<p><strong>ತಿಪಟೂರು:</strong> ಬಳ್ಳಾರಿ– ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಗಾಗಿ ಜಿಲ್ಲೆಯ ಮೂರು ತಾಲ್ಲೂಕಿನ ಸಾವಿರಾರು ಮರಗಳನ್ನು ಹನನ<br />ಮಾಡಲಾಗಿದೆ.</p>.<p>ಬಳ್ಳಾರಿಯಿಂದ ಚಾಮರಾಜನಗರದವರೆಗೆ ರಾಷ್ಟ್ರೀಯ ಹೆದ್ದಾರಿ 150ಎ ಅನ್ನುಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ಜಿಲ್ಲೆ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಇದರಿಂದ 425 ಕಿ.ಮೀ ರಸ್ತೆ ಅಭಿವೃದ್ಧಿಗೆ ಮಂಜೂರಾತಿ ದೊರೆತಿದ್ದು, ರಸ್ತೆಯ ಬದಿಯಲ್ಲಿ ಇದ್ದ ನೂರಾರು ವರ್ಷ ವಯಸ್ಸಿನ ಸಾವಿರಾರು ಮರಗಳನ್ನು ಕಡಿಯಲಾಗಿದೆ.</p>.<p>ಬಳ್ಳಾರಿಯಿಂದ ಚಳ್ಳಕೆರೆ, ಹಿರಿಯೂರು, ಹುಳಿಯಾರು, ಚಿಕ್ಕನಾಯಕನಹಳ್ಳಿ, ತಿಪಟೂರಿನ ಕೆ.ಬಿ.ಕ್ರಾಸ್, ತುರುವೇಕೆರೆ, ನಾಗಮಂಗಲ, ಶ್ರೀರಂಗಪಟ್ಟಣ, ಮೈಸೂರು, ನಂಜನಗೂಡು ಮಾರ್ಗವಾಗಿ ಚಾಮರಾಜನಗರ ತಲುಪುವ ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆಯ ಎರಡು ಬದಿಯಲ್ಲಿ ಸಾವಿರಾರು ಗಿಡ- ಮರಗಳನ್ನು ಕಾಣಬಹುದಿತ್ತು. ಆದರೆ, ಈ ರಸ್ತೆಯನ್ನು ಅಭಿವೃದ್ಧಿ ಮಾಡುವ ಉದ್ದೇಶದಿಂದ ಎಲ್ಲ ಮರಗಳನ್ನು ಕತ್ತರಿಸಲಾಗುತ್ತಿದೆ.</p>.<p>ಹುಳಿಯಾರಿನಿಂದ ಚಿಕ್ಕನಾಯಕನಹಳ್ಳಿ ಹಾಲುಗೊಣದವರೆಗೆ ಎಡ ಭಾಗದಲ್ಲಿ 757, ಬಲಭಾಗದಲ್ಲಿ 995 ಸೇರಿ ಒಟ್ಟು 1752 ಮರಗಳು ಹಾಗೂ ಹಾಲುಗೊಣದಿಂದ ಕೆ.ಬಿ.ಕ್ರಾಸ್ ಬಳಿಗೆ 179 ಮರಗಳನ್ನು ಕಡಿಯಲಾಗಿದೆ. ಅದರಲ್ಲಿ ಎಷ್ಟೋ ಮರಗಳು<br />ನೂರಾರು ವರ್ಷದಷ್ಟು ಹಳೆಯವು.</p>.<p>ಪರಿಸರ ತಜ್ಞರೊಬ್ಬರ ಪ್ರಕಾರ 200 ವರ್ಷಗಳಷ್ಟು ಹಳೆಯದಾದ ಹೆಮ್ಮರಗಳನ್ನು ಬೆಳೆಸುವುದು ಕಷ್ಟಸಾಧ್ಯ. ಅರಣ್ಯ ಇಲಾಖೆಯೊಂದಿಗೆ ಸಮನ್ವಯತೆಯಿಂದ ಚರ್ಚಿಸಿದ್ದರೆ ಮರಗಳನ್ನು ಉಳಿಸುವ ಯೋಜನೆಗೆ ಬರಬಹುದಿತ್ತು ಎನ್ನುತ್ತಾರೆ.</p>.<p>‘ಪ್ರಸ್ತುತ ಇರುವ ರಸ್ತೆಯ ಯಾವುದಾರೂ ಒಂದು ಭಾಗದ ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿ ಮಾಡಿದ್ದರೆ ಒಂದು ಭಾಗದ ಮರಗಳು ಉಳಿಯುತ್ತಿದ್ದವು. ರಸ್ತೆಯೂ ಅಭಿವೃದ್ಧಿಯಾಗುತ್ತಿತ್ತು. ಆದರೆ, ಅಧಿಕಾರಿಗಳು ಪರಿಸರವನ್ನು ಲೆಕ್ಕಿಸದೆ ರಸ್ತೆ ನಿರ್ಮಾಣ<br />ಕಾಮಗಾರಿಗೆ ಮುಂದಾಗಿರುವುದು ಖಂಡನೀಯ’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಪಟೂರು:</strong> ಬಳ್ಳಾರಿ– ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಗಾಗಿ ಜಿಲ್ಲೆಯ ಮೂರು ತಾಲ್ಲೂಕಿನ ಸಾವಿರಾರು ಮರಗಳನ್ನು ಹನನ<br />ಮಾಡಲಾಗಿದೆ.</p>.<p>ಬಳ್ಳಾರಿಯಿಂದ ಚಾಮರಾಜನಗರದವರೆಗೆ ರಾಷ್ಟ್ರೀಯ ಹೆದ್ದಾರಿ 150ಎ ಅನ್ನುಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ಜಿಲ್ಲೆ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಇದರಿಂದ 425 ಕಿ.ಮೀ ರಸ್ತೆ ಅಭಿವೃದ್ಧಿಗೆ ಮಂಜೂರಾತಿ ದೊರೆತಿದ್ದು, ರಸ್ತೆಯ ಬದಿಯಲ್ಲಿ ಇದ್ದ ನೂರಾರು ವರ್ಷ ವಯಸ್ಸಿನ ಸಾವಿರಾರು ಮರಗಳನ್ನು ಕಡಿಯಲಾಗಿದೆ.</p>.<p>ಬಳ್ಳಾರಿಯಿಂದ ಚಳ್ಳಕೆರೆ, ಹಿರಿಯೂರು, ಹುಳಿಯಾರು, ಚಿಕ್ಕನಾಯಕನಹಳ್ಳಿ, ತಿಪಟೂರಿನ ಕೆ.ಬಿ.ಕ್ರಾಸ್, ತುರುವೇಕೆರೆ, ನಾಗಮಂಗಲ, ಶ್ರೀರಂಗಪಟ್ಟಣ, ಮೈಸೂರು, ನಂಜನಗೂಡು ಮಾರ್ಗವಾಗಿ ಚಾಮರಾಜನಗರ ತಲುಪುವ ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆಯ ಎರಡು ಬದಿಯಲ್ಲಿ ಸಾವಿರಾರು ಗಿಡ- ಮರಗಳನ್ನು ಕಾಣಬಹುದಿತ್ತು. ಆದರೆ, ಈ ರಸ್ತೆಯನ್ನು ಅಭಿವೃದ್ಧಿ ಮಾಡುವ ಉದ್ದೇಶದಿಂದ ಎಲ್ಲ ಮರಗಳನ್ನು ಕತ್ತರಿಸಲಾಗುತ್ತಿದೆ.</p>.<p>ಹುಳಿಯಾರಿನಿಂದ ಚಿಕ್ಕನಾಯಕನಹಳ್ಳಿ ಹಾಲುಗೊಣದವರೆಗೆ ಎಡ ಭಾಗದಲ್ಲಿ 757, ಬಲಭಾಗದಲ್ಲಿ 995 ಸೇರಿ ಒಟ್ಟು 1752 ಮರಗಳು ಹಾಗೂ ಹಾಲುಗೊಣದಿಂದ ಕೆ.ಬಿ.ಕ್ರಾಸ್ ಬಳಿಗೆ 179 ಮರಗಳನ್ನು ಕಡಿಯಲಾಗಿದೆ. ಅದರಲ್ಲಿ ಎಷ್ಟೋ ಮರಗಳು<br />ನೂರಾರು ವರ್ಷದಷ್ಟು ಹಳೆಯವು.</p>.<p>ಪರಿಸರ ತಜ್ಞರೊಬ್ಬರ ಪ್ರಕಾರ 200 ವರ್ಷಗಳಷ್ಟು ಹಳೆಯದಾದ ಹೆಮ್ಮರಗಳನ್ನು ಬೆಳೆಸುವುದು ಕಷ್ಟಸಾಧ್ಯ. ಅರಣ್ಯ ಇಲಾಖೆಯೊಂದಿಗೆ ಸಮನ್ವಯತೆಯಿಂದ ಚರ್ಚಿಸಿದ್ದರೆ ಮರಗಳನ್ನು ಉಳಿಸುವ ಯೋಜನೆಗೆ ಬರಬಹುದಿತ್ತು ಎನ್ನುತ್ತಾರೆ.</p>.<p>‘ಪ್ರಸ್ತುತ ಇರುವ ರಸ್ತೆಯ ಯಾವುದಾರೂ ಒಂದು ಭಾಗದ ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿ ಮಾಡಿದ್ದರೆ ಒಂದು ಭಾಗದ ಮರಗಳು ಉಳಿಯುತ್ತಿದ್ದವು. ರಸ್ತೆಯೂ ಅಭಿವೃದ್ಧಿಯಾಗುತ್ತಿತ್ತು. ಆದರೆ, ಅಧಿಕಾರಿಗಳು ಪರಿಸರವನ್ನು ಲೆಕ್ಕಿಸದೆ ರಸ್ತೆ ನಿರ್ಮಾಣ<br />ಕಾಮಗಾರಿಗೆ ಮುಂದಾಗಿರುವುದು ಖಂಡನೀಯ’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>