ಹಾಸ್ಟೆಲ್ನಲ್ಲಿ ಸರಿಯಾಗಿ ಊಟ ನೀಡದಿರುವುದು, ಇತರ ಸಮಸ್ಯೆಗಳನ್ನು ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಹಿಂಸೆ ನೀಡಿ ಹೊರಗೆ ಕಳುಹಿಸಲಾಗಿದೆ. ದಾರಿ ಕಾಣದ ಮಕ್ಕಳು ನಾಗವಲ್ಲಿ ಸಮೀಪದ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದರು. ಇದನ್ನು ಗಮನಿಸಿದ ಪೊಲೀಸರು ವಿಚಾರಣೆ ಮಾಡಿದಾಗ ಹಾಸ್ಟೆಲ್ನಿಂದ ಹೊರಗೆ ಕಳುಹಿಸಿರುವುದು ಬೆಳಕಿಗೆ ಬಂದಿದೆ. ನಂತರ ಆ ಮಕ್ಕಳನ್ನು ಹಾಸ್ಟೆಲ್ಗೆ ಕಳುಹಿಸಿಕೊಡಲಾಗಿತ್ತು.