ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ತೀರ್ಪು ಕಾಯ್ದಿರಿಸಿದ ‘ಸುಪ್ರೀಂ’

ನೀರು ನಿಯಂತ್ರಣ ಪ್ರಾಧಿಕಾರಕ್ಕೇ ನ್ಯಾಯಪೀಠದ ಒಲವು
Last Updated 17 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆ (ಸ್ಕೀಂ) ಕುರಿತು ಗುರುವಾರ ಅಂತಿಮ ನಿರ್ಧಾರ ಕೈಗೊಂಡಿರುವ ಸುಪ್ರೀಂ ಕೋರ್ಟ್, ಈ ಸಂಬಂಧದ ತೀರ್ಪನ್ನು ಕಾಯ್ದಿರಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠದ ಸೂಚನೆಯ ಮೇರೆಗೆ ಕೆಲವು ಮಾರ್ಪಾಡುಗಳೊಂದಿಗಿನ ಪರಿಷ್ಕೃತ ಕರಡನ್ನು ಕೇಂದ್ರ ಸರ್ಕಾರ ಸಲ್ಲಿಸಿದ್ದು, ಶುಕ್ರವಾರ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.

ಯೋಜನೆಯ ಕರಡಿನಲ್ಲಿ ಇರುವ ಅಂಶಗಳ ಕುರಿತ ಚರ್ಚೆಗೆ ಅವಕಾಶ ನೀಡಿ ಪ್ರಕರಣದ ವಿಚಾರಣೆ ನಡೆಸಿದ ಪೀಠವು, ಕೇಂದ್ರ ಸೂಚಿಸಿರುವಂತೆಯೇ ಯೋಜನೆಯ ಹೆಸರು ಮುಂದುವರಿಸಲು ನಿರ್ಧರಿಸಿದ್ದಾಗಿ ತಿಳಿದುಬಂದಿದೆ.ಯೋಜನೆಗೆ ‘ಕಾವೇರಿ ನದಿ ನೀರು ನಿರ್ವ
ಹಣಾ ಪ್ರಾಧಿಕಾರ’ ಎಂಬ ಹೆಸರನ್ನಿಡಲು ಕೇಂದ್ರ ಬಯಸಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ತಿಳಿಸಿದಾಗ, ಮಂಡಳಿ ಎಂದೇ ಹೆಸರಿಸು
ವಂತೆ ತಮಿಳುನಾಡು ಆಗ್ರಹಿಸಿತು.

ಕಾವೇರಿ ಕಣಿವೆ ವ್ಯಾಪ್ತಿಯ ರಾಜ್ಯಗಳು, ತಮಗೆ ಹಂಚಿಕೆಯಾದ ನೀರನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಈ ಪ್ರಾಧಿಕಾರ ಅಡ್ಡಿ ಉಂಟುಮಾಡ
ಬಾರದು. ಆಯಾ ರಾಜ್ಯಗಳ ಪಾಲಿನ ನೀರನ್ನು ಹರಿಸಿದ ಬಳಿಕ ಹೆಚ್ಚುವರಿಯಾಗಿ ಉಳಿಯುವ ನೀರನ್ನು ಬಳಸುವ ಸಂಪೂರ್ಣ ಅಧಿಕಾರವನ್ನು ನೀಡಬೇಕು ಎಂದು ಕರ್ನಾಟಕದ ಪರ ವಕೀಲ ಶ್ಯಾಂ ದಿವಾನ್ ನ್ಯಾಯಪೀಠಕ್ಕೆ ತಿಳಿಸಿದರು.

ಕೇಂದ್ರ ಸರ್ಕಾರ ರೂಪಿಸುತ್ತಿರುವ ಯೋಜನೆಯು ಕಳೆದ ಫೆಬ್ರುವರಿ 16ರ ಸುಪ್ರೀಂ ಕೋರ್ಟ್‌ನ ತೀರ್ಪಿನ ಆಶಯಕ್ಕೆ ವಿರುದ್ಧವಾಗಿದೆ. ಅಲ್ಲದೆ, ನೈರುತ್ಯ ಮಳೆಯ ಮಾರುತದ ವಿಳಂಬದ ಸಾಧ್ಯತೆಯನ್ನು ಅವಲೋಕಿಸಿ ಅಂದಾಜು 10 ಟಿಎಂಸಿ ಅಡಿಯಷ್ಟು ನೀರಿನ ‘ಕ್ಯಾರಿ ಓವರ್‌’ಗೆ ಅವಕಾಶ ನೀಡಬೇಕು ಎಂದು ವಕೀಲ ಮೋಹನ್ ಕಾತರಕಿ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT