ಹರಿಕಥೆ ಕಲಾವಿದ ಲಕ್ಷ್ಮಣದಾಸ್, ‘ಕೋವಿಡ್-19ನಿಂದಾಗಿ ಕಲಾವಿದರು ಈಗಲೂ ಸಂಕಷ್ಟದಲ್ಲೇ ಬದುಕು ದೂಡುತ್ತಿದ್ದಾರೆ. ಪೌರಾಣಿಕ ರಂಗಭೂಮಿ ಕಲಾವಿದರು ಕಳೆದ ಒಂದು ವರ್ಷದಿಂದ ಉಪವಾಸ ಅನುಭವಿಸಿದ್ದಾರೆ. ಸರ್ಕಾರವು ಸಭೆ, ಸಮಾರಂಭ, ಇನ್ನಿತರೆ ಕಾರ್ಯಕ್ರಮಗಳಿಗೆ ಈಗ ನಿರ್ಬಂಧ ವಿಧಿಸಿದ್ದು, ಇದರಿಂದಾಗಿ ನಾಟಕ ಪ್ರದರ್ಶನಗಳು ನಿಂತುಹೋಗಿದೆ’ ಎಂದು ತಿಳಿಸಿದರು.