ಉಡುಪಿ: ತಾಲ್ಲೂಕಿನ ತೆಂಕನಿಡಿಯೂರು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಶನಿವಾರ ಭೇಟಿನೀಡಿದ ಡಿಡಿಪಿಐ ಎನ್.ಎಚ್.ನಾಗೂರ ಮಕ್ಕಳ ಕಲಿಕಾ ಪ್ರಗತಿ ಪರಿಶೀಲಿಸಿ, ಮಧ್ಯಾಹ್ನದ ಬಿಸಿಯೂಟದ ರುಚಿ ನೋಡಿದರು.
ಶಾಲಾ ಭೇಟಿವೇಳೆ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದಿ ಡಿಡಿಪಿಐ ಶಾಲೆಗಳು ಆರಂಭವಾಗಿದ್ದು ಉತ್ತಮ ಅಧ್ಯಯನ ಮಾಡುವಂತೆ ತಿಳಿ ಹೇಳಿದರು. ಬಳಿಕ ಪೋಷಕರೊಂದಿಗೂ ಸಮಾಲೋಚನೆ ನಡೆಸಿ ಮಕ್ಕಳನ್ನು ಸೋಮವಾರದಿಂದ ಶಾಲೆಗೆ ಕಳಿಸಲು ಮನವಿ ಮಾಡಿದರು.
ತರಗತಿಯೊಳಗೆ ಕುಳಿತು ಶಿಕ್ಷಕರ ಬೋಧನಾ ವಿಧಾನವನ್ನು ಪರಿಶೀಲಿಸಿ ಶೈಕ್ಷಣಿಕ ದಾಖಲೆಗಳನ್ನು ಸರಿಯಾಇ ನಿರ್ವಹಿಸುವಂತೆ ಸೂಚನೆ ನೀಡಿದರು. ಶಾಲಾ ಮಕ್ಕಳಿಗೆ ಹೆಚ್ಚು ಕಲಿಕಾ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಕಲಿಕಾ ದೃಢೀಕರಣಕ್ಕೆ ಸೂಚಿಸಿದರು.