<p><strong>ತುಮಕೂರು</strong>: ಈ ವಾರ ತರಕಾರಿ ಬೆಲೆ ಇಳಕೆಯತ್ತ ಸಾಗಿದ್ದರೆ, ಹಸಿರು ಮೆಣಸಿನಕಾಯಿ ದುಬಾರಿಯಾಗಿದೆ. ಕೊತ್ತಂಬರಿ ಸೊಪ್ಪು ಅಗ್ಗವಾಗಿದೆ. ಬೇಳೆ, ಧಾನ್ಯಗಳ ದರವೂ ಇಳಿಕೆಯತ್ತ ಸಾಗಿದ್ದು, ಹಣ್ಣು, ಕೋಳಿ ಮಾಂಸದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ.</p>.<p><strong>ಇಳಿಕೆಯತ್ತ ತರಕಾರಿ:</strong> ಕೆಲ ವಾರಗಳಿಂದ ಕೆ.ಜಿ ₹100 ದಾಟಿದ್ದ ಕೆಲವು ತರಕಾರಿಗಳ ದರ ನಿಧಾನವಾಗಿ ತಗ್ಗುತ್ತಿದೆ. ಬೀನ್ಸ್ ಕೆ.ಜಿ ₹50–60ಕ್ಕೆ ಇಳಿಕೆ ಕಂಡಿದೆ. ಕ್ಯಾರೇಟ್, ಬೀಟ್ರೂಟ್, ಬೆಂಡೆಕಾಯಿ, ಬದನೆಕಾಯಿ, ಹಾಗಲಕಾಯಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಗೆಡ್ಡೆಕೋಸು ಮತ್ತೆ ಏರಿಕೆಯಾಗಿದ್ದು, ಹೂ ಕೋಸು, ನುಗ್ಗೆಕಾಯಿ ದರ ತುಸು ಹೆಚ್ಚಳವಾಗಿದೆ. ಆದರೆ ಹಸಿರು ಮೆಣಸಿನಕಾಯಿ ಮತ್ತಷ್ಟು ‘ಖಾರ’ವಾಗಿದ್ದು ಕೆ.ಜಿ ₹70–80ಕ್ಕೆ ತಲುಪಿದೆ. ಕ್ಯಾಪ್ಸಿಕಂ ಸಹ ಇದೇ ದಾರಿಯಲ್ಲಿ ಸಾಗಿದೆ.</p>.<p>ಏರಿಳಿತ ಕಂಡ ಟೊಮೊಟೊ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಈರುಳ್ಳಿ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ, ಬೆಳ್ಳುಳ್ಳಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಶುಂಠಿ, ಸೌತೆಕಾಯಿ ಸಹ ಇಳಿದಿದೆ.</p>.<p>ಆಷಾಢ ಮಾಸ ಆರಂಭವಾಗಿದ್ದು, ಶುಭ ಕಾರ್ಯಗಳು ನಡೆಯುತ್ತಿಲ್ಲ. ತರಕಾರಿಗೂ ಬೇಡಿಕೆ ತಗ್ಗಿದ್ದು, ಬೆಲೆಯೂ ಇಳಿಯುತ್ತಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.</p>.<p><strong>ಕೊತ್ತಂಬರಿ ಸೊಪ್ಪು ಅಗ್ಗ:</strong> ಎರಡು ವಾರದಿಂದ ಇಳಿಕೆಯತ್ತ ಮುಖಮಾಡಿದ್ದ ಕೊತ್ತಂಬರಿ ಸೊಪ್ಪು ಈಗ ಪಾತಾಳ ಮುಟ್ಟಿದೆ. ಉಳಿದ ಸೊಪ್ಪಿನ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕೊತ್ತಂಬರಿ ಸೊಪ್ಪು ಕೆ.ಜಿ ₹20–30, ಸಬ್ಬಕ್ಕಿ ಕೆ.ಜಿ ₹50–60, ಮೆಂತ್ಯ ಸೊಪ್ಪು ಕೆ.ಜಿ ₹50–60, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p><strong>ಹಣ್ಣು ಯಥಾಸ್ಥಿತಿ:</strong> ಹಣ್ಣು ಧಾರಣೆ ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಸೀಬೆ ಹಣ್ಣು ಅಲ್ಪ ಏರಿಕೆಯಾಗಿದೆ. ಆಷಾಢ ಮಾಸ ಬಂದಿದ್ದು, ಈ ಸಮಯದಲ್ಲಿ ಬೆಲೆ ಕಡಿಮೆಯಾಗಬಹುದು ಎಂದು ಹೇಳಲಾಗುತ್ತಿದೆ. ತೋತಾಪುರಿ ಮಾವು ಕೆ.