ನಂತರ ಶಾಲಾ ಆವರಣ ಪರಿಶೀಲಿಸಿದರು. ಮಕ್ಕಳಿಂದ ಮಗ್ಗಿ ಹೇಳಿಸಿದರು. ನಲಿ ಕಲಿಯ ಹಾಡುಗಳನ್ನು ಹೇಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪಕ್ಕದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕಾರ್ಯಕರ್ತೆಯಿಂದ ಮಕ್ಕಳ ಸಂಖ್ಯೆ, ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಪಡೆದರು. ಶಾಲೆ ಪ್ರವೇಶದಲ್ಲಿ ನೀರು ನಿಂತಿದ್ದನ್ನು ಗಮನಿಸಿ ನೀರು ನಿಲ್ಲದಂತೆ ಕ್ರಮಕೈಗೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.