ನಮ್ಮನ್ನು ಬಿಟ್ಟುಬಿಡಿ:‘ನಾವು ಬಂಟ್ವಾಳ ತಾಲ್ಲೂಕಿನ ಬಿಸಿರೋಡ್ನ ಬಾಡಿಗೆ ಕೋಣೆಯಲ್ಲಿ ವಾಸವಿದ್ದು, ಸ್ಥಳೀಯವಾಗಿ ಕೂಲಿ ಮಾಡಿಕೊಂಡಿದ್ದೆವು. ತಮ್ಮ ಊರಿಗೆ ಮರಳಲು ಪಾದಯಾತ್ರೆ ಹೊರಟಿದ್ದೇವೆ. ನಮ್ಮನ್ನು ನಮ್ಮ ಊರಿಗೆ ತೆರಳಲು ಬಿಡಿ. ನಾವು ಅಲ್ಲಿಯೇ ಆರಾಮವಾಗಿ ಇರುತ್ತೇವೆ. ಇಲ್ಲದಿದ್ದಲ್ಲಿ ನಮ್ಮದೇ ಬಾಡಿಗೆ ಮನೆ ಬಿಸಿರೋಡ್ನಲ್ಲಿ ಇದೆ. ಅಲ್ಲಿಗೆ ಬಿಡಿ. ಅಲ್ಲಿಂದ ನೀವು ಹೇಳುವವರೆಗೂ ಹೊರಗೆ ಬರುವುದಿಲ್ಲ. ನಾವು ಕದ್ರಿಯ ಗಂಜಿ ಕೇಂದ್ರಕ್ಕೆ ಹೋಗುವುದಿಲ್ಲ. ಈ ವಾಹನದಲ್ಲೇ ಒಟ್ಟಿಗೆ ಹಾಕಿದ್ದೀರಿ. ಅಲ್ಲಿ ಇನ್ನಷ್ಟು ಜನರ ಜೊತೆ ಇರಿಸುತ್ತಾರೆ’ ಎಂದು ಕೂಲಿ ಕಾರ್ಮಿಕರು ಕಣ್ಣೀರು ಸುರಿಸಿ ಅಲವತ್ತುಕೊಂಡರೂ ಸ್ಪಂದನೆ ಸಿಗಲಿಲ್ಲ.