<p><strong>ತುರುವೇಕೆರೆ:</strong> ಬೌದ್ಧಿಕ ಹಾಗೂ ಜ್ಞಾನ ವಿಕಾಸ ಕೇಂದ್ರಗಳಾದ ಗ್ರಂಥಾಲಯಗಳಲ್ಲಿ ಕುಳಿತು ಓದುವ ಸದಭಿರುಚಿಯನ್ನು ಮಕ್ಕಳಲ್ಲಿ ಪೋಷಕರು ಬೆಳೆಸಬೇಕು ಎಂದು ಚಿದಂಬರ ಉಚಿತ ಗ್ರಂಥಾಲಯದ ಸ್ಥಾಪಕ ರಾಮಚಂದ್ರು ಹೇಳಿದರು.</p>.<p>ಪಟ್ಟಣದ ಜೆ.ಪಿ.ಶಾಲಾ ಆವರಣದಲ್ಲಿ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.</p>.<p>ಭೌದ್ಧಿಕ ಸಾಮರ್ಥ್ಯದ ಹೆಚ್ಚಳದೊಂದಿಗೆ ಬಹಳಷ್ಟು ದೇಶಗಳು ಇಂದು ಪ್ರಗತಿಪಥದಲ್ಲಿವೆ. ದೇಶದ ಪ್ರಭುತ್ವ ಸಾಂಸ್ಕೃತಿಕ ಹಿರಿಮೆ, ಇತಿಹಾಸ, ಹಿರಿಯರ ಅನುಭವಗಳು ನೈಜ ಘಟನೆಗಳು ಭವಿಷ್ಯತ್ತಿನ ಜನರಿಗೆ ಮಾರ್ಗದರ್ಶಿಯಾಗಲಿದೆ ಎಂದರು.</p>.<p>ಆಡಳಿತಾಧಿಕಾರಿ ಟಿ.ಬಿ.ಮಂಜುನಾಥ ಮಾತನಾಡಿ, 2500ಕ್ಕೂ ಹೆಚ್ಚಿನ ಉತ್ತಮ ಗ್ರಂಥಗಳು, ಜ್ಞಾನಾರ್ಜನೆಯ ವೈಜ್ಞಾನಿಕ ವಿಸ್ಮಯಗಳ ಅಡಕದ ಪುಸ್ತಕಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಇದರ ಸದುಪಯೋಗದೊಂದಿಗೆ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.</p>.<p>ಗೆಳೆಯರ ಬಳಗದ ಅಧ್ಯಕ್ಷರಾದ ಜಿ.ಆರ್.ರಂಗೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಮಂಡಳಿಯ ಪ್ರಕಾಶ್ಗುಪ್ತ, ಲಕ್ಷ್ಮಿನಾರಾಯಣ್, ತಿರುಮಲಯ್ಯ, ಜಯಮ್ಮಶಿವಶೇಖರೇಗೌಡ, ಶಿವಲೀಲಜಯರಾಮಯ್ಯ, ಮುಖ್ಯೋಪಾಧ್ಯಾಯ ತುಕಾರಾಂ, ಪ್ರಕಾಶ್, ಮಹಾಲಕ್ಷ್ಮಿ, ಪ್ರದೀಪ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುರುವೇಕೆರೆ:</strong> ಬೌದ್ಧಿಕ ಹಾಗೂ ಜ್ಞಾನ ವಿಕಾಸ ಕೇಂದ್ರಗಳಾದ ಗ್ರಂಥಾಲಯಗಳಲ್ಲಿ ಕುಳಿತು ಓದುವ ಸದಭಿರುಚಿಯನ್ನು ಮಕ್ಕಳಲ್ಲಿ ಪೋಷಕರು ಬೆಳೆಸಬೇಕು ಎಂದು ಚಿದಂಬರ ಉಚಿತ ಗ್ರಂಥಾಲಯದ ಸ್ಥಾಪಕ ರಾಮಚಂದ್ರು ಹೇಳಿದರು.</p>.<p>ಪಟ್ಟಣದ ಜೆ.ಪಿ.ಶಾಲಾ ಆವರಣದಲ್ಲಿ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.</p>.<p>ಭೌದ್ಧಿಕ ಸಾಮರ್ಥ್ಯದ ಹೆಚ್ಚಳದೊಂದಿಗೆ ಬಹಳಷ್ಟು ದೇಶಗಳು ಇಂದು ಪ್ರಗತಿಪಥದಲ್ಲಿವೆ. ದೇಶದ ಪ್ರಭುತ್ವ ಸಾಂಸ್ಕೃತಿಕ ಹಿರಿಮೆ, ಇತಿಹಾಸ, ಹಿರಿಯರ ಅನುಭವಗಳು ನೈಜ ಘಟನೆಗಳು ಭವಿಷ್ಯತ್ತಿನ ಜನರಿಗೆ ಮಾರ್ಗದರ್ಶಿಯಾಗಲಿದೆ ಎಂದರು.</p>.<p>ಆಡಳಿತಾಧಿಕಾರಿ ಟಿ.ಬಿ.ಮಂಜುನಾಥ ಮಾತನಾಡಿ, 2500ಕ್ಕೂ ಹೆಚ್ಚಿನ ಉತ್ತಮ ಗ್ರಂಥಗಳು, ಜ್ಞಾನಾರ್ಜನೆಯ ವೈಜ್ಞಾನಿಕ ವಿಸ್ಮಯಗಳ ಅಡಕದ ಪುಸ್ತಕಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಇದರ ಸದುಪಯೋಗದೊಂದಿಗೆ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.</p>.<p>ಗೆಳೆಯರ ಬಳಗದ ಅಧ್ಯಕ್ಷರಾದ ಜಿ.ಆರ್.ರಂಗೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಮಂಡಳಿಯ ಪ್ರಕಾಶ್ಗುಪ್ತ, ಲಕ್ಷ್ಮಿನಾರಾಯಣ್, ತಿರುಮಲಯ್ಯ, ಜಯಮ್ಮಶಿವಶೇಖರೇಗೌಡ, ಶಿವಲೀಲಜಯರಾಮಯ್ಯ, ಮುಖ್ಯೋಪಾಧ್ಯಾಯ ತುಕಾರಾಂ, ಪ್ರಕಾಶ್, ಮಹಾಲಕ್ಷ್ಮಿ, ಪ್ರದೀಪ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>