ಮಧುಗಿರಿ: ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ವೀರಣ್ಣನಹಳ್ಳಿಯಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಪುಟ್ಟಲಿಂಗಣ್ಣ (45) ಮೃತಪಟ್ಟವರು.
ಕೆರೆಯಲ್ಲಿ ಮೀನು ಹಿಡಿಯಲು ಬಲೆ ಸಮೇತ ಪುಟ್ಟಲಿಂಗಣ್ಣ, ಕೆಂಚಣ್ಣ ಹಾಗೂ ರಂಗನಾಥ ತೆರಳಿದ್ದಾರೆ. ಕೆರೆಯಲ್ಲಿ ಮೀನಿನ ಬಲೆ ಬಿಟ್ಟು, ಪುನಃ ಬಲೆ ತೆಗೆಯಲು ಹೋದಾಗ ಪುಟ್ಟಲಿಂಗಣ್ಣ ಕಾಲಿಗೆ ಬಲೆ ಸಿಲುಕಿಕೊಂಡು ನೀರಿನಲ್ಲಿ ಮುಳುಗಿದ್ದಾರೆ. ಈ ವಿಷಯವನ್ನು ಪತ್ನಿ ರಾಮಕ್ಕ ಅವರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.