ಯೋಜನೆಯ ಕರಡಿನಲ್ಲಿ ಇರುವ ಅಂಶಗಳ ಕುರಿತ ಚರ್ಚೆಗೆ ಅವಕಾಶ ನೀಡಿ ಪ್ರಕರಣದ ವಿಚಾರಣೆ ನಡೆಸಿದ ಪೀಠವು, ಕೇಂದ್ರ ಸೂಚಿಸಿರುವಂತೆಯೇ ಯೋಜನೆಯ ಹೆಸರು ಮುಂದುವರಿಸಲು ನಿರ್ಧರಿಸಿದ್ದಾಗಿ ತಿಳಿದುಬಂದಿದೆ.ಯೋಜನೆಗೆ ‘ಕಾವೇರಿ ನದಿ ನೀರು ನಿರ್ವ
ಹಣಾ ಪ್ರಾಧಿಕಾರ’ ಎಂಬ ಹೆಸರನ್ನಿಡಲು ಕೇಂದ್ರ ಬಯಸಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ತಿಳಿಸಿದಾಗ, ಮಂಡಳಿ ಎಂದೇ ಹೆಸರಿಸು
ವಂತೆ ತಮಿಳುನಾಡು ಆಗ್ರಹಿಸಿತು.