<p><strong>ಢಾಕಾ</strong>: ಭಾರತದಿಂದ ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸಬೇಕೆಂಬ ಬೇಡಿಕೆಯನ್ನು ಮರುಪರಿಶೀಲಿಸುವಂತೆ ಐಸಿಸಿ ಮಂಗಳವಾರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ (ಬಿಸಿಬಿ) ‘ಮನವಿ’ ಮಾಡಿತು. ಆದರೆ ಇದಕ್ಕೆ ಬಗ್ಗದ ಮಂಡಳಿಯು ‘ಭದ್ರತೆಯ ಬಗ್ಗೆ ಕಳವಳ’ವನ್ನು ಪುನರುಚ್ಚರಿಸಿದೆ.</p><p>ಬೇಡಿಕೆಯನ್ನು ಪರಿಗಣಿಸಲು ಐಸಿಸಿ ಹಿಂದೇಟು ಹಾಕಿದರೂ, ಪಂದ್ಯ ಸ್ಥಳಾಂತರಿಸಬೇಕೆಂಬ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಬಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ. ಸಂಭಾವ್ಯ ಪರಿಹಾರ ಕಂಡುಕೊಳ್ಳಲು ಎರಡೂ ಕಡೆಯಿಂದ (ಬಿಸಿಬಿ–ಐಸಿಸಿ) ಪ್ರಯತ್ನ ಮುಂದುವರಿಯಲಿದೆ ಎಂದೂ ಹೇಳಿದೆ.</p>.<p>ಭದ್ರತಾ ಕಳವಳದ ಕಾರಣ ನೀಡಿ ಭಾರತದಲ್ಲಿ ನಿಗದಿಯಾಗಿರುವ ತನ್ನ ಪಂದ್ಯಗಳ ಸ್ಥಳಾಂತರಕ್ಕೆ ಆಗ್ರಹಿಸಿ ಬಿಸಿಬಿ ಈಗಾಗಲೇ ಐಸಿಸಿಗೆ ಹಲವು ಪತ್ರಗಳನ್ನು ಬರೆದಿದೆ. ಆದರೆ ಫೆ. 7ರಂದು ಆರಂಭವಾಗುವ ಟಿ20 ವಿಶ್ವಕಪ್ಗೆ ಈಗಾಗಲೇ ವೇಳಾಪಟ್ಟಿ ಅಂತಿಮಗೊಂಡಿರುವ ಕಾರಣ ಐಸಿಸಿ ಪಟ್ಟುಸಡಿಲಿಸುವ ಸಾಧ್ಯತೆಯಿಲ್ಲ.</p>.<p>‘ಟೂರ್ನಿಯ ವೇಳಾಪಟ್ಟಿ ಈಗಾಗಲೇ ಅಂತಿಮಗೊಂಡಿದೆ ಎಂಬುದನ್ನು ಐಸಿಸಿ ಒತ್ತಿ ಹೇಳಿದ್ದು, ನಿಲುವನ್ನು ಬದಲಾಯಿಸಲು ಬಿಸಿಬಿಗೆ ಮನವಿ ಮಾಡಿದೆ. ಆದರೆ ಬಿಸಿಬಿ ಬೇಡಿಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಸಂಭಾವ್ಯ ಪರಿಹಾರ ಸೂತ್ರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಾಲೋಚನೆ ಮುಂದುವರಿಸಲು ಇತ್ತಂಡಗಳೂ ಒಪ್ಪಿಕೊಂಡಿವೆ’ ಎಂದು ಬಿಸಿಬಿ ಹೇಳಿದೆ.</p>.<p>ಭಾರತದಲ್ಲಿ ಆಡಲು ತೆರಳುವುದು ಭದ್ರತಾದೃಷ್ಟಿಯಿಂದ ತನ್ನ ಆಟಗಾರರಿಗೆ ಸುರಕ್ಷಿತವಲ್ಲ ಎಂದು ಬಿಸಿಬಿ ಹೇಳುತ್ತಿದೆ. ಆದರೆ ಭದ್ರತೆಗೆ ಸಂಬಂಧಿಸಿ ಐಸಿಸಿ ನಡೆಸಿದ ತಜ್ಞರ ಮೌಲ್ಯಮಾಪನದಲ್ಲಿ ಬಾಂಗ್ಲಾ ತಂಡವು ಭಾರತದಲ್ಲಿ ಆಡಿದರೆ ಅಪಾಯದ ಸನ್ನಿವೇಶ ಎದುರಾಗುವ ಸಾಧ್ಯತೆಯಿಲ್ಲ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ</strong>: