ಇಲ್ಲಿನ ಕೆಲವೊಂದು ಹೋಟೆಲ್ಗಳ ಕೊಳಚೆ ನೀರು ಚರಂಡಿಗಳಿಗೆ ಹರಿಯಬಿಡಲಾಗುತ್ತಿದೆ. ಚರಂಡಿಯಲ್ಲಿ ಹರಿಯುವ ನೀರು ದೇವಸ್ಥಾನಕ್ಕೆ ತೆರಳುವ ಮುಖ್ಯದ್ವಾರದ ಬಳಿ ಇರುವ ಗುಂಡಿಯಲ್ಲಿ ಸಂಗ್ರಹವಾಗುತ್ತಿದೆ. ಮಳೆಗಾಲದಲ್ಲಿಯೂ ಇಲ್ಲಿ ನೀರು ಹರಿಯುತ್ತಿದ್ದು, ಜನ ಅದರಲ್ಲಿಯೇ ಸಂಚರಿಸಬೇಕಾದ ಪ್ರಸಂಗ ಎದುರಾಗಿತ್ತು. ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಕೊಳಚೆನೀರು ತುಂಬಿರುವುದರಿಂದ ಕಾಮಗಾರಿ ಮಾಡಲು ತೊಂದರೆಯಾಗುತ್ತಿದೆ ಎಂದು ಗುತ್ತಿಗೆದಾರ ಕಂಪೆನಿಯ ಎಂಜನಿಯರ್ಗಳು ದೂರಿದ್ದಾರೆ.