ಹಲವಾರು ಪುಸ್ತಕಗಳನ್ನು ಜೋಡಿಸಿಡಲು ರ್ಯಾಕ್ಗಳ ವ್ಯವಸ್ಥೆ ಇಲ್ಲದೇ ಅನಿವಾರ್ಯವಾಗಿ ಚೀಲದಲ್ಲಿ ಇಡಲಾಗಿದೆ. ಪಂಚಾಯಿತಿ ಹಾಗೂ ಗ್ರಂಥಾಲಯ ಇಲಾಖೆಯವರು ಪುಸ್ತಕ ಜೋಡಿಸಿಡಲು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲು ರ್ಯಾಕ್, ತೆರೆದ ಕಪಾಟು ಮತ್ತು ಅಲ್ಮೆರಾ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಬ್ರಹ್ಮಸಮುದ್ರದ ಎಂ.ಜಿ.ನಾಗರಾಜು, ಬಿ.ಎಲ್. ದೇವರಾಜು, ಬಿ.ಎಸ್. ಮಮತಾಕ್ಷಿ, ಬಿ.ಎಸ್.ಸಿದ್ದಲಿಂಗಯ್ಯ, ರಮೇಶ್, ಮಂಜುನಾಥ್ ರಾವ್ ಮನವಿ ಮಾಡಿದ್ದಾರೆ.