ರಾಘವೇಂದ್ರ ಕೋರ ಹೋಬಳಿಯ ಜಿ.ಬೊಮ್ಮನಹಳ್ಳಿಯ ನಿವಾಸಿ. ಯಲ್ಲಾಪುರ ಹತ್ತಿರದ ರೈಸ್ಮಿಲ್ನಲ್ಲಿ ಕೆಲಸ ಮಾಡುತ್ತಿದ್ದರು. ತುಮಕೂರಿನಿಂದ ಬೈಕ್ನಲ್ಲಿ ಬೊಮ್ಮನಹಳ್ಳಿಗೆ ಹೋಗುವಾಗ ಮಧುಗಿರಿ ಕಡೆಯಿಂದ ಬಂದ ಟ್ಯಾಂಕರ್ ಡಿಕ್ಕಿಯಾಗಿದೆ. ಅಪಘಾತದ ನಂತರ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.