ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಮೃತಪಟ್ಟ ಹಸು ಮತ್ತು ಹೋರಿಗಳಿಗೆ ಮಾತ್ರ ಪರಿಹಾರ ಕೊಡುತ್ತಿದ್ದರು. ನಮ್ಮ ಭಾಗದಲ್ಲಿ ಎಮ್ಮೆ ಮತ್ತು ಕೋಣಗಳು ಮೃತಪಟ್ಟರೆ ಯಾವುದೇ ಪರಿಹಾರ ಕೊಡುತ್ತಿರಲಿಲ್ಲ. ಆಗ ಎಮ್ಮೆ, ಕೋಣಗಳಿಗೂ ಪರಿಹಾರ ಕೊಡಬೇಕು ಎಂದು ಧ್ವನಿ ಎತ್ತಿದ್ದೆ. ಆ ನಂತರ ಪರಿಹಾರ ನೀಡಿದರು ಎಂದು ಹೇಳಿದರು.