ಉರಿಗೌಡ, ನಂಜೇಗೌಡ ಕಾಲ್ಪನಿಕ ಪಾತ್ರಗಳಲ್ಲ. ಸತ್ಯದ ಪಾತ್ರಗಳು. ಸಾಹಿತಿ ಡಾ.ದೇಜಗೌ ಅವರು ‘ಸುವರ್ಣ ಮಂಡ್ಯ’ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸುಳ್ಳು, ಕಾಲ್ಪನಿಕ ಎಂದು ಹೇಳುವವರು ಕ್ಷಮೆ ಕೇಳಬೇಕು. ಟಿಪ್ಪು ಕೊಂದಿದ್ದಕ್ಕೆ ದಾಖಲೆ ಏನಿದೆ ಎಂದು ಹೊಸ ವರಸೆ ತೆಗೆದಿದ್ದಾರೆ. ಟಿಪ್ಪು ಕೊಂದವರು ಅಪರಿಚಿತರು ಎನ್ನುತ್ತಾರೆ. ನಾವು ಅಪರಿಚಿತರಲ್ಲ ಎನ್ನುತ್ತೇವೆ. ಈ ಬಗ್ಗೆ ಸಂಶೋಧನೆಗಳು ನಡೆಯಲಿ ಎಂದರು.