ವೈ.ಎನ್.ಹೊಸಕೋಟೆ (ಪಾವಗಡ ತಾ): ಬಯಲುಸೀಮೆಯ ಈ ಪ್ರದೇಶಕ್ಕೆ ಶುಕ್ರವಾರದಂದು ಕಾಣುಕೋಣವೊಂದು ಬಂದು ಜನರಲ್ಲಿ ಅಚ್ಚರಿ ಮೂಡಿಸಿತು.
ಗ್ರಾಮದ ಹೊರವಲಯದ ತೋಟವೊಂದರಲ್ಲಿ ನೀರಿನ ತೊಟ್ಟಿಯ ಬಳಿಗೆ ಹೋಗುತ್ತಿದ್ದಾಗ ಜನರಿಗೆ ಕಂಡುಬಂದಿದೆ.
ಅನಿರೀಕ್ಷಿತ ಅತಿಥಿಯನ್ನು ನೋಡಲು ಜನರು ಹತ್ತಿರ ಹೋಗಿದ್ದಾರೆ. ಆದರೆ, ಅದರ ಮೈಕಟ್ಟು ಮತ್ತು ಓಡಾಟವನ್ನು ನೋಡಿ ಹೆದರಿ ದೂರದಲ್ಲೇ ನಿಂತು ವೀಕ್ಷಿಸಿದರು. ಕೆಲವೇ ನಿಮಿಷಗಳಲ್ಲಿ ಕಾಡುಕೋಣ ತೋಟಗಳ ಮಧ್ಯೆ ತೂರಿ ಅಲ್ಲಿಂದ ಹೊರಟು ಹೋಗಿದೆ.
ಈ ಪ್ರದೇಶದಲ್ಲಿ ಎಂದೂ ಕಾಡೆಮ್ಮೆಗಳು ಕಾಡುಕೋಣಗಳು ಕಂಡುಬಂದಿಲ್ಲ. ಇದು ಬಹುಶಃ ದಾರಿ ತಪ್ಪಿ ಈ ಕಡೆ ಬಂದಿರಬೇಕು ಎಂದು ರೈತರು ಮಾತಾಡಿಕೊಂಡರು.