ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡು ಹಗಲೇ ಕಳ್ಳತನ

Last Updated 27 ಅಕ್ಟೋಬರ್ 2020, 3:59 IST
ಅಕ್ಷರ ಗಾತ್ರ

ಗುಬ್ಬಿ: ಮನೆಗೆ ನುಗ್ಗಿ ಮಹಿಳೆಯ ಕತ್ತಿನಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಸಿದು ಪರಾರಿಗೆ ಯತ್ನಿಸಿದ ಕಳ್ಳನೊಬ್ಬನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ ಮದ್ಯಾಹ್ನ ಗುಬ್ಬಿ ಪಟ್ಟಣದಲ್ಲಿ ನಡೆದಿದೆ.

ಸರ್ಕಲ್ ಬಳಿಯ ಅಂಗಡಿ ಮಾಲೀಕ ಆನಂದ್ ಅವರ ಪತ್ನಿ ಪೂಜೆ ಮುಗಿಸಿ ತಮ್ಮ ಮನೆಗೆ ತೆರಳಿದ ಸಂದರ್ಭದಲ್ಲಿ ಅವರನ್ನೇ ಹಿಂಬಾಲಿಸಿ ಮನೆಗೆ ನುಗ್ಗಿದ ದುಷ್ಕರ್ಮಿ ಅವರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಸಿದು ಅಲ್ಲಿಂದ ಕಾಲ್ಕಿತ್ತಿದ್ದ. ಮಹಿಳೆಯ ಆಕ್ರಂದನ ಆಲಿಸಿದ ಸ್ಥಳೀಯ ಯುವಕರು ಕಳ್ಳನನ್ನು ಹಿಂಬಾಲಿಸಿ ಹುಡುಕಾಟ ನಡೆಸಿದರು. ಕಾಯೀಪೇಟೆ ಮಸೀದಿಯ ಪಕ್ಕದ ಬೇಲಿ ಸಾಲಿನಲ್ಲಿ ಅವಿತಿದ್ದ ಕಳ್ಳನನ್ನು ಹಿಡಿದು ತಕ್ಷಣ ಗುಬ್ಬಿ ಪೊಲೀಸರಿಗೆ ಒಪ್ಪಿಸಿದರು.

ಸ್ಥಳೀಯ ಆಟೊಚಾಲಕ ಈ ದುಷ್ಕೃತ್ಯ ನಡೆಸಿರುವ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣ ದಾಖಲಿಸಿಕೊಂಡ ಗುಬ್ಬಿ ಠಾಣಾ ಪಿಎಸ್‍ಐ ಕಾಂತರಾಜು ಮುಂದಿನ ತನಿಖೆ ನಡೆಸಿದ್ದಾರೆ. ಹಾಡುಹಗಲೇ ಮನೆಗೆ ನುಗ್ಗಿದ ಘಟನೆ ಪಟ್ಟಣದ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಇಂತಹ ಘಟನೆ ಜನನಿಬೀಡ ಪ್ರದೇಶದಲ್ಲಿ ನಡೆದಿದೆ. ಪವನ್ ಕ್ಲಿನಿಕ್ ಪಕ್ಕದ ಮನೆಯಲ್ಲಿ ನಡೆದಿರುವ ಘಟನೆ ಜನರಲ್ಲಿ ಆತಂಕ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT