<p><strong>ತುಮಕೂರು:</strong> ನಗರದ ವಿಜ್ಞಾನ ಕೇಂದ್ರದ ಸರ್ ಎಂ.ವಿ. ಸಭಾಂಗಣದಲ್ಲಿ ಅ. 1ರಂದು ಬೆಳಿಗ್ಗೆ 10.30ರಿಂದ ಸಂಜೆ 4ರ ವರೆಗೆ ಸಹಜ ಬೇಸಾಯ ಶಾಲೆ ಮತ್ತು ತುಮಕೂರು ವಿಜ್ಞಾನ ಕೇಂದ್ರವು ‘ಸಹಜ ಸತ್ಯಾಗ್ರಹ’ ರಾಜ್ಯ ಸಮಾವೇಶ ಹಮ್ಮಿಕೊಂಡಿವೆ.</p>.<p>‘ಗ್ರಾಮ ಸ್ವರಾಜ್ಯ, ಜಲಸ್ವರಾಜ್ಯಕ್ಕಾಗಿ ಆಸಕ್ತ ರೈತರನ್ನು ಸಹಜ ಬೇಸಾಯದಲ್ಲಿ ತೊಡಗಿಸಿ ಪ್ರೋತ್ಸಾಹಿಸುವ ಗುರಿಯನ್ನು ಈ ಸತ್ಯಾಗ್ರಹ ಹೊಂದಿದೆ. ಅಕ್ಟೋಬರ್ನಿಂದ ಆರಂಭವಾಗುವ ಸತ್ಯಾಗ್ರಹ ಒಂದು ವರ್ಷಗಳ ಕಾಲ ರಾಜ್ಯದಾದ್ಯಂತ ನಡೆಯಲಿದೆ’ ಎಂದು ಸಹಜ ಬೇಸಾಯ ಶಾಲೆ ಕಾರ್ಯದರ್ಶಿ ಸಿ.ಯತಿರಾಜು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>ರಾಜ್ಯದ ಹತ್ತು ಕೃಷಿ ಜೀವ ಪರಿಸರ ವಲಯಗಳಲ್ಲೂ ಸತ್ಯಾಗ್ರಹ ನಡೆಸಲಾಗುವುದು. ಸಹಜ ಬೇಸಾಯ ಶಾಲೆ ಈಗಾಗಲೇ ಸಹಜ ಬೇಸಾಯ ನೀತಿ ರೂಪಿಸಿದೆ. ಈ ಬಗ್ಗೆ ರೈತರು, ಗ್ರಾಹಕರು, ಕೃಷಿ ವಿಜ್ಞಾನಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಆಸಕ್ತ ಸಂಘ ಸಂಸ್ಥೆಗಳ ಸಹಕಾರದಲ್ಲಿ ವ್ಯಾಪಕ ಜನಜಾಗೃತಿ, ಸಮಾಲೋಚನಾ ಸಭೆಗಳನ್ನು ನಡೆಸಲಾಗುವುದು. ಇದು ಒಂದು ರೀತಿಯ ಜನಚಳವಳಿ ಆಗಿದೆ ಎಂದು ವಿವರಿಸಿದರು.</p>.<p>ಗ್ರಾಮೋದ್ಯೋಗಗಳನ್ನು ಪುನಶ್ಚೇತನಗೊಳಿಸಿ ವಿಕೇಂದ್ರಿಕೃತ ಗ್ರಾಮ ಸ್ವರಾಜ್ಯ ಸ್ಥಾಪಿಸಬಯಸುವ ಎರಡನೇ ಸ್ವಾತಂತ್ರ್ಯ ಚಳವಳಿಯನ್ನಾಗಿ ಸತ್ಯಾಗ್ರಹವನ್ನು ರೂಪಿಸುವ ಆಶಯ ಹೊಂದಲಾಗಿದೆ ಎಂದರು.</p>.<p>ರಾಜ್ಯದ ವಿವಿಧ ಜಿಲ್ಲೆಗಳ ಸಹಜ ಬೇಸಾಯ ಆಸಕ್ತರು ಸಮಾವೇಶದಲ್ಲಿ ಪಾಲ್ಗೊಳ್ಳುವರು. ಇವರು ಮುಂದಿನ ದಿನಗಳಲ್ಲಿ ತಮ್ಮ ಹಳ್ಳಿಗಳಲ್ಲಿ ಸತ್ಯಾಗ್ರಹದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವರು. ಸಹಜ ಬೇಸಾಯ ನೀತಿ ಜಾರಿಗಾಗಿ ಸ್ಥಳೀಯ ಗ್ರಾಮ ಸಭೆ ಮತ್ತು ಪಂಚಾಯಿತಿ ಮೂಲಕ ಸರ್ಕಾರವನ್ನು ಒತ್ತಾಯಿಸುವರು ಎಂದು ಹೇಳಿದರು.</p>.<p>ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಬಿ.ಮರುಳಯ್ಯ, ಕಾರ್ಯದರ್ಶಿ ಎಸ್.ರವಿಶಂಕರ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದರಾಜು, ಪ್ರಾಂತ ರೈತ ಸಂಘದ ಮುಖಂಡ ಬಿ.ಉಮೇಶ್ ಗೋಷ್ಠಿಯಲ್ಲಿ ಇದ್ದರು.</p>.<p>ಮಾಹಿತಿಗೆ ಡಾ.ಮಂಜುನಾಥ್ 9632226229 ಅಥವ ಸಿ.ಯತಿರಾಜು 9632670108 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ನಗರದ ವಿಜ್ಞಾನ ಕೇಂದ್ರದ ಸರ್ ಎಂ.