<p><strong>ತುಮಕೂರು</strong>: ಪ್ರಧಾನಿ ನರೇಂದ್ರ ಮೋದಿ ಅವರು ಮೇ 5ರಂದು ಚುನಾವಣಾ ಪ್ರಚಾರಕ್ಕೆ ಬರುತ್ತಿರುವುದರಿಂದ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿವೆ.</p>.<p>ಪ್ರಧಾನಿ ಭೇಟಿ ಪ್ರಯುಕ್ತ ಕೇಂದ್ರದ ವಿಶೇಷ ರಕ್ಷಣಾ ತಂಡ (ಎಸ್ಪಿಜಿ) ಸಮಾರಂಭ ನಡೆಯುವ ಸ್ಥಳ, ವಿಶ್ವವಿದ್ಯಾನಿಲಯದ ಆವರಣದಲ್ಲಿನ ಹೆಲಿಪ್ಯಾಡ್ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸುಪರ್ದಿಗೆ ಪಡೆದಿದ್ದಾರೆ.</p>.<p>ಗುರುವಾರ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕೇಂದ್ರದ ವಿಶೇಷ ರಕ್ಷಣಾ ತಂಡದ (ಎಸ್ಪಿಜಿ) ಸಿಬ್ಬಂದಿ ಕಣ್ಣಲ್ಲಿ ಕಣ್ಣಿಟ್ಟು ತಪಾಸಣೆ ನಡೆಸಿದರು. ಮೆಟಲ್ ಡಿಟೆಕ್ಟರ್ ಉಪಕರಣದಿಂದ ವೇದಿಕೆ, ಸಭಿಕರಿಗೆ ಆಸನಗಳನ್ನು ಹಾಕುವ ಸ್ಥಳ, ಕ್ರೀಡಾಂಗಣದ ರಕ್ಷಣಾ ಗೋಡೆ ಸೇರಿದಂತೆ ಎಲ್ಲ ಕಡೆ ಪರಿಶೀಲನೆ ನಡೆಸಿದರು.</p>.<p>ಕ್ರೀಡಾಂಗಣದ ಮುಂದಿನ ರಸ್ತೆ, ವಿಶ್ವವಿದ್ಯಾನಿಲಯದ ಹೆಲಿಪ್ಯಾಡ್ ಇರುವ ಪ್ರದೇಶದಲ್ಲೂ ಪರಿಶೀಲನೆ ನಡೆಸಿದರು. ಹೆಲಿಪ್ಯಾಡ್ನಿಂದ ಪ್ರಧಾನಿ ಸಮಾರಂಭ ನಡೆಯುವ ಸ್ಥಳಕ್ಕೆ ಬರುವ ಮಾರ್ಗ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯ ಗೋಪಿನಾಥ್ ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚಿಸಿದರು.</p>.<p>ಕಾರ್ಯಕರ್ತರಿಗೆ, ಪಕ್ಷದ ಮುಖಂಡರಿಗೆ, ಸಾರ್ವಜನಿಕರಿಗೆ ಕ್ರೀಡಾಂಗಣದಲ್ಲಿ ಪ್ರವೇಶಕ್ಕೆ ಎಲ್ಲೆಲ್ಲಿ ಮಾರ್ಗ ಕಲ್ಪಿಸಬೇಕು, ವಾಹನ ನಿಲುಗಡೆ ಸ್ಥಳ, ಸಂಚಾರ ಮಾರ್ಗ ಬದಲಾವಣೆ ಕುರಿತೂ ನೀಲನಕ್ಷೆ ಹಿಡಿದು ಚರ್ಚೆ ನಡೆಸಿದರು.</p>.<p><strong>ಹಾರಾಡಿದ ಹೆಲಿಕಾಪ್ಟರ್ಗಳು:</strong> ಅಲ್ಲದೇ, ಗುರುವಾರ ಮಧ್ಯಾಹ್ನವೇ ನಗರದಲ್ಲಿ ಹೆಲಿಕಾಪ್ಟರ್ಗಳು ನಗರದಲ್ಲಿ ಕೆಲ ಹೊತ್ತು ಅಭ್ಯಾಸ (ರಿಹರ್ಸಲ್) ನಡೆಸಿದವು. ಹೆಲಿಕಾಪ್ಟರ್ಗಳು ಆಕಾಶದಿಂದ ಅತ್ಯಂತ ಕೆಳ ಮಟ್ಟದಲ್ಲಿಯೇ ಹಾರಾಡಿದವು. ಇದರಿಂದ ನಗರದ ಜನರು ಪ್ರಧಾನಿ ಆಗಮನ ಇಂದೊ ನಾಳೆಯೊ ಎಂಬಂತೆ ಗೊಂದಲಕ್ಕೀಡಾದರು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಪ್ರಧಾನಿ ನರೇಂದ್ರ ಮೋದಿ ಅವರು ಮೇ 5ರಂದು ಚುನಾವಣಾ ಪ್ರಚಾರಕ್ಕೆ ಬರುತ್ತಿರುವುದರಿಂದ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿವೆ.