ ಸಮಯದಲ್ಲಿ ಅವರೆಕಾಯಿಗೆ ಬೇಡಿಕೆ ಹೆಚ್ಚಾಗುತ್ತದೆ. ಹಾಗಾಗಿ ಬೆಲೆಯೂ ದುಬಾರಿಯಾಗಿದ್ದು, ಸ್ಥಳೀಯ ಅವರೆಕಾಯಿ ಕೆ.ಜಿ ₹70–75, ಹುಣಸೂರು ಕಾಯಿ ಕೆ.ಜಿ ₹50–60ಕ್ಕೆ ಏರಿಕೆಯಾಗಿದೆ. ಹಬ್ಬದ ಹಿಂದಿನ ದಿನ ಮತ್ತಷ್ಟು ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.</p>.<p><strong>ತರಕಾರಿ ಇಳಿಕೆ:</strong> ಕ್ಯಾರೇಟ್ ಹೊರತುಪಡಿಸಿದರೆ ಬಹುತೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಬೀನ್ಸ್, ಗಡ್ಡೆಕೋಸು ಸಾಕಷ್ಟು ಅಗ್ಗವಾಗಿದ್ದು, ಬದನೆಕಾಯಿ, ಬೆಂಡೆಕಾಯಿ, ಟೊಮೆಟೊ ಅಲ್ಪ ಏರಿಕೆಯಾಗಿದೆ. ಶುಂಠಿ ಕೆ.ಜಿ ₹40–50ಕ್ಕೆ ಇಳಿಕೆಯಾಗಿದೆ. ಸೋತೆಕಾಯಿ, ನಿಂಬೆಹಣ್ಣು ಸಹ ತಗ್ಗಿದೆ.</p>.<p><strong>ಸೊಪ್ಪು ಅಲ್ಪ ಚೇತರಿಕೆ</strong>: ಸಾಕಷ್ಟು ಕುಸಿತ ಕಂಡಿದ್ದ ಸೊಪ್ಪು ಅಲ್ಪ ಚೇತರಿಸಿಕೊಂಡಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–35, ಸಬ್ಬಕ್ಕಿ ಸೊಪ್ಪು ಕೆ.ಜಿ ₹25–30, ಮೆಂತ್ಯ ಸೊಪ್ಪು ಕೆ.ಜಿ ₹15–20, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಮಾರಾಟವಾಗುತ್ತಿದೆ.</p>.<p><strong>ಹಣ್ಣು ದುಬಾರಿ</strong>: ಬಹುತೇಕ ಹಣ್ಣುಗಳು ದುಬಾರಿಯಾಗಿವೆ. ಇಳಿಕೆಯತ್ತ ಮುಖಮಾಡಿದ್ದ ಏಲಕ್ಕಿ ಬಾಳೆಹಣ್ಣು ಕೆ.ಜಿಗೆ ₹10 ಹೆಚ್ಚಳವಾಗಿದೆ. ಸೇಬು, ದಾಳಿಂಬೆ, ಕಿತ್ತಳೆ, ಡ್ರ್ಯಾಗನ್ ಫ್ರೂಟ್ ಏರಿಕೆ ಕಂಡಿದೆ.</p>.<p><strong>ಅಡುಗೆ ಎಣ್ಣೆ:</strong> ಅಡುಗೆ ಎಣ್ಣೆ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್ವಿನ್ನರ್ ಕೆ.ಜಿ ₹138–140, ಪಾಮಾಯಿಲ್ ಕೆ.ಜಿ ₹127–128, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.</p>.<p><strong>ಬೇಳೆ, ಧಾನ್ಯ ಇಳಿಕೆ</strong>: ಮಾರುಕಟ್ಟೆಗೆ ಹೊಸ ಬೆಳೆ ಬರಲಾರಂಭಿಸಿದ್ದು ಬೇಳೆ, ಧಾನ್ಯಗಳ ಧಾರಣೆ ಈ ವಾರವೂ ಇಳಿಕೆಯಾಗಿದೆ. ತೊಗರಿ ಬೇಳೆ, ಕಡಲೆಬೇಳೆ, ಉದ್ದಿನಬೇಳೆ ಕೊಂಚ ಅಗ್ಗವಾಗಿದೆ. ಅಕ್ಕಿ ಬೆಲೆ ಸಹ ಇಳಿಕೆಯತ್ತ ಸಾಗಿದೆ. ಆದರೆ ಸಕ್ಕರೆ ಕೆ.