ವಿ. ಸಭಾಂಗಣದಲ್ಲಿ ಅ. 1ರಂದು ಬೆಳಿಗ್ಗೆ 10.30ರಿಂದ ಸಂಜೆ 4ರ ವರೆಗೆ ಸಹಜ ಬೇಸಾಯ ಶಾಲೆ ಮತ್ತು ತುಮಕೂರು ವಿಜ್ಞಾನ ಕೇಂದ್ರವು ‘ಸಹಜ ಸತ್ಯಾಗ್ರಹ’ ರಾಜ್ಯ ಸಮಾವೇಶ ಹಮ್ಮಿಕೊಂಡಿವೆ.</p>.<p>‘ಗ್ರಾಮ ಸ್ವರಾಜ್ಯ, ಜಲಸ್ವರಾಜ್ಯಕ್ಕಾಗಿ ಆಸಕ್ತ ರೈತರನ್ನು ಸಹಜ ಬೇಸಾಯದಲ್ಲಿ ತೊಡಗಿಸಿ ಪ್ರೋತ್ಸಾಹಿಸುವ ಗುರಿಯನ್ನು ಈ ಸತ್ಯಾಗ್ರಹ ಹೊಂದಿದೆ. ಅಕ್ಟೋಬರ್ನಿಂದ ಆರಂಭವಾಗುವ ಸತ್ಯಾಗ್ರಹ ಒಂದು ವರ್ಷಗಳ ಕಾಲ ರಾಜ್ಯದಾದ್ಯಂತ ನಡೆಯಲಿದೆ’ ಎಂದು ಸಹಜ ಬೇಸಾಯ ಶಾಲೆ ಕಾರ್ಯದರ್ಶಿ ಸಿ.ಯತಿರಾಜು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>ರಾಜ್ಯದ ಹತ್ತು ಕೃಷಿ ಜೀವ ಪರಿಸರ ವಲಯಗಳಲ್ಲೂ ಸತ್ಯಾಗ್ರಹ ನಡೆಸಲಾಗುವುದು. ಸಹಜ ಬೇಸಾಯ ಶಾಲೆ ಈಗಾಗಲೇ ಸಹಜ ಬೇಸಾಯ ನೀತಿ ರೂಪಿಸಿದೆ. ಈ ಬಗ್ಗೆ ರೈತರು, ಗ್ರಾಹಕರು, ಕೃಷಿ ವಿಜ್ಞಾನಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಆಸಕ್ತ ಸಂಘ ಸಂಸ್ಥೆಗಳ ಸಹಕಾರದಲ್ಲಿ ವ್ಯಾಪಕ ಜನಜಾಗೃತಿ, ಸಮಾಲೋಚನಾ ಸಭೆಗಳನ್ನು ನಡೆಸಲಾಗುವುದು. ಇದು ಒಂದು ರೀತಿಯ ಜನಚಳವಳಿ ಆಗಿದೆ ಎಂದು ವಿವರಿಸಿದರು.</p>.<p>ಗ್ರಾಮೋದ್ಯೋಗಗಳನ್ನು ಪುನಶ್ಚೇತನಗೊಳಿಸಿ ವಿಕೇಂದ್ರಿಕೃತ ಗ್ರಾಮ ಸ್ವರಾಜ್ಯ ಸ್ಥಾಪಿಸಬಯಸುವ ಎರಡನೇ ಸ್ವಾತಂತ್ರ್ಯ ಚಳವಳಿಯನ್ನಾಗಿ ಸತ್ಯಾಗ್ರಹವನ್ನು ರೂಪಿಸುವ ಆಶಯ ಹೊಂದಲಾಗಿದೆ ಎಂದರು.</p>.<p>ರಾಜ್ಯದ ವಿವಿಧ ಜಿಲ್ಲೆಗಳ ಸಹಜ ಬೇಸಾಯ ಆಸಕ್ತರು ಸಮಾವೇಶದಲ್ಲಿ ಪಾಲ್ಗೊಳ್ಳುವರು. ಇವರು ಮುಂದಿನ ದಿನಗಳಲ್ಲಿ ತಮ್ಮ ಹಳ್ಳಿಗಳಲ್ಲಿ ಸತ್ಯಾಗ್ರಹದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವರು. ಸಹಜ ಬೇಸಾಯ ನೀತಿ ಜಾರಿಗಾಗಿ ಸ್ಥಳೀಯ ಗ್ರಾಮ ಸಭೆ ಮತ್ತು ಪಂಚಾಯಿತಿ ಮೂಲಕ ಸರ್ಕಾರವನ್ನು ಒತ್ತಾಯಿಸುವರು ಎಂದು ಹೇಳಿದರು.</p>.<p>ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಬಿ.ಮರುಳಯ್ಯ, ಕಾರ್ಯದರ್ಶಿ ಎಸ್.ರವಿಶಂಕರ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದರಾಜು, ಪ್ರಾಂತ ರೈತ ಸಂಘದ ಮುಖಂಡ ಬಿ.ಉಮೇಶ್ ಗೋಷ್ಠಿಯಲ್ಲಿ ಇದ್ದರು.</p>.<p>ಮಾಹಿತಿಗೆ ಡಾ.ಮಂಜುನಾಥ್ 9632226229 ಅಥವ ಸಿ.ಯತಿರಾಜು 9632670108 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>