<p><strong>ತುಮಕೂರು</strong>: ತಾಲ್ಲೂಕಿನ ಹೆತ್ತೇನಹಳ್ಳಿ ಮಾರಮ್ಮ ದೇವಿಯ ತಾಳಿ ಕಳವಾಗಿಲ್ಲ. ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಅವರ ಬಳಗದವರು ತಾಳಿ ಕಳವಾಗಿದೆ ಎಂದು ಅಪಪ್ರಚಾರ ಮಾಡಿದ್ದಾರೆ ಎಂದು ಮಾರಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತಿಮ್ಮೇಗೌಡ ಇಲ್ಲಿ ಭಾನುವಾರ ಹೇಳಿದರು.</p>.<p>‘ದೇವಾಲಯದಲ್ಲಿ 43 ಗ್ರಾಂ ಚಿನ್ನ ಕಳವಾಗಿದ್ದು, ಅದರಲ್ಲಿ 20 ಗ್ರಾಂ ಸಿಕ್ಕಿದೆ. ಮಾಜಿ ಶಾಸಕರು ಮತ್ತು ಅವರ ಆಪ್ತ ಜಗದೀಶ್ ಹೊಸ ತಾಳಿ ತಂದು ದೇವಿಗೆ ಸಮರ್ಪಣೆ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಧಾರ್ಮಿಕ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಜಗದೀಶ್ ₹30 ಲಕ್ಷ ದೇಣಿಗೆ ಕೊಟ್ಟಿದ್ದಾರೆ ಎಂದು ಮಾಜಿ ಶಾಸಕರು ಹೇಳಿದ್ದಾರೆ. ಆದರೆ ಅವರು ನೀಡಿರುವುದು ₹7.35 ಲಕ್ಷ ಮಾತ್ರ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ದೇವಿಯ ವಿಚಾರದಲ್ಲಿ ಸುಳ್ಳು ಹೇಳಬಾರದು. ಜಗದೀಶ್ ಹಣ ನೀಡಿದ ಬಗ್ಗೆ ಅಗತ್ಯ ದಾಖಲೆ ಕೊಟ್ಟು, ಸ್ಪಷ್ಟನೆ ನೀಡಬೇಕು ಎಂದರು.</p>.<p>ಹನುಂತರಾಯಪ್ಪ, ಮಾಯಣ್ಣ, ಗಿರೀಶ್, ಜಗದೀಶ್, ರವಿಕುಮಾರ್, ನರಸಿಂಹಮೂರ್ತಿ, ವೆಂಕಟೇಶ್, ಶಂಕರಣ್ಣ, ರಾಕೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ತಾಲ್ಲೂಕಿನ ಹೆತ್ತೇನಹಳ್ಳಿ ಮಾರಮ್ಮ ದೇವಿಯ ತಾಳಿ ಕಳವಾಗಿಲ್ಲ. ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಅವರ ಬಳಗದವರು ತಾಳಿ ಕಳವಾಗಿದೆ ಎಂದು ಅಪಪ್ರಚಾರ ಮಾಡಿದ್ದಾರೆ ಎಂದು ಮಾರಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತಿಮ್ಮೇಗೌಡ ಇಲ್ಲಿ ಭಾನುವಾರ ಹೇಳಿದರು.</p>.<p>‘ದೇವಾಲಯದಲ್ಲಿ 43 ಗ್ರಾಂ ಚಿನ್ನ ಕಳವಾಗಿದ್ದು, ಅದರಲ್ಲಿ 20 ಗ್ರಾಂ ಸಿಕ್ಕಿದೆ. ಮಾಜಿ ಶಾಸಕರು ಮತ್ತು ಅವರ ಆಪ್ತ ಜಗದೀಶ್ ಹೊಸ ತಾಳಿ ತಂದು ದೇವಿಗೆ ಸಮರ್ಪಣೆ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಧಾರ್ಮಿಕ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಜಗದೀಶ್ ₹30 ಲಕ್ಷ ದೇಣಿಗೆ ಕೊಟ್ಟಿದ್ದಾರೆ ಎಂದು ಮಾಜಿ ಶಾಸಕರು ಹೇಳಿದ್ದಾರೆ. ಆದರೆ ಅವರು ನೀಡಿರುವುದು ₹7.35 ಲಕ್ಷ ಮಾತ್ರ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ದೇವಿಯ ವಿಚಾರದಲ್ಲಿ ಸುಳ್ಳು ಹೇಳಬಾರದು. ಜಗದೀಶ್ ಹಣ ನೀಡಿದ ಬಗ್ಗೆ ಅಗತ್ಯ ದಾಖಲೆ ಕೊಟ್ಟು, ಸ್ಪಷ್ಟನೆ ನೀಡಬೇಕು ಎಂದರು.</p>.<p>ಹನುಂತರಾಯಪ್ಪ, ಮಾಯಣ್ಣ, ಗಿರೀಶ್, ಜಗದೀಶ್, ರವಿಕುಮಾರ್, ನರಸಿಂಹಮೂರ್ತಿ, ವೆಂಕಟೇಶ್, ಶಂಕರಣ್ಣ, ರಾಕೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>