ಸರ್ಕಲ್ ಬಳಿಯ ಅಂಗಡಿ ಮಾಲೀಕ ಆನಂದ್ ಅವರ ಪತ್ನಿ ಪೂಜೆ ಮುಗಿಸಿ ತಮ್ಮ ಮನೆಗೆ ತೆರಳಿದ ಸಂದರ್ಭದಲ್ಲಿ ಅವರನ್ನೇ ಹಿಂಬಾಲಿಸಿ ಮನೆಗೆ ನುಗ್ಗಿದ ದುಷ್ಕರ್ಮಿ ಅವರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಸಿದು ಅಲ್ಲಿಂದ ಕಾಲ್ಕಿತ್ತಿದ್ದ. ಮಹಿಳೆಯ ಆಕ್ರಂದನ ಆಲಿಸಿದ ಸ್ಥಳೀಯ ಯುವಕರು ಕಳ್ಳನನ್ನು ಹಿಂಬಾಲಿಸಿ ಹುಡುಕಾಟ ನಡೆಸಿದರು. ಕಾಯೀಪೇಟೆ ಮಸೀದಿಯ ಪಕ್ಕದ ಬೇಲಿ ಸಾಲಿನಲ್ಲಿ ಅವಿತಿದ್ದ ಕಳ್ಳನನ್ನು ಹಿಡಿದು ತಕ್ಷಣ ಗುಬ್ಬಿ ಪೊಲೀಸರಿಗೆ ಒಪ್ಪಿಸಿದರು.