ರಾಜ್ಯದ ಹತ್ತು ಕೃಷಿ ಜೀವ ಪರಿಸರ ವಲಯಗಳಲ್ಲೂ ಸತ್ಯಾಗ್ರಹ ನಡೆಸಲಾಗುವುದು. ಸಹಜ ಬೇಸಾಯ ಶಾಲೆ ಈಗಾಗಲೇ ಸಹಜ ಬೇಸಾಯ ನೀತಿ ರೂಪಿಸಿದೆ. ಈ ಬಗ್ಗೆ ರೈತರು, ಗ್ರಾಹಕರು, ಕೃಷಿ ವಿಜ್ಞಾನಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಆಸಕ್ತ ಸಂಘ ಸಂಸ್ಥೆಗಳ ಸಹಕಾರದಲ್ಲಿ ವ್ಯಾಪಕ ಜನಜಾಗೃತಿ, ಸಮಾಲೋಚನಾ ಸಭೆಗಳನ್ನು ನಡೆಸಲಾಗುವುದು. ಇದು ಒಂದು ರೀತಿಯ ಜನಚಳವಳಿ ಆಗಿದೆ ಎಂದು ವಿವರಿಸಿದರು.