<p><strong>ತುರುವೇಕೆರೆ:</strong> ಪಟ್ಟಣದ ಕೆಲವು ವಾರ್ಡ್ಗಳಲ್ಲಿ ವಿದ್ಯುತ್ ಬಿಲ್ ವ್ಯತ್ಯಾಸವಾಗಿರುವ ಬಗ್ಗೆ ಗ್ರಾಹಕರು ಮನವಿ ನೀಡಿದ್ದ ಕಾರಣ, ಬೆಸ್ಕಾಂನ ಅಧೀಕ್ಷಕ ಎಂಜಿನಿಯರ್ ಲೋಕೇಶ್ ಅವರು ಇಲ್ಲಿನ ಬೆಸ್ಕಾಂ ಇಲಾಖೆಗೆ ಭೇಟಿ ನೀಡಿ, ಗ್ರಾಹಕರ ಸಮಸ್ಯೆ ಆಲಿಸಿದರು.</p>.<p>ಪಟ್ಟಣದ ಬೆಸ್ಕಾಂ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಹಕರ ಸಂಧಾನ ಸಭೆಯಲ್ಲಿ ಅವರು ಮಾತನಾಡಿದ ಅವರು, ಪ್ರತಿ ತಿಂಗಳು ಓಡಿದ ರೀಡಿಂಗ್ ಪ್ರಮಾಣವನ್ನು ನಿಗದಿತ ಸಮಯದಲ್ಲಿ ಬರೆಯದ ಕಾರಣ ಒಮ್ಮೆಲೆ ಪಟ್ಟಣದ ಸುಮಾರು 676 ಗ್ರಾಹಕರಿಗೆ ₹92 ಲಕ್ಷ ಬಿಲ್ ಬಂದಿರುವುದು ಗ್ರಾಹಕರಿಗೆ ಹೊರೆಯಾಗಿದೆ ಎಂದರು.</p>.<p>ಗ್ರಾಹಕರಿಗೆ ಹೊರೆಯಾಗದೆ, ಇತ್ತ ಇಲಾಖೆಗೂ ನಷ್ಟವಾಗದ ರೀತಿಯಲ್ಲಿ ಇಲಾಖೆ ಕೂಲಂಕಷವಾಗಿ ಪರಿಶೀಲಿಸಿ ಇದೀಗ ₹47.35 ಲಕ್ಷ ಮಾತ್ರ ಪಾವತಿಸುವಂತೆ ಗ್ರಾಹಕರಲ್ಲಿ ಮನವಿ ಮಾಡಿದರು.</p>.<p>ಮುಂದೆ ಈ ರೀತಿಯ ತಪ್ಪಾಗದಂತೆ ಇಲಾಖೆ ಎಚ್ಚರಿಕೆ ವಹಿಸಲಿದ್ದು, ಗ್ರಾಹಕರು ಪರಿಶೀಲನೆಗೊಂಡ ಬಿಲ್ ಮೊತ್ತವನ್ನು ಪಾವತಿ ಮಾಡುವ ಮೂಲಕ ಸಹಕರಿಸಬೇಕು ಎಂದರು.</p>.<p>ಎಇಇ ಚಂದ್ರನಾಯಕ್ ಮಾತನಾಡಿ, ಈಗಾಗಲೇ ಬಂದಿರುವ ₹92 ಲಕ್ಷ ಬಿಲ್ ಮೊತ್ತದಲ್ಲಿ ಶೇ 50ರಷ್ಟನ್ನು ಕಡಿತ ಮಾಡಿದ್ದು, ಉಳಿದ ಹಣವನ್ನು ವಿವಿಧ ಹಂತದಲ್ಲಿ ನಿಗದಿತ ಸಮಯದೊಳಗೆ ಗ್ರಾಹಕರು ಪಾವತಿಸುವ ಮೂಲಕ ಸಹಕರಿಸಬೇಕು ಎಂದು ಮನವಿ<br />ಮಾಡಿದರು.</p>.<p>ಪ.ಪಂ.ಅಧ್ಯಕ್ಷ ಅಂಜನ್ ಕುಮಾರ್, ಸದಸ್ಯರಾದ ಎನ್.ಆರ್.ಸುರೇಶ್, ಆಶಾ ರಾಜಶೇಖರ್, ಮಧು, ಚಿದಾನಂದ್, ನದೀಂ, ಉಪಲೆಕ್ಕ ನಿಯಂತ್ರಣಾಧಿಕಾರಿ ಚಂದ್ರು, ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ ಗೌಡ, ಲೆಕ್ಕಾಧಿಕಾರಿ ಕುಮಾರಸ್ವಾಮಿ, ವಿವಿಧ ಸಂಘಟನೆಗಳ ಮುಖಂಡರಾದ ಅಸ್ಲಾಂಪಾಷಾ, ಸುರೇಶ್, ಸತೀಶ್, ವೆಂಕಟೇಶ್, ಗಂಗಾಧರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುರುವೇಕೆರೆ:</strong> ಪಟ್ಟಣದ ಕೆಲವು ವಾರ್ಡ್ಗಳಲ್ಲಿ ವಿದ್ಯುತ್ ಬಿಲ್ ವ್ಯತ್ಯಾಸವಾಗಿರುವ ಬಗ್ಗೆ ಗ್ರಾಹಕರು ಮನವಿ ನೀಡಿದ್ದ ಕಾರಣ, ಬೆಸ್ಕಾಂನ ಅಧೀಕ್ಷಕ ಎಂಜಿನಿಯರ್ ಲೋಕೇಶ್ ಅವರು ಇಲ್ಲಿನ ಬೆಸ್ಕಾಂ ಇಲಾಖೆಗೆ ಭೇಟಿ ನೀಡಿ, ಗ್ರಾಹಕರ ಸಮಸ್ಯೆ ಆಲಿಸಿದರು.</p>.<p>ಪಟ್ಟಣದ ಬೆಸ್ಕಾಂ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಹಕರ ಸಂಧಾನ ಸಭೆಯಲ್ಲಿ ಅವರು ಮಾತನಾಡಿದ ಅವರು, ಪ್ರತಿ ತಿಂಗಳು ಓಡಿದ ರೀಡಿಂಗ್ ಪ್ರಮಾಣವನ್ನು ನಿಗದಿತ ಸಮಯದಲ್ಲಿ ಬರೆಯದ ಕಾರಣ ಒಮ್ಮೆಲೆ ಪಟ್ಟಣದ ಸುಮಾರು 676 ಗ್ರಾಹಕರಿಗೆ ₹92 ಲಕ್ಷ ಬಿಲ್ ಬಂದಿರುವುದು ಗ್ರಾಹಕರಿಗೆ ಹೊರೆಯಾಗಿದೆ ಎಂದರು.</p>.<p>ಗ್ರಾಹಕರಿಗೆ ಹೊರೆಯಾಗದೆ, ಇತ್ತ ಇಲಾಖೆಗೂ ನಷ್ಟವಾಗದ ರೀತಿಯಲ್ಲಿ ಇಲಾಖೆ ಕೂಲಂಕಷವಾಗಿ ಪರಿಶೀಲಿಸಿ ಇದೀಗ ₹47.35 ಲಕ್ಷ ಮಾತ್ರ ಪಾವತಿಸುವಂತೆ ಗ್ರಾಹಕರಲ್ಲಿ ಮನವಿ ಮಾಡಿದರು.</p>.<p>ಮುಂದೆ ಈ ರೀತಿಯ ತಪ್ಪಾಗದಂತೆ ಇಲಾಖೆ ಎಚ್ಚರಿಕೆ ವಹಿಸಲಿದ್ದು, ಗ್ರಾಹಕರು ಪರಿಶೀಲನೆಗೊಂಡ ಬಿಲ್ ಮೊತ್ತವನ್ನು ಪಾವತಿ ಮಾಡುವ ಮೂಲಕ ಸಹಕರಿಸಬೇಕು ಎಂದರು.</p>.<p>ಎಇಇ ಚಂದ್ರನಾಯಕ್ ಮಾತನಾಡಿ, ಈಗಾಗಲೇ ಬಂದಿರುವ ₹92 ಲಕ್ಷ ಬಿಲ್ ಮೊತ್ತದಲ್ಲಿ ಶೇ 50ರಷ್ಟನ್ನು ಕಡಿತ ಮಾಡಿದ್ದು, ಉಳಿದ ಹಣವನ್ನು ವಿವಿಧ ಹಂತದಲ್ಲಿ ನಿಗದಿತ ಸಮಯದೊಳಗೆ ಗ್ರಾಹಕರು ಪಾವತಿಸುವ ಮೂಲಕ ಸಹಕರಿಸಬೇಕು ಎಂದು ಮನವಿ<br />ಮಾಡಿದರು.</p>.<p>ಪ.ಪಂ.ಅಧ್ಯಕ್ಷ ಅಂಜನ್ ಕುಮಾರ್, ಸದಸ್ಯರಾದ ಎನ್.ಆರ್.ಸುರೇಶ್, ಆಶಾ ರಾಜಶೇಖರ್, ಮಧು, ಚಿದಾನಂದ್, ನದೀಂ, ಉಪಲೆಕ್ಕ ನಿಯಂತ್ರಣಾಧಿಕಾರಿ ಚಂದ್ರು, ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ ಗೌಡ, ಲೆಕ್ಕಾಧಿಕಾರಿ ಕುಮಾರಸ್ವಾಮಿ, ವಿವಿಧ ಸಂಘಟನೆಗಳ ಮುಖಂಡರಾದ ಅಸ್ಲಾಂಪಾಷಾ, ಸುರೇಶ್, ಸತೀಶ್, ವೆಂಕಟೇಶ್, ಗಂಗಾಧರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>