ಧರ್ಮಪ್ರಕಾಶ್ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಸೊಪ್ಪನ್ನು ಮಾರಾಟ ಮಾಡುವ ಮುನ್ನ ನೀರಿನಲ್ಲಿ ತೊಳೆಯುವ ಸಲುವಾಗಿ ಸ್ನೇಹಿತ ನಾಗರಾಜುನನ್ನು ಕರೆದು ಕೊಂಡು ಥರಟಿ ಕೆರೆಗೆ ಹೋಗಿದ್ದಾರೆ. ಕೆರೆ ದಡದಲ್ಲಿ ಸೊಪ್ಪು ತೊಳೆಯುವಾಗ ಎರಡು ಕಟ್ಟು ಸೊಪ್ಪು ನೀರಿನಲ್ಲಿ ತೇಲಿಕೊಂಡು ಹೋಗಿದೆ. ಅದನ್ನು ತೆಗೆದುಕೊಳ್ಳಲು ಹೋದ ಈಜು ಬರದ ಧರ್ಮಪ್ರಕಾಶ್ ಮೊದಲು ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಗಮನಿಸಿದ ಸ್ನೇಹಿತ ನಾಗರಾಜು ರಕ್ಷಿಸಲು ಹೋಗಿ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.