ರಥಬೀದಿಯಲ್ಲಿ ಭಕ್ತಸಾಗರ: ರಥಬೀದಿಯ ತುಂಬೆಲ್ಲ ಭಕ್ತರ ಕಲರವ ತುಂಬಿದ್ದು, ಜಾತ್ರೆಯಂತೆ ಭಾಸವಾಗುತ್ತಿದೆ. ಹೂ, ಹಣ್ಣು, ಸಿಹಿ ತಿನಿಸು, ಪೂಜಾ ಸಾಮಾಗ್ರಿ, ಬಟ್ಟೆ ವ್ಯಾಪಾರಿಗಳ ಗದ್ದಲ ಜೋರಾಗಿದೆ. ಕೃಷ್ಣನ ದರ್ಶನ ಪಡೆದ ಭಕ್ತರು ರಥಬೀದಿಯನ್ನು ಸುತ್ತುಹಾಕಿ ಸಂಭ್ರಮ ಪಡುತ್ತಿದ್ದ ದೃಶ್ಯ ಕಂಡುಬಂತು. ಭಕ್ತರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಷ್ಟಮಿಯ ಪ್ರಸಾದ ವಿತರಿಸಲಾಯಿತು.