ಜಿ ₹100, ಬೇನಿಷಾ ಕೆ.ಜಿ ₹100ಕ್ಕೆ ಸಿಗುತ್ತಿದೆ.</p>.<p><strong>ಅಡುಗೆ ಎಣ್ಣೆ:</strong> ಅಡುಗೆ ಎಣ್ಣೆ ದರದಲ್ಲೂ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್ವಿನ್ನರ್ ಕೆ.ಜಿ ₹110–112, ಪಾಮಾಯಿಲ್ ಕೆ.ಜಿ ₹87–88, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p><strong>ಬೇಳೆ ಇಳಿಕೆ:</strong> ಮಾರ್ಚ್ ತಿಂಗಳಿಂದ ಏರುಗತಿಯಲ್ಲೇ ಇದ್ದ ಬೇಳೆ, ಧಾನ್ಯಗಳ ಧಾರಣೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಬಹುತೇಕ ಬೇಳೆಗಳು ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ಅವರೆಕಾಳು, ಬಟಾಣಿ ಮಾತ್ರ ತುಸು ಏರಿಕೆ ದಾಖಲಿಸಿದೆ. ಸಕ್ಕರೆ ಅಲ್ಪ ಇಳಿಕೆಯಾಗಿದೆ.</p>.<p><strong>ಮಸಾಲೆ ಪದಾರ್ಥ:</strong> ಮಸಾಲೆ ಪದಾರ್ಥಗಳಲ್ಲಿ ಮೆಣಸು, ಜೀರಿಗೆ, ಹುಣಸೆಹಣ್ಣು ಏರಿಕೆಯತ್ತಲೇ ಮುಖ ಮಾಡಿವೆ. ಏಲಕ್ಕಿ ಕೊಂಚ ಕಡಿಮೆಯಾಗಿದ್ದರೆ, ಗೋಡಂಬಿ ಮತ್ತಷ್ಟು ದುಬಾರಿಯಾಗಿದೆ.</p>.<p>ಧನ್ಯ ಕೆ.ಜಿ ₹100–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹220–280, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹220–260, ಹುಣಸೆಹಣ್ಣು ₹130–160, ಕಾಳುಮೆಣಸು ಕೆ.ಜಿ ₹740–780, ಜೀರಿಗೆ ಕೆ.ಜಿ ₹330–360, ಸಾಸಿವೆ ಕೆ.ಜಿ ₹80, ಮೆಂತ್ಯ ಕೆ.ಜಿ ₹85, ಚಕ್ಕೆ ಕೆ.ಜಿ ₹270, ಲವಂಗ ಕೆ.ಜಿ ₹920–950, ಗುಣಮಟ್ಟದ ಗಸಗಸೆ ಕೆ.ಜಿ ₹1,200–1,280, ಏಲಕ್ಕಿ ಕೆ.ಜಿ ₹2,800–3,200, ಬಾದಾಮಿ ಕೆ.ಜಿ ₹620–660, ಗೋಡಂಬಿ ಕೆ.ಜಿ ₹850–900, ಒಣದ್ರಾಕ್ಷಿ ಕೆ.ಜಿ ₹190–220ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p><strong>ಕೋಳಿ ಮಾಂಸ:</strong> ಕೋಳಿ ಮಾಂಸದ ಬೆಲೆ ಈ ವಾರ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹130, ರೆಡಿ ಚಿಕನ್ ಕೆ.ಜಿ ₹240, ಸ್ಕಿನ್ಲೆಸ್ ಕೆ.ಜಿ ₹260, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹110ಕ್ಕೆ ಸಿಗುತ್ತಿದೆ.</p>.<p><strong>ಮೀನು</strong>: ಮುಂಗಾರು ಮಳೆ ಆರಂಭವಾಗಿದ್ದು, ಮೀನುಗಾರಿಕೆ ಚಟುವಟಿಕೆಗಳು ಕಡಿಮೆಯಾಗಿವೆ. ಹಾಗಾಗಿ ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.</p>.<p><strong>ಹಣ್ಣು (ಬೆಲೆ ಕೆ.ಜಿ ₹)</strong></p><p>ಸೇಬು;200</p><p>ದಾಳಿಂಬೆ;200</p><p>ಮೂಸಂಬಿ;100</p><p>ಕಿತ್ತಳೆ;150</p><p>ಸಪೋಟ;100</p><p>ಏಲಕ್ಕಿ ಬಾಳೆ;85</p><p>ಪಚ್ಚಬಾಳೆ;37</p><p>ಸೀಬೆ;140</p><p>ಪೈನಾಪಲ್;100</p><p>ಪಪ್ಪಾಯ;30</p><p>ಕರಬೂಜ;50</p><p>ಕಲ್ಲಂಗಡಿ;30</p><p>ದ್ರಾಕ್ಷಿ;50</p>.<p><strong>ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)</strong></p><p>ತೊಗರಿ ಬೇಳೆ;168–175</p><p>ಕಡಲೆ ಬೇಳೆ;86–90</p><p>ಉದ್ದಿನ ಬೇಳೆ;125–140</p><p>ಹೆಸರು ಬೇಳೆ;110–120</p><p>ಕಡಲೆಕಾಳು;80–85</p><p>ಹೆಸರು ಕಾಳು;110–125</p><p>ಅಲಸಂದೆ;105–110</p><p>ಅವರೆಕಾಳು;160–170</p><p>ಹುರುಳಿಕಾಳು;76–85</p><p>ಹುರಿಗಡಲೆ;100–105</p><p>ಬಟಾಣಿ;125</p><p>ಕಡಲೆ ಬೀಜ;110–125</p><p>ಗೋಧಿ;42–48</p><p>ಸಕ್ಕರೆ;40–41</p>.<p><strong>ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)</strong></p><p>ಬೀನ್ಸ್;50–60</p><p>ಕ್ಯಾರೇಟ್;50–60</p><p>ಬೀಟ್ರೂಟ್;35–40</p><p>ಈರುಳ್ಳಿ;30–35</p><p>ಬೆಳ್ಳುಳ್ಳಿ;180–200</p><p>ಟೊಮೆಟೊ;30–35</p><p>ಆಲೂಗಡ್ಡೆ;35–40</p><p>ಗೆಡ್ಡೆಕೋಸು;50–60</p><p>ಮೂಲಂಗಿ;30–40</p><p>ಬೆಂಡೆಕಾಯಿ;30–40</p><p>ಬದನೆಕಾಯಿ;30–40</p><p>ಎಲೆಕೋಸು;35–40</p><p>ಹೂಕೋಸು(1ಕ್ಕೆ);40–50</p><p>ತೊಂಡೆಕಾಯಿ;30–35</p><p>ಹಾಗಲಕಾಯಿ;50–60</p><p>ನುಗ್ಗೆಕಾಯಿ;100–120</p><p>ಮೆಣಸಿನಕಾಯಿ;70–80</p><p>ಕ್ಯಾಪ್ಸಿಕಂ;50–60</p><p>ಶುಂಠಿ;100–120</p><p>ಸೌತೆಕಾಯಿ 1ಕ್ಕೆ;5–6</p><p>ನಿಂಬೆಹಣ್ಣು 1ಕ್ಕೆ;4–5</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಈ ವಾರ ತರಕಾರಿ ಬೆಲೆ ಇಳಕೆಯತ್ತ ಸಾಗಿದ್ದರೆ, ಹಸಿರು ಮೆಣಸಿನಕಾಯಿ ದುಬಾರಿಯಾಗಿದೆ. ಕೊತ್ತಂಬರಿ ಸೊಪ್ಪು ಅಗ್ಗವಾಗಿದೆ. ಬೇಳೆ, ಧಾನ್ಯಗಳ ದರವೂ ಇಳಿಕೆಯತ್ತ ಸಾಗಿದ್ದು, ಹಣ್ಣು, ಕೋಳಿ ಮಾಂಸದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ.</p>.<p><strong>ಇಳಿಕೆಯತ್ತ ತರಕಾರಿ:</strong> ಕೆಲ ವಾರಗಳಿಂದ ಕೆ.ಜಿ ₹100 ದಾಟಿದ್ದ ಕೆಲವು ತರಕಾರಿಗಳ ದರ ನಿಧಾನವಾಗಿ ತಗ್ಗುತ್ತಿದೆ. ಬೀನ್ಸ್ ಕೆ.ಜಿ ₹50–60ಕ್ಕೆ ಇಳಿಕೆ ಕಂಡಿದೆ. ಕ್ಯಾರೇಟ್, ಬೀಟ್ರೂಟ್, ಬೆಂಡೆಕಾಯಿ, ಬದನೆಕಾಯಿ, ಹಾಗಲಕಾಯಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಗೆಡ್ಡೆಕೋಸು ಮತ್ತೆ ಏರಿಕೆಯಾಗಿದ್ದು, ಹೂ ಕೋಸು, ನುಗ್ಗೆಕಾಯಿ ದರ ತುಸು ಹೆಚ್ಚಳವಾಗಿದೆ. ಆದರೆ ಹಸಿರು ಮೆಣಸಿನಕಾಯಿ ಮತ್ತಷ್ಟು ‘ಖಾರ’ವಾಗಿದ್ದು ಕೆ.ಜಿ ₹70–80ಕ್ಕೆ ತಲುಪಿದೆ. ಕ್ಯಾಪ್ಸಿಕಂ ಸಹ ಇದೇ ದಾರಿಯಲ್ಲಿ ಸಾಗಿದೆ.</p>.<p>ಏರಿಳಿತ ಕಂಡ ಟೊಮೊಟೊ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಈರುಳ್ಳಿ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ, ಬೆಳ್ಳುಳ್ಳಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಶುಂಠಿ, ಸೌತೆಕಾಯಿ ಸಹ ಇಳಿದಿದೆ.</p>.<p>ಆಷಾಢ ಮಾಸ ಆರಂಭವಾಗಿದ್ದು, ಶುಭ ಕಾರ್ಯಗಳು ನಡೆಯುತ್ತಿಲ್ಲ. ತರಕಾರಿಗೂ ಬೇಡಿಕೆ ತಗ್ಗಿದ್ದು, ಬೆಲೆಯೂ ಇಳಿಯುತ್ತಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.</p>.<p><strong>ಕೊತ್ತಂಬರಿ ಸೊಪ್ಪು ಅಗ್ಗ:</strong> ಎರಡು ವಾರದಿಂದ ಇಳಿಕೆಯತ್ತ ಮುಖಮಾಡಿದ್ದ ಕೊತ್ತಂಬರಿ ಸೊಪ್ಪು ಈಗ ಪಾತಾಳ ಮುಟ್ಟಿದೆ. ಉಳಿದ ಸೊಪ್ಪಿನ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕೊತ್ತಂಬರಿ ಸೊಪ್ಪು ಕೆ.ಜಿ ₹20–30, ಸಬ್ಬಕ್ಕಿ ಕೆ.ಜಿ ₹50–60, ಮೆಂತ್ಯ ಸೊಪ್ಪು ಕೆ.ಜಿ ₹50–60, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p><strong>ಹಣ್ಣು ಯಥಾಸ್ಥಿತಿ:</strong> ಹಣ್ಣು ಧಾರಣೆ ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಸೀಬೆ ಹಣ್ಣು ಅಲ್ಪ ಏರಿಕೆಯಾಗಿದೆ. ಆಷಾಢ ಮಾಸ ಬಂದಿದ್ದು, ಈ ಸಮಯದಲ್ಲಿ ಬೆಲೆ ಕಡಿಮೆಯಾಗಬಹುದು ಎಂದು ಹೇಳಲಾಗುತ್ತಿದೆ. ತೋತಾಪುರಿ ಮಾವು ಕೆ.ಜಿ ₹100, ಬೇನಿಷಾ ಕೆ.ಜಿ ₹100ಕ್ಕೆ ಸಿಗುತ್ತಿದೆ.</p>.<p><strong>ಅಡುಗೆ ಎಣ್ಣೆ:</strong> ಅಡುಗೆ ಎಣ್ಣೆ ದರದಲ್ಲೂ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್ವಿನ್ನರ್ ಕೆ.ಜಿ ₹110–112, ಪಾಮಾಯಿಲ್ ಕೆ.ಜಿ ₹87–88, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p><strong>ಬೇಳೆ ಇಳಿಕೆ:</strong> ಮಾರ್ಚ್ ತಿಂಗಳಿಂದ ಏರುಗತಿಯಲ್ಲೇ ಇದ್ದ ಬೇಳೆ, ಧಾನ್ಯಗಳ ಧಾರಣೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಬಹುತೇಕ ಬೇಳೆಗಳು ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ಅವರೆಕಾಳು, ಬಟಾಣಿ ಮಾತ್ರ ತುಸು ಏರಿಕೆ ದಾಖಲಿಸಿದೆ. ಸಕ್ಕರೆ ಅಲ್ಪ ಇಳಿಕೆಯಾಗಿದೆ.</p>.<p><strong>ಮಸಾಲೆ ಪದಾರ್ಥ:</strong> ಮಸಾಲೆ ಪದಾರ್ಥಗಳಲ್ಲಿ ಮೆಣಸು, ಜೀರಿಗೆ, ಹುಣಸೆಹಣ್ಣು ಏರಿಕೆಯತ್ತಲೇ ಮುಖ ಮಾಡಿವೆ. ಏಲಕ್ಕಿ ಕೊಂಚ ಕಡಿಮೆಯಾಗಿದ್ದರೆ, ಗೋಡಂಬಿ ಮತ್ತಷ್ಟು ದುಬಾರಿಯಾಗಿದೆ.</p>.<p>ಧನ್ಯ ಕೆ.ಜಿ ₹100–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹220–280, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹220–260, ಹುಣಸೆಹಣ್ಣು ₹130–160, ಕಾಳುಮೆಣಸು ಕೆ.ಜಿ ₹740–780, ಜೀರಿಗೆ ಕೆ.ಜಿ ₹330–360, ಸಾಸಿವೆ ಕೆ.ಜಿ ₹80, ಮೆಂತ್ಯ ಕೆ.ಜಿ ₹85, ಚಕ್ಕೆ ಕೆ.ಜಿ ₹270, ಲವಂಗ ಕೆ.ಜಿ ₹920–950, ಗುಣಮಟ್ಟದ ಗಸಗಸೆ ಕೆ.ಜಿ ₹1,200–1,280, ಏಲಕ್ಕಿ ಕೆ.ಜಿ ₹2,800–3,200, ಬಾದಾಮಿ ಕೆ.ಜಿ ₹620–660, ಗೋಡಂಬಿ ಕೆ.ಜಿ ₹850–900, ಒಣದ್ರಾಕ್ಷಿ ಕೆ.ಜಿ ₹190–220ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p><strong>ಕೋಳಿ ಮಾಂಸ:</strong> ಕೋಳಿ ಮಾಂಸದ ಬೆಲೆ ಈ ವಾರ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹130, ರೆಡಿ ಚಿಕನ್ ಕೆ.ಜಿ ₹240, ಸ್ಕಿನ್ಲೆಸ್ ಕೆ.