ರಾಜಕೀಯವಾಗಿ ಸಹಾಯ ಮಾಡುತ್ತೇನೆಂದು ಗ್ರಾಮದ ಯುವಕರನ್ನು ಪುಸಲಾಯಿಸಿ ಸಂಜೆ ವೇಳೆ ಕರೆಸಿಕೊಂಡು ಅವರ ಜತೆ ಮದ್ಯಪಾನ ಮಾಡುತ್ತಿದ್ದರು. ನಗದು ವಹಿ ಅಸಮರ್ಪಕ ನಿರ್ವಹಣೆ, ಶಾಲಾ ಅನುದಾನ ದುರ್ಬಳಕೆ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಶಾಸಕರು ಕರೆದಿದ್ದಾರೆ ಎಂಬ ನೆಪ ಹೇಳಿಕೊಂಡು ಅನಧಿಕೃತವಾಗಿ ಗೈರಾಗುವುದು, ಶಾಲೆಗೆ ತಡವಾಗಿ ಬಂದು, ಬೇಗ ಹೊರಟು ಹೋಗುತ್ತಾರೆ. ಗ್ರಾಮದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಡಿಡಿಪಿಐಗೆ ಒಂದು ತಿಂಗಳ ಹಿಂದೆಯೇ ದೂರು ಸಲ್ಲಿಸಿದ್ದರು.