</p>.<p>ಪ್ರಧಾನಿ ಭೇಟಿ ಪ್ರಯುಕ್ತ ಕೇಂದ್ರದ ವಿಶೇಷ ರಕ್ಷಣಾ ತಂಡ (ಎಸ್ಪಿಜಿ) ಸಮಾರಂಭ ನಡೆಯುವ ಸ್ಥಳ, ವಿಶ್ವವಿದ್ಯಾನಿಲಯದ ಆವರಣದಲ್ಲಿನ ಹೆಲಿಪ್ಯಾಡ್ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸುಪರ್ದಿಗೆ ಪಡೆದಿದ್ದಾರೆ.</p>.<p>ಗುರುವಾರ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕೇಂದ್ರದ ವಿಶೇಷ ರಕ್ಷಣಾ ತಂಡದ (ಎಸ್ಪಿಜಿ) ಸಿಬ್ಬಂದಿ ಕಣ್ಣಲ್ಲಿ ಕಣ್ಣಿಟ್ಟು ತಪಾಸಣೆ ನಡೆಸಿದರು. ಮೆಟಲ್ ಡಿಟೆಕ್ಟರ್ ಉಪಕರಣದಿಂದ ವೇದಿಕೆ, ಸಭಿಕರಿಗೆ ಆಸನಗಳನ್ನು ಹಾಕುವ ಸ್ಥಳ, ಕ್ರೀಡಾಂಗಣದ ರಕ್ಷಣಾ ಗೋಡೆ ಸೇರಿದಂತೆ ಎಲ್ಲ ಕಡೆ ಪರಿಶೀಲನೆ ನಡೆಸಿದರು.</p>.<p>ಕ್ರೀಡಾಂಗಣದ ಮುಂದಿನ ರಸ್ತೆ, ವಿಶ್ವವಿದ್ಯಾನಿಲಯದ ಹೆಲಿಪ್ಯಾಡ್ ಇರುವ ಪ್ರದೇಶದಲ್ಲೂ ಪರಿಶೀಲನೆ ನಡೆಸಿದರು. ಹೆಲಿಪ್ಯಾಡ್ನಿಂದ ಪ್ರಧಾನಿ ಸಮಾರಂಭ ನಡೆಯುವ ಸ್ಥಳಕ್ಕೆ ಬರುವ ಮಾರ್ಗ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯ ಗೋಪಿನಾಥ್ ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚಿಸಿದರು.</p>.<p>ಕಾರ್ಯಕರ್ತರಿಗೆ, ಪಕ್ಷದ ಮುಖಂಡರಿಗೆ, ಸಾರ್ವಜನಿಕರಿಗೆ ಕ್ರೀಡಾಂಗಣದಲ್ಲಿ ಪ್ರವೇಶಕ್ಕೆ ಎಲ್ಲೆಲ್ಲಿ ಮಾರ್ಗ ಕಲ್ಪಿಸಬೇಕು, ವಾಹನ ನಿಲುಗಡೆ ಸ್ಥಳ, ಸಂಚಾರ ಮಾರ್ಗ ಬದಲಾವಣೆ ಕುರಿತೂ ನೀಲನಕ್ಷೆ ಹಿಡಿದು ಚರ್ಚೆ ನಡೆಸಿದರು.</p>.<p><strong>ಹಾರಾಡಿದ ಹೆಲಿಕಾಪ್ಟರ್ಗಳು:</strong> ಅಲ್ಲದೇ, ಗುರುವಾರ ಮಧ್ಯಾಹ್ನವೇ ನಗರದಲ್ಲಿ ಹೆಲಿಕಾಪ್ಟರ್ಗಳು ನಗರದಲ್ಲಿ ಕೆಲ ಹೊತ್ತು ಅಭ್ಯಾಸ (ರಿಹರ್ಸಲ್) ನಡೆಸಿದವು. ಹೆಲಿಕಾಪ್ಟರ್ಗಳು ಆಕಾಶದಿಂದ ಅತ್ಯಂತ ಕೆಳ ಮಟ್ಟದಲ್ಲಿಯೇ ಹಾರಾಡಿದವು. ಇದರಿಂದ ನಗರದ ಜನರು ಪ್ರಧಾನಿ ಆಗಮನ ಇಂದೊ ನಾಳೆಯೊ ಎಂಬಂತೆ ಗೊಂದಲಕ್ಕೀಡಾದರು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>