ಜಿ ₹260, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹110ಕ್ಕೆ ಸಿಗುತ್ತಿದೆ.</p>.<p><strong>ಮೀನು</strong>: ಮುಂಗಾರು ಮಳೆ ಆರಂಭವಾಗಿದ್ದು, ಮೀನುಗಾರಿಕೆ ಚಟುವಟಿಕೆಗಳು ಕಡಿಮೆಯಾಗಿವೆ. ಹಾಗಾಗಿ ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.</p>.<p><strong>ಹಣ್ಣು (ಬೆಲೆ ಕೆ.ಜಿ ₹)</strong></p><p>ಸೇಬು;200</p><p>ದಾಳಿಂಬೆ;200</p><p>ಮೂಸಂಬಿ;100</p><p>ಕಿತ್ತಳೆ;150</p><p>ಸಪೋಟ;100</p><p>ಏಲಕ್ಕಿ ಬಾಳೆ;85</p><p>ಪಚ್ಚಬಾಳೆ;37</p><p>ಸೀಬೆ;140</p><p>ಪೈನಾಪಲ್;100</p><p>ಪಪ್ಪಾಯ;30</p><p>ಕರಬೂಜ;50</p><p>ಕಲ್ಲಂಗಡಿ;30</p><p>ದ್ರಾಕ್ಷಿ;50</p>.<p><strong>ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)</strong></p><p>ತೊಗರಿ ಬೇಳೆ;168–175</p><p>ಕಡಲೆ ಬೇಳೆ;86–90</p><p>ಉದ್ದಿನ ಬೇಳೆ;125–140</p><p>ಹೆಸರು ಬೇಳೆ;110–120</p><p>ಕಡಲೆಕಾಳು;80–85</p><p>ಹೆಸರು ಕಾಳು;110–125</p><p>ಅಲಸಂದೆ;105–110</p><p>ಅವರೆಕಾಳು;160–170</p><p>ಹುರುಳಿಕಾಳು;76–85</p><p>ಹುರಿಗಡಲೆ;100–105</p><p>ಬಟಾಣಿ;125</p><p>ಕಡಲೆ ಬೀಜ;110–125</p><p>ಗೋಧಿ;42–48</p><p>ಸಕ್ಕರೆ;40–41</p>.<p><strong>ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)</strong></p><p>ಬೀನ್ಸ್;50–60</p><p>ಕ್ಯಾರೇಟ್;50–60</p><p>ಬೀಟ್ರೂಟ್;35–40</p><p>ಈರುಳ್ಳಿ;30–35</p><p>ಬೆಳ್ಳುಳ್ಳಿ;180–200</p><p>ಟೊಮೆಟೊ;30–35</p><p>ಆಲೂಗಡ್ಡೆ;35–40</p><p>ಗೆಡ್ಡೆಕೋಸು;50–60</p><p>ಮೂಲಂಗಿ;30–40</p><p>ಬೆಂಡೆಕಾಯಿ;30–40</p><p>ಬದನೆಕಾಯಿ;30–40</p><p>ಎಲೆಕೋಸು;35–40</p><p>ಹೂಕೋಸು(1ಕ್ಕೆ);40–50</p><p>ತೊಂಡೆಕಾಯಿ;30–35</p><p>ಹಾಗಲಕಾಯಿ;50–60</p><p>ನುಗ್ಗೆಕಾಯಿ;100–120</p><p>ಮೆಣಸಿನಕಾಯಿ;70–80</p><p>ಕ್ಯಾಪ್ಸಿಕಂ;50–60</p><p>ಶುಂಠಿ;100–120</p><p>ಸೌತೆಕಾಯಿ 1ಕ್ಕೆ;5–6</p><p>ನಿಂಬೆಹಣ್ಣು 1ಕ್ಕೆ;4–5</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>