<p><strong>ತುರುವೇಕೆರೆ</strong>: ಆಡಂಬರವಿಲ್ಲದೆ ಈ ಬಾರಿ ಪಟ್ಟಣದ ಸತ್ಯಗಣಪತಿ ಮೂರ್ತಿಯನ್ನು ಸೋಮವಾರ ತೆಪ್ಪೋತ್ಸವದ ಮೂಲಕ ಕೆರೆಯಲ್ಲಿ ವಿಸರ್ಜಿಸಲಾಯಿತು.</p>.<p>ಗಣೇಶ ಮೂರ್ತಿಯನ್ನು ಬೆಳಿಗ್ಗೆ ಭವ್ಯ ಮೆರವಣಿಗೆಯಲ್ಲಿ ಪಟ್ಟಣದ ತಿಪಟೂರು ರಸ್ತೆ ಮೂಲಕ ಸಂತೆ ಬಳಿ ಇರುವ ಕೆರೆಗೆ ನಾದಸ್ವರ ಹಾಗೂ ಮಂಗಳ ವಾದ್ಯದ ಮೂಲಕ ಕರೆತರಲಾಯಿತು.</p>.<p>ಸಮಿತಿಯ ಅಧ್ಯಕ್ಷ ಆರ್. ಮಲ್ಲಿಕಾರ್ಜುನ್, ಕಾರ್ಯದರ್ಶಿ ನಾಗರಾಜು, ಪದಾಧಿಕಾರಿಗಳಾದ ರಘು, ನರಸಿಂಹಯ್ಯ, ಚಂದ್ರಣ್ಣ, ಟಿ.ಎನ್. ಸತೀಶ್ ಸೇರಿದಂತೆ ಹಲವು ಮಂದಿ ಮೆರವಣಿಗೆಯ ನೇತೃತ್ವ ವಹಿಸಿದ್ದರು.</p>.<p>ಸಿಪಿಐ ನವೀನ್ ಮತ್ತು ಪಿಎಸ್ಐಗಳಾದ ಪ್ರೀತಮ್ ಮತ್ತು ಶಿವಲಿಂಗಯ್ಯ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.</p>.<p>ಈ ಬಾರಿ ಸಿಡಿಮದ್ದು ಅಬ್ಬರ ಇಲ್ಲದೇ ಗಣಪತಿಯನ್ನು ತೆಪ್ಪದಲ್ಲಿ ಸಾಗಿಸಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಅಪಾರ ಸಂಖ್ಯೆಯ ಭಕ್ತಾದಿಗಳು ಗಣಪತಿ ವಿಸರ್ಜನೆ ಯನ್ನು ನೋಡಿ ಕಣ್ತುಂಬಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುರುವೇಕೆರೆ</strong>: ಆಡಂಬರವಿಲ್ಲದೆ ಈ ಬಾರಿ ಪಟ್ಟಣದ ಸತ್ಯಗಣಪತಿ ಮೂರ್ತಿಯನ್ನು ಸೋಮವಾರ ತೆಪ್ಪೋತ್ಸವದ ಮೂಲಕ ಕೆರೆಯಲ್ಲಿ ವಿಸರ್ಜಿಸಲಾಯಿತು.</p>.<p>ಗಣೇಶ ಮೂರ್ತಿಯನ್ನು ಬೆಳಿಗ್ಗೆ ಭವ್ಯ ಮೆರವಣಿಗೆಯಲ್ಲಿ ಪಟ್ಟಣದ ತಿಪಟೂರು ರಸ್ತೆ ಮೂಲಕ ಸಂತೆ ಬಳಿ ಇರುವ ಕೆರೆಗೆ ನಾದಸ್ವರ ಹಾಗೂ ಮಂಗಳ ವಾದ್ಯದ ಮೂಲಕ ಕರೆತರಲಾಯಿತು.</p>.<p>ಸಮಿತಿಯ ಅಧ್ಯಕ್ಷ ಆರ್. ಮಲ್ಲಿಕಾರ್ಜುನ್, ಕಾರ್ಯದರ್ಶಿ ನಾಗರಾಜು, ಪದಾಧಿಕಾರಿಗಳಾದ ರಘು, ನರಸಿಂಹಯ್ಯ, ಚಂದ್ರಣ್ಣ, ಟಿ.ಎನ್. ಸತೀಶ್ ಸೇರಿದಂತೆ ಹಲವು ಮಂದಿ ಮೆರವಣಿಗೆಯ ನೇತೃತ್ವ ವಹಿಸಿದ್ದರು.</p>.<p>ಸಿಪಿಐ ನವೀನ್ ಮತ್ತು ಪಿಎಸ್ಐಗಳಾದ ಪ್ರೀತಮ್ ಮತ್ತು ಶಿವಲಿಂಗಯ್ಯ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.</p>.<p>ಈ ಬಾರಿ ಸಿಡಿಮದ್ದು ಅಬ್ಬರ ಇಲ್ಲದೇ ಗಣಪತಿಯನ್ನು ತೆಪ್ಪದಲ್ಲಿ ಸಾಗಿಸಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಅಪಾರ ಸಂಖ್ಯೆಯ ಭಕ್ತಾದಿಗಳು ಗಣಪತಿ ವಿಸರ್ಜನೆ ಯನ್ನು ನೋಡಿ ಕಣ್ತುಂಬಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>