ಜಿಗೆ ₹2 ಏರಿಕೆ ದಾಖಲಿಸಿದ್ದು, ಬೆಲ್ಲ ಸಹ ಹೆಚ್ಚಳವಾಗಿದೆ.</p>.<p><strong>ಮಸಾಲೆ ಪದಾರ್ಥ</strong>: ಗಗನಮುಖಿಯಾಗಿದ್ದ ಏಲಕ್ಕಿ ಧಾರಣೆ ಕೊಂಚ ತಗ್ಗಿದಂತೆ ಕಾಣುತ್ತದೆ. ಸ್ಥಿರವಾಗಿದ್ದ ಮಸಾಲೆ ಪದಾರ್ಥಗಳು ಈಗ ದುಬಾರಿಯಾಗಿವೆ. ಮೆಣಸು, ಜೀರಿಗೆ, ಚಕ್ಕೆ, ಲವಂಗ ಒಮ್ಮೆಲೆ ಏರಿಕೆ ದಾಖಲಿಸಿವೆ.</p>.<p>ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹220–240, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹170–180, ಹುಣಸೆಹಣ್ಣು ₹110–130, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹720–730, ಜೀರಿಗೆ ಕೆ.ಜಿ ₹300–320, ಚಕ್ಕೆ ಕೆ.ಜಿ ₹260–270, ಲವಂಗ ಕೆ.ಜಿ ₹820–850, ಗುಣಮಟ್ಟದ ಗಸಗಸೆ ಕೆ.ಜಿ ₹1,200–1,250, ಏಲಕ್ಕಿ ಕೆ.ಜಿ ₹3,400–3,500, ಬಾದಾಮಿ ಕೆ.ಜಿ ₹800–820, ಗೋಡಂಬಿ ಕೆ.ಜಿ ₹850–900, ಒಣದ್ರಾಕ್ಷಿ ಕೆ.ಜಿ ₹230–250ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p><strong>ಕೋಳಿ ಮಾಂಸ</strong>: ಕೋಳಿ ಮಾಂಸದ ದರ ಚೇತರಿಸಿಕೊಂಡಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹115, ರೆಡಿ ಚಿಕನ್ ಕೆ.ಜಿ ₹180, ಸ್ಕಿನ್ಲೆಸ್ ಕೆ.ಜಿ ₹200, ಮೊಟ್ಟೆಕೋಳಿ (ಫಾರಂ) ಕೆ.ಜಿ ₹110ಕ್ಕೆ ಏರಿಕೆಯಾಗಿದೆ.</p>.<p><strong>ಮೀನು ಏರಿಕೆ</strong>: ಅಂಜಲ್ ಇಳಿಕೆಯಾಗಿದ್ದರೆ, ಇತರೆ ಮೀನುಗಳು ಸಾಕಷ್ಟು ದುಬಾರಿಯಾಗಿವೆ. ಬಂಗುಡೆ ಕೆ.ಜಿ ₹260, ಬೂತಾಯಿ ಕೆ.ಜಿ ₹300, ಬೊಳಿಂಜರ್ ಕೆ.ಜಿ ₹250, ಅಂಜಲ್ ಕೆ.ಜಿ ₹880, ಕಪ್ಪುಮಾಂಜಿ ಕೆ.ಜಿ ₹810, ಇಂಡಿಯನ್ ಸಾಲ್ಮನ್ ಕೆ.ಜಿ ₹1,040, ಸೀಗಡಿ ಕೆ.ಜಿ ₹550–820, ಏಡಿ ಕೆ.ಜಿ ₹720ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>