ಉಡುಪಿ: ಪರ್ಕಳ ಹೆರ್ಗ ಬಳಿಯ ಪ್ರಸಾದ್ ಕಾಲೋನಿಯ 5ನೇ ಕ್ರಾಸ್ನಲ್ಲಿ ಕೋಣವೊಂದು ಮೃತಪಟ್ಟಿದ್ದು ಸ್ಥಳೀಯರು ಚಿರತೆ ದಾಳಿಯ ಸಂಶಯ ವ್ಯಕ್ತಪಡಿಸಿದ್ದಾರೆ.
ಕೋಣದ ಹೊಟ್ಟೆ, ಕಾಲು, ಕಿವಿಯ ಭಾಗದಲ್ಲಿ ಗಾಯಗಳಾಗಿದ್ದು, ಕುತ್ತಿಗೆಯ ಭಾಗದಲ್ಲಿ ಹಲ್ಲಿನ ಗುರುತುಗಳಿವೆ. ಚಿರತೆ ಬೇಟೆಯಾಡಿ ಬಿಟ್ಟುಹೋಗಿರಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕೋಣ ಕರುಣಾಕರ ಪೂಜಾರಿ ಅವರಿಗೆ ಸೇರಿದೆ. ಈ ಹಿಂದೆಯೂ ಈ ಭಾಗದಲ್ಲಿ ಚಿರತೆ ನಾಯಿಗಳನ್ನು ಹೊತ್ತೊಯ್ದಿತ್ತು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ತಿಳಿದ್ದಾರೆ.