ಭಾರತದಿಂದ ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸಬೇಕೆಂಬ ಬೇಡಿಕೆಯನ್ನು ಮರುಪರಿಶೀಲಿಸುವಂತೆ ಐಸಿಸಿ ಮಂಗಳವಾರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ (ಬಿಸಿಬಿ) ‘ಮನವಿ’ ಮಾಡಿತು. ಆದರೆ ಇದಕ್ಕೆ ಬಗ್ಗದ ಮಂಡಳಿಯು ‘ಭದ್ರತೆಯ ಬಗ್ಗೆ ಕಳವಳ’ವನ್ನು ಪುನರುಚ್ಚರಿಸಿದೆ.</p><p>ಬೇಡಿಕೆಯನ್ನು ಪರಿಗಣಿಸಲು ಐಸಿಸಿ ಹಿಂದೇಟು ಹಾಕಿದರೂ, ಪಂದ್ಯ ಸ್ಥಳಾಂತರಿಸಬೇಕೆಂಬ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಬಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ. ಸಂಭಾವ್ಯ ಪರಿಹಾರ ಕಂಡುಕೊಳ್ಳಲು ಎರಡೂ ಕಡೆಯಿಂದ (ಬಿಸಿಬಿ–ಐಸಿಸಿ) ಪ್ರಯತ್ನ ಮುಂದುವರಿಯಲಿದೆ ಎಂದೂ ಹೇಳಿದೆ.</p>.<p>ಭದ್ರತಾ ಕಳವಳದ ಕಾರಣ ನೀಡಿ ಭಾರತದಲ್ಲಿ ನಿಗದಿಯಾಗಿರುವ ತನ್ನ ಪಂದ್ಯಗಳ ಸ್ಥಳಾಂತರಕ್ಕೆ ಆಗ್ರಹಿಸಿ ಬಿಸಿಬಿ ಈಗಾಗಲೇ ಐಸಿಸಿಗೆ ಹಲವು ಪತ್ರಗಳನ್ನು ಬರೆದಿದೆ. ಆದರೆ ಫೆ. 7ರಂದು ಆರಂಭವಾಗುವ ಟಿ20 ವಿಶ್ವಕಪ್ಗೆ ಈಗಾಗಲೇ ವೇಳಾಪಟ್ಟಿ ಅಂತಿಮಗೊಂಡಿರುವ ಕಾರಣ ಐಸಿಸಿ ಪಟ್ಟುಸಡಿಲಿಸುವ ಸಾಧ್ಯತೆಯಿಲ್ಲ.</p>.<p>‘ಟೂರ್ನಿಯ ವೇಳಾಪಟ್ಟಿ ಈಗಾಗಲೇ ಅಂತಿಮಗೊಂಡಿದೆ ಎಂಬುದನ್ನು ಐಸಿಸಿ ಒತ್ತಿ ಹೇಳಿದ್ದು, ನಿಲುವನ್ನು ಬದಲಾಯಿಸಲು ಬಿಸಿಬಿಗೆ ಮನವಿ ಮಾಡಿದೆ. ಆದರೆ ಬಿಸಿಬಿ ಬೇಡಿಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಸಂಭಾವ್ಯ ಪರಿಹಾರ ಸೂತ್ರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಾಲೋಚನೆ ಮುಂದುವರಿಸಲು ಇತ್ತಂಡಗಳೂ ಒಪ್ಪಿಕೊಂಡಿವೆ’ ಎಂದು ಬಿಸಿಬಿ ಹೇಳಿದೆ.</p>.<p>ಭಾರತದಲ್ಲಿ ಆಡಲು ತೆರಳುವುದು ಭದ್ರತಾದೃಷ್ಟಿಯಿಂದ ತನ್ನ ಆಟಗಾರರಿಗೆ ಸುರಕ್ಷಿತವಲ್ಲ ಎಂದು ಬಿಸಿಬಿ ಹೇಳುತ್ತಿದೆ. ಆದರೆ ಭದ್ರತೆಗೆ ಸಂಬಂಧಿಸಿ ಐಸಿಸಿ ನಡೆಸಿದ ತಜ್ಞರ ಮೌಲ್ಯಮಾಪನದಲ್ಲಿ ಬಾಂಗ್ಲಾ ತಂಡವು ಭಾರತದಲ್ಲಿ ಆಡಿದರೆ ಅಪಾಯದ ಸನ್ನಿವೇಶ ಎದುರಾಗುವ ಸಾಧ್ಯತೆಯಿಲ್